Don't Miss!
- Lifestyle ಎಲೆಕೋಸಿಗೆ ಕೆಮಿಕಲ್ ಮಿಶ್ರಣ ಮಾಡ್ತಾರೆ ಹುಷಾರ್..! ವಿಡಿಯೋ ವೈರಲ್..!
- News ಉಚಿತ ಉಪಹಾರದಿಂದ ಉಚಿತ ದಂತ ತಪಾಸಣೆವರೆಗೆ; ಮತದಾನ ಮಾಡಿದವರಿಗೆ ಭರ್ಜರಿ ಆಫರ್ ಕೊಟ್ಟ ಮೈಸೂರು ವ್ಯಾಪಾರಸ್ಥರು
- Automobiles HSRP ನಂಬರ್ ಪ್ಲೇಟ್ನಲ್ಲಿ ನಡೆಯುತ್ತಿದೆ ಭಾರೀ ಮೋಸ: ಬುಕ್ ಮಾಡದವರು ಇದನ್ನು ಗಮನಿಸಿ!
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Sports IPL 2024: ಎಸ್ಆರ್ಹೆಚ್ ಸಂಘಟಿತ ಆಟಕ್ಕೆ ಬ್ರೇಕ್ ಹಾಕಲು ಆರ್ಸಿಬಿ ಏನು ಮಾಡಬೇಕು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ನಮ್ಮ ಬಾಳಿನ ಜೊತೆ ಚೆಲ್ಲಾಟವಾಡಬೇಡಿ, ದುನಿಯಾ ವಿಜಯ್
ಚಿತ್ರಕ್ಕೆ ಹಾಕಿದ ದುಡ್ಡನ್ನು ಒಂದೇ ವಾರದಲ್ಲಿ ಬಾಚಿಕೊಳ್ಳಬೇಕೆಂದು ಕೆಲವೊಂದು ವಿತರಕರು ನೂರಕ್ಕೂ ಹೆಚ್ಚು ಚಿತ್ರಮಂದಿರದಲ್ಲಿ ಚಿತ್ರ ಬಿಡುಗಡೆ ಮಾಡುತ್ತಾರೆ. ಎರಡನೇ ವಾರಕ್ಕೆ ಅರ್ಧಕ್ಕರ್ಧ ಚಿತ್ರಮಂದಿರದಲ್ಲಿ ತೆಗೆದು ಬಿಡುತ್ತಾರೆ.
ಒಂದೇ ಚಿತ್ರವನ್ನು ಅಕ್ಕಪಕ್ಕದ ಚಿತ್ರಮಂದಿರದಲ್ಲಿ ಪ್ರದರ್ಶಿಸಿದರೆ ಚಿತ್ರ ಎಲ್ಲಿಂದ ಓಡುತ್ತೆ? ನಿಮ್ಮ ವ್ಯವಹಾರದಲ್ಲಿ ನಮ್ಮ ಬಾಳು ಅಡಗಿದೆ ಸ್ವಾಮಿ, ಒಮ್ಮೆಲೇ ದುಡ್ಡು ಬಾಚಿಕೊಳ್ಳಲು ಹೋಗಿ ನಮ್ಮನ್ನು ಮಲಗಿಸಬೇಡಿ ಎಂದು ದುನಿಯಾ ವಿಜಯ್ ಖಾರವಾಗಿ ನುಡಿದಿದ್ದಾರೆ.
ಬಿಡುಗಡೆಗೆ ಸನ್ನದ್ದವಾಗಿರುವ ದುನಿಯಾ ವಿಜಯ್, ಐಂದ್ರಿತಾ ಪ್ರಮುಖ ಭೂಮಿಕೆಯ 'ರಜನಿ ಕಾಂತ' ಚಿತ್ರದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದ ವಿಜಯ್, ದಯವಿಟ್ಟು ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಬೇಡಿ. ಕಮ್ಮಿ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಿ. ಚಿತ್ರಕ್ಕೆ ಒಳ್ಳೆಯ ಪ್ರಮೋಷನ್ ಕೊಡಿ ಎಂದು ವಿಜಯ್ ನಿರ್ಮಾಪಕ ಕೆ ಮಂಜು ಮತ್ತು ವಿತರಕ ಪ್ರಸಾದ್ ಬಳಿ ಮನವಿ ಮಾಡಿದ್ದಾರೆ.
ಕನ್ನಡ ಚಿತ್ರರಂಗ ನಾನು ಬಿಡುತ್ತೇನೆ, ನನಗೆ ಇಲ್ಲಿ ಸಾಕಾಗಿ ಹೋಗಿದೆ ಎಂದು ಕೆಲವೇ ತಿಂಗಳಿನ ಹಿಂದೆ ವಿತರಕ ಪ್ರಸಾದ್ ಕನ್ನಡ ಚಿತ್ರರಂಗದಿಂದ ದೂರವಾಗಿದ್ದರು. ಈಗ ಸ್ನೇಹಿತ ಕೆ ಮಂಜು ಕರೆಗೆ ಓಗೊಟ್ಟು ಮತ್ತೆ ವಿತರಕರಾಗಿ ವಾಪಾಸ್ಸಾಗಿದ್ದಾರೆ.