Don't Miss!
- Sports CSK vs LSG IPL 2024: ಮಾರ್ಕಸ್ ಸ್ಟೋಯಿನಿಸ್ ಆರ್ಭಟಕ್ಕೆ ಸಿಎಸ್ಕೆ ಥಂಡಾ; ಚೆನ್ನೈಗೆ ನೀರು ಕುಡಿಸಿದ ಲಕ್ನೋ
- News ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ: ಕಾರಣ ತಿಳಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್
- Lifestyle ಈ ಕಾರಣಕ್ಕೆ ನೀವು ಮಾವಿನ ಹಣ್ಣನ್ನು ನೀರಿನಲ್ಲಿ ನೆನೆಹಾಕಿಯೇ ತಿನ್ನಬೇಕು, ಅದು ನಿಮ್ಮ ತೋಟದಲ್ಲಿ ಬೆಳೆದಿದ್ದೇ ಆಗಿರಲಿ
- Automobiles ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ನಮ್ಮ ಬಾಳಿನ ಜೊತೆ ಚೆಲ್ಲಾಟವಾಡಬೇಡಿ, ದುನಿಯಾ ವಿಜಯ್
ಚಿತ್ರಕ್ಕೆ ಹಾಕಿದ ದುಡ್ಡನ್ನು ಒಂದೇ ವಾರದಲ್ಲಿ ಬಾಚಿಕೊಳ್ಳಬೇಕೆಂದು ಕೆಲವೊಂದು ವಿತರಕರು ನೂರಕ್ಕೂ ಹೆಚ್ಚು ಚಿತ್ರಮಂದಿರದಲ್ಲಿ ಚಿತ್ರ ಬಿಡುಗಡೆ ಮಾಡುತ್ತಾರೆ. ಎರಡನೇ ವಾರಕ್ಕೆ ಅರ್ಧಕ್ಕರ್ಧ ಚಿತ್ರಮಂದಿರದಲ್ಲಿ ತೆಗೆದು ಬಿಡುತ್ತಾರೆ.
ಒಂದೇ ಚಿತ್ರವನ್ನು ಅಕ್ಕಪಕ್ಕದ ಚಿತ್ರಮಂದಿರದಲ್ಲಿ ಪ್ರದರ್ಶಿಸಿದರೆ ಚಿತ್ರ ಎಲ್ಲಿಂದ ಓಡುತ್ತೆ? ನಿಮ್ಮ ವ್ಯವಹಾರದಲ್ಲಿ ನಮ್ಮ ಬಾಳು ಅಡಗಿದೆ ಸ್ವಾಮಿ, ಒಮ್ಮೆಲೇ ದುಡ್ಡು ಬಾಚಿಕೊಳ್ಳಲು ಹೋಗಿ ನಮ್ಮನ್ನು ಮಲಗಿಸಬೇಡಿ ಎಂದು ದುನಿಯಾ ವಿಜಯ್ ಖಾರವಾಗಿ ನುಡಿದಿದ್ದಾರೆ.
ಬಿಡುಗಡೆಗೆ ಸನ್ನದ್ದವಾಗಿರುವ ದುನಿಯಾ ವಿಜಯ್, ಐಂದ್ರಿತಾ ಪ್ರಮುಖ ಭೂಮಿಕೆಯ 'ರಜನಿ ಕಾಂತ' ಚಿತ್ರದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದ ವಿಜಯ್, ದಯವಿಟ್ಟು ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಬೇಡಿ. ಕಮ್ಮಿ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಿ. ಚಿತ್ರಕ್ಕೆ ಒಳ್ಳೆಯ ಪ್ರಮೋಷನ್ ಕೊಡಿ ಎಂದು ವಿಜಯ್ ನಿರ್ಮಾಪಕ ಕೆ ಮಂಜು ಮತ್ತು ವಿತರಕ ಪ್ರಸಾದ್ ಬಳಿ ಮನವಿ ಮಾಡಿದ್ದಾರೆ.
ಕನ್ನಡ ಚಿತ್ರರಂಗ ನಾನು ಬಿಡುತ್ತೇನೆ, ನನಗೆ ಇಲ್ಲಿ ಸಾಕಾಗಿ ಹೋಗಿದೆ ಎಂದು ಕೆಲವೇ ತಿಂಗಳಿನ ಹಿಂದೆ ವಿತರಕ ಪ್ರಸಾದ್ ಕನ್ನಡ ಚಿತ್ರರಂಗದಿಂದ ದೂರವಾಗಿದ್ದರು. ಈಗ ಸ್ನೇಹಿತ ಕೆ ಮಂಜು ಕರೆಗೆ ಓಗೊಟ್ಟು ಮತ್ತೆ ವಿತರಕರಾಗಿ ವಾಪಾಸ್ಸಾಗಿದ್ದಾರೆ.