Don't Miss!
- Sports ಕಮಿನ್ಸ್ ಟೆನ್ಷನ್ ಹೆಚ್ಚಿಸಿದ ಸ್ಟಾರ್ ಪ್ಲೇಯರ್ ನಿರ್ಧಾರ: ಎಸ್ಆರ್ಎಚ್ ತಂಡಕ್ಕೆ ಆರಂಭದಲ್ಲೇ ಪೆಟ್ಟು
- Lifestyle ಪಳ ಪಳ ಹೊಳೆಯುವ ಕೆಂಪು ನಾಗರ ನೋಡಿದ್ದೀರಾ..? ವೈರಲ್ ಆಗ್ತಿದೆ ವಿಡಿಯೋ..!
- Technology ಬಹುನಿರೀಕ್ಷಿತ ರಿಯಲ್ಮಿ ನಾರ್ಜೋ 70 ಪ್ರೊ 5G ಲಾಂಚ್!..ಇಯರ್ಬಡ್ಸ್ ಉಚಿತ!
- News ಜಗದೀಶ್ ಶೆಟ್ಟರ್ಗೆ ಬೆಳಗಾವಿ ಸ್ಪರ್ಧೆ ಮತ್ತಷ್ಟು ಜಟೀಲ: ಗೋಬ್ಯಾಕ್ ಅಭಿಯಾನ ಯಶಸ್ವಿ ಆಯ್ತಾ?
- Automobiles ನಟ ವಿಜಯ್ ನೋಡಲು ಬಂದ ಜನಸಾಗರ: ಅಭಿಮಾನಿಗಳಿಂದ ನಟನ ಕಾರಿಗೆ ಹಾನಿ!
- Finance ಬೆಂಗಳೂರಿನ ಮೇಘನಾ ಫುಡ್ಸ್ ಹೋಟೆಲ್ ಮಳಿಗೆಗಳ ಮೇಲೆ ಐಟಿ ದಾಳಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಕೋಟಿಗೊಬ್ಬ 3' ನಿರ್ಮಾಪಕರ ವಿರುದ್ಧ ಕೊಲೆ ಬೆದರಿಕೆ ಆರೋಪ
ವಿತರಕರ ಸಮಸ್ಯೆಯಿಂದ 'ಕೋಟಿಗೊಬ್ಬ 3' ಸಿನಿಮಾ ಬಿಡುಗಡೆ ಒಂದು ದಿನ ತಡವಾಗಿದ್ದು ದೊಡ್ಡ ಚರ್ಚೆಗೆ ಕಾರಣವಾಗಿದೆ. ಸಿನಿಮಾದ ವಿತರಕರ ಹಿಂದೆ ಯಾರಿದ್ದಾರೆ? ವಿತರಕರು ಏಕೆ ಹೀಗೆ ಮಾಡಿದರು? 'ಕೋಟಿಗೊಬ್ಬ 3'ಗೆ ತೊಂದರೆ ಕೊಡಲು ಯತ್ನಿಸಿದ ಹಿರಿಯ ವಿತರಕ ಯಾರು? ಸುದೀಪ್ ಮುಂದಿನ ನಡೆ ಏನು? ಹಲವು ವಿಷಯಗಳು ಚರ್ಚೆಗೆ ಬರುತ್ತಿವೆ.
ಇಬ್ಬರು ವಿತರಕರು ಬಾಕಿ ಹಣ ನೀಡದ ಕಾರಣ ಸಿನಿಮಾ ಬಿಡುಗಡೆ ಆಗಲಿಲ್ಲವೆಂದು ನಿನ್ನೆಯೇ ಸೂರಪ್ಪ ಬಾಬು ಹೇಳಿದ್ದರು. ಚಿತ್ರದುರ್ಗ ಹಾಗೂ ಮೈಸೂರು ಭಾಗದ ವಿತರಕರು ಬಾಕಿ ಹಣವನ್ನು ಸೂರಪ್ಪ ಬಾಬುಗೆ ನೀಡದ ಕಾರಣ ಸಿನಿಮಾ ಬಿಡುಗಡೆ ಆಗಿರಲಿಲ್ಲ.
ಅಕ್ಟೋಬರ್ 15 ರಂದು ಸಿನಿಮಾ ಬಿಡುಗಡೆ ಆಗಿದ್ದು, ಸಿನಿಮಾ ಒಳ್ಳೆಯ ಪ್ರದರ್ಶನ ಕಾಣುತ್ತಿದೆ. ಈ ನಡುವೆ ನಿರ್ಮಾಪಕ ಸೂರಪ್ಪ ಬಾಬು ತಮಗೆ ಮೋಸ ಮಾಡಿದ ಇಬ್ಬರು ವಿತರಕರ ವಿರುದ್ಧ ದೂರು ನೀಡುವುದಾಗಿ ಹೇಳಿದ್ದಾರೆ. ಇಬ್ಬರು ವಿತರಕರಿಂದ ನನಗೆ 10 ಕೋಟಿ ನಷ್ಟವಾಗಿದೆ ಎಂದು ಸೂರಪ್ಪ ಬಾಬು ಆರೋಪಿಸಿದ್ದಾರೆ. ಈ ನಡುವೆ ಸೂರಪ್ಪ ಬಾಬು ವಿರುದ್ಧವೂ ಆ ಇಬ್ಬರು ವಿತರಕರು ದೂರು ನೀಡಲು ಮುಂದಾಗಿದ್ದಾರೆ.
ಚಿತ್ರದುರ್ಗದ ಖಾಜಾಫೀರ್ ಅವರು ಚಿತ್ರದುರ್ಗ, ಬಳ್ಳಾರಿ, ದಾವಣಗೆರೆಗೆ ವಿತರಣೆ ಮಾಡಲು ಒಪ್ಪಂದ ಮಾಡಿಕೊಂಡಿದ್ದರು. 1.30 ಲಕ್ಷ ರು ಹಣಕ್ಕೆ ಒಪ್ಪಂದ ಮಾಡಿಕೊಂಡಿದ್ದರು. 11 ಲಕ್ಷ ಹಣವನ್ನು ನಿರ್ಮಾಪಕರಿಗೆ ನೀಡಿದ್ದರು ಸಹ ಆದರೆ ಉಳಿದ ಹಣವನ್ನು ನಿರ್ಮಾಪಕರಿಗೆ ನೀಡದ ಕಾರಣ ಅವರಿಗೆ ಲೈಸೆನ್ಸ್ ನೀಡಿರಲಿಲ್ಲ. ಹಾಗಾಗಿ ಸಿನಿಮಾ ಬಿಡುಗಡೆ ಆಗಲಿಲ್ಲ. ಆ ನಂತರ ಆ ಭಾಗದ ವಿತರಣೆಯನ್ನು ಸುದೀಪ್ ಆಪ್ತ ಜಾಕ್ ಮಂಜು ಹಾಗೂ ಎಂ.ಬಿ ಬಾಬು ನೀಡಲಾಗಿದೆ.
ಈಗ ತಾವು ಕೊಟ್ಟಿರುವ ಹಣವನ್ನು ಖಾಜಾಪೀರ್, ಸೂರಪ್ಪ ಬಾಬು ಬಳಿ ವಾಪಸ್ ಕೇಳಿದ್ದಕ್ಕೆ ಆ ಹಣವನ್ನು ತಾವು ವಾಪಸ್ ಕೊಡುವುದಿಲ್ಲ ಎಂದು ಹೇಳಿದ್ದಾರಂತೆ. ಈ ಬಗ್ಗೆ ಮಾತನಾಡಿರುವ ಖಾಜಾಪೀರ್, ''ನಾನು ಕಾಳಿಂಗ ಆಡ್ಸ್ ಮೂಲಕ ರಾಂಬಾಬು ಫಿಲಮ್ಸ್ಗೆ 11 ಲಕ್ಷ ಹಣ ವರ್ಗಾವಣೆ ಮಾಡಿದ್ದೀನಿ. ಅದರ ದಾಖಲೆ ನನ್ನ ಬಳಿ ಇದೆ. ಈಗ ನಾನು ಕೊಟ್ಟಿರುವ ಹಣ ವಾಪಸ್ ಕೇಳಿದ್ದಕ್ಕೆ ಕೊಡುವುದಿಲ್ಲವೆಂದು ಸೂರಪ್ಪ ಬಾಬು ಹೇಳಿದ್ದಾರೆ'' ಎಂದಿದ್ದಾರೆ.
''ವಕೀಲರ ಬಳಿ ಡ್ರಾಫ್ಟ್ ಮಾಡಿಸಿದ್ದೀನಿ ಬಂದು ಸಹಿ ಮಾಡಿ ಹೋಗಿ. ಇಲ್ಲವಾದರೆ ನಿಮಗೆ ಚಿತ್ರದುರ್ಗ ಬಿಡಿಸ್ತೀನಿ'' ಎಂದು ಧಮ್ಕಿ ಹಾಕಿದ್ದಾರೆ ಎಂದಿರುವ ಖಾಜಾಫೀರ್, ''ನೀವು ಕೊಟ್ಟಿರುವ ಹಣ ಯಾವ ಕಾರಣಕ್ಕೂ ವಾಪಸ್ ಬರುವುದಿಲ್ಲ. ದುಡ್ಡು ಕೇಳಿದರೆ ನಾನೇ ಬಂದು ಹೊಡೀತೀನಿ. ಸುದೀಪ್ ಅಭಿಮಾನಿಗಳನ್ನು ಎತ್ತಿಕಟ್ಟಿ ಗಲಾಟೆ ಮಾಡಿಸುತ್ತೀನಿ'' ಎಂದು ಬೆದರಿಕೆ ಹಾಗಿದ್ದಾರೆ ಎಂದು ಖಾಜಾಫೀರ್ ಹೇಳಿದ್ದಾರೆ.
ಖಾಜಾಫೀರ್ಗೆ ಮಾತ್ರವೇ ಅಲ್ಲದೆ ಕುಮಾರ್ ಫಿಲಮ್ಸ್ನ ಕುಮಾರ್ಗೂ ಸೂರಪ್ಪ ಬಾಬು ಬೆದರಿಕೆ ಹಾಕಿದ್ದಾರೆ. ಸೂರಪ್ಪ ಬಾಬು ತಮ್ಮ ಬಳಿ ಮಾತನಾಡಿರುವ ಆಡಿಯೋವನ್ನು ಬಿಡುಗಡೆ ಮಾಡಿದ್ದು, ಚಿತ್ರದುರ್ಗದ ಪೊಲೀಸ್ ಕಮೀಷನರ್ ಕಚೇರಿಯಲ್ಲಿ ಸೂರಪ್ಪ ಬಾಬು ವಿರುದ್ಧ ದೂರು ನೀಡುವುದಾಗಿ ಹೇಳಿದ್ದಾರೆ.