Don't Miss!
- Lifestyle ಹೋಳಿ ದಿನ ಸ್ಕೂಟಿಯಲ್ಲಿ ಟೈಟಾನಿಕ್ ಪೋಸ್ ನೀಡಿ ದೊಪ್ಪೆಂದು ಬಿದ್ದ ಹುಡುಗಿಗೆ ಬಿತ್ತು ದುಬಾರಿ ಫೈನ್
- News ಮಳೆ ಬರದೇ ಇದ್ದರೆ ಮುಗೀತು ಕಥೆ!
- Sports ರೋಹಿತ್ vs ಹಾರ್ದಿಕ್: ಸತತ ಸೋಲಿನ ನಡುವೆಯೇ ಮುಂಬೈ ಇಂಡಿಯನ್ಸ್ ಇಬ್ಭಾಗ!?
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಡಬ್ಬಿಂಗ್ ಸಿನಿಮಾಗಳನ್ನು ತಲೆ ಮೇಲೆ ಹೊತ್ತು ತಿರುಗಬೇಡಿ: ಶಶಾಂಕ್
ನಿರ್ದೇಶಕ ಶಶಾಂಕ್ ಸಾಮಾಜಿಕ ಜಾಲತಾಣದಲ್ಲಿ ಪತ್ರವೊಂದನ್ನು ಪ್ರಕಟಿಸಿದ್ದಾರೆ. ಕೆಲವು ದಿನಗಳ ಹಿಂದೆ ಡಬ್ಬಿಂಗ್ ಸಿನಿಮಾ ಬಗ್ಗೆ ಶಶಾಂಕ್ ಹಾಕಿದ್ದ ಪೋಸ್ಟ್ಗೆ ವಿರೋಧ ವ್ಯಕ್ತವಾಗಿತ್ತು. ಆಗ ಎದ್ದಿದ್ದ ಪ್ರಶ್ನೆಗಳಿಗೆ ಶಶಾಂಕ್ ಈಗ ಪತ್ರದ ಮೂಲಕ ಉತ್ತರ ನೀಡಿದ್ದಾರೆ.
ಸಂಕ್ರಾಂತಿ ಹಬ್ಬಕ್ಕೆ ಕನ್ನಡ ಸಿನಿಮಾಗಳು ಬಿಡುಗಡೆ ಮಾಡಲಾಗದೇ ಇದ್ದದರ ಬಗ್ಗೆ ಪ್ರಶ್ನಿಸಿದ್ದವರಿಗೆ ಉತ್ತರಿಸಿರುವ ಶಶಾಂಕ್, ಸಿನಿಮಾ ಒಂದು ಯಾವಾಗ ಬಿಡುಗಡೆ ಆಗಬೇಕು ಎಂಬುದನ್ನು ಸಿನಿಮಾ ಮೇಲೆ ಕೋಟ್ಯಂತರ ಹಣ ಹೂಡಿರುವ ನಿರ್ಮಾಪಕನ ಹಿತಾಸಕ್ತಿ ಆಧಾರದ ಮೇಲೆ ನಿರ್ಧಾರ ಮಾಡಲಾಗುತ್ತದೆಯೇ ವಿನಃ ಯಾರದ್ದೊ ಟೀಕೆಗಳಿಗೆ ಉತ್ತರಿಸಲು ಅಲ್ಲ ಎಂದು ಖಾರವಾಗಿ ಉತ್ತರಿಸಿದ್ದಾರೆ ಶಶಾಂಕ್.
2010 ರಲ್ಲಿ 'ರಾವನ್' ಸಿನಿಮಾದ ಎದುರು ಕೃಷ್ಣನ್ ಲವ್ ಸ್ಟೋರಿ ಸಿನಿಮಾ ಗೆದ್ದಿತ್ತು. ಬಾಹುಬಲಿ ಎದುರು ರಂಗಿತರಂಗ ಗೆದ್ದಿದೆ. ಪಿಕೆ ಸಿನಿಮಾದ ಎದುರು 'ಮಿಸ್ಟರ್ ಆಂಡ್ ಮಿಸಸ್ ರಾಮಚಾರಿ' ಸಿನಿಮಾಗಳು ಗೆದ್ದಿವೆ ಎನ್ನುವ ಮೂಲಕ ದೊಡ್ಡ ಸಿನಿಮಾಗಳನ್ನು ಎದುರಿಸುವ ತಾಕತ್ತು ಕನ್ನಡ ಸಿನಿಮಾಗಳಿಗೆ ಇಲ್ಲ ಎಂದವರ ಬಾಯಿ ಮುಚ್ಚಿಸಿದ್ದಾರೆ ಶಶಾಂಕ್.
ಪರಭಾಷೆ ಸಿನಿಮಾಗಳು ಕರ್ನಾಟಕದಲ್ಲಿ ಹೆಚ್ಚು ಚಿತ್ರಮಂದಿರದಲ್ಲಿ ಬಿಡುಗಡೆ ಆಗಲು ಕಾರಣ, ಕನ್ನಡಿಗರು ಆ ಸಿನಿಮಾಗಳನ್ನು ನೋಡಲು ತಯಾರಿರುವುದು. ಕನ್ನಡ ಸಿನಿಮಾಗಳನ್ನು ನೋಡಿ ಎಂದು ಪ್ರೇಕ್ಷಕರಲ್ಲಿ ಮನವಿ ಮಾಡಬಹುದೇ ವಿನಃ, ಬೇರೆ ಭಾಷೆ ಸಿನಿಮಾ ನೋಡಬೇಡಿ ಎಂದು ನಾವು ಹೇಳುವಂತಿಲ್ಲ ಎಂದಿದ್ದಾರೆ ಶಶಾಂಕ್.
ಹೊರ ರಾಜ್ಯದ ಸಿನಿಮಾ ಕನ್ನಡದಲ್ಲಿ ಡಬ್ ಆದ ಮಾತ್ರಕ್ಕೆ ಕನ್ನಡ ಸಿನಿಮಾ ಆಗಿಬಿಡುವುದಿಲ್ಲ. ಯಾವುದಕ್ಕೆ ಎಷ್ಟು ಪ್ರಾಮುಖ್ಯತೆ ನೀಡಬೇಕೋ ಅಷ್ಟೇ ಪ್ರಾಮುಖ್ಯತೆ ನೀಡಬೇಕು. ಕನ್ನಡದ ಹೆಸರಲ್ಲಿ ಬೇರೆ ಭಾಷೆಯ ಡಬ್ಬಿಂಗ್ ಸಿನಿಮಾವನ್ನು ತಲೆ ಮೇಲೆ ಹೊತ್ತು ತಿರುಗಬಾರದು ಎಂದಿದ್ದಾರೆ ಶಶಾಂಕ್.
Recommended Video
ಕನ್ನಡದ ಹಲವು ಸಿನಿಮಾಗಳು ಬಿಡುಗಡೆ ಆಗುತ್ತಿರುವ ಚಿತ್ರವನ್ನು ಹಂಚಿಕೊಂಡಿದ್ದ ಶಶಾಂಕ್, 'ನುಗ್ಗಿ ಹೊಡೆಯೋದು ಅಂದ್ರೆ ಇದೇ ! ಯಾವ ಡಬ್ಬಿಂಗ್ ಸಿನಿಮಾಗೂ ಒಂದು ಥಿಯೇಟರ್ ಕೂಡ ಸಿಗಬಾರದು. ಜೈ ಕನ್ನಡ ಸಿನೆಮಾ'' ಎಂದು ಟ್ವೀಟ್ ಮಾಡಿದ್ದರು. ಇದಕ್ಕೆ ನೆಟ್ಟಿಗರು ವಿರೋಧ ವ್ಯಕ್ತಪಡಿಸಿದ್ದರು.