ತೆರೆಯ ಮೇಲೆ ಬರಲಿದೆ 'ಮಂಡ್ಯದ ಭಗೀರಥ' ಕೆರೆ ಕಾಮೇಗೌಡರ ಬದುಕು
ಸ್ವಂತ ಖರ್ಚಿನಲ್ಲಿ ಕೆರೆಗಳನ್ನು ನಿರ್ಮಿಸುವ ಮೂಲಕ ಮಂಡ್ಯದ ಭಗೀರಥ ಎಂದೇ ಹೆಸರು ಗಳಿಸಿರುವ ಕಾಮೇಗೌಡ ಅವರ ಜೀವನ ಸಾಕ್ಷ್ಯಚಿತ್ರದ ರೂಪ ತಾಳಲಿದೆ. ನಿರ್ದೇಶಕ ದಯಾಳ್ ಪದ್ಮನಾಭನ್ ಈ ಸಾಕ್ಷ್ಯಚಿತ್ರ ಸಿದ್ಧಪಡಿಸಲಿದ್ದಾರೆ.
Recommended Video
Ambi-Vishnu|ಅಂಬಿ-ವಿಷ್ಣು ಸ್ನೇಹ ಬಾಂಧವ್ಯಕ್ಕೆ ಮಸಿ ಬಳಿಯೋದು ಬೇಡ ಎಂದ ಸುಮಲತಾ ಅಂಬರೀಶ್ | Filmibeat Kannada
ಕುರಿಗಾಹಿಯಾಗಿರುವ ಕಾಮೇಗೌಡ ಅವರ ಸಾಧನೆಯ ಬಗ್ಗೆ 'ಮನ್ ಕಿ ಬಾತ್' ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಉಲ್ಲೇಖಿಸುವ ಮೂಲಕ ಅವರ ಕೀರ್ತಿಯನ್ನು ರಾಷ್ಟ್ರಮಟ್ಟದಲ್ಲಿ ತಿಳಿಯುವಂತೆ ಮಾಡಿದ್ದರು. ಈಗ ಕಾಮೇಗೌಡರ ಕುರಿತು ರಾಷ್ಟ್ರದೆಲ್ಲೆಡೆ ಚರ್ಚೆ ನಡೆಯುತ್ತಿದೆ. ಸೊಸೆಯ ಹೆರಿಗೆ ಖರ್ಚಿಗಾಗಿ ಕೂಡಿಸಿಟ್ಟಿದ್ದ ಹಣವು ಉಳಿದಾಗ ಅದನ್ನೂ ಕೆರೆ ನಿರ್ಮಿಸಲು ಬಳಸಿದ್ದ ಕಾಮೇಗೌಡ, ಎರಡು ವರ್ಷಗಳ ಹಿಂದೆ ರಾಜ್ಯೋತ್ಸವ ಪ್ರಶಸ್ತಿ ಬಂದಾಗ ಅದರ ಮೊತ್ತವನ್ನು ಸಹ ನೀರು ಸಂಗ್ರಹಣೆಯ ಮಹತ್ಕಾರ್ಯಕ್ಕೆ ವಿನಿಯೋಗಿಸಿದ್ದರು. ಮುಂದೆ ಓದಿ...
{photo-feature}
More from Filmibeat
English summary
Dyala Padmanabhan to direct the documentary on the life of Mandya Bhageeratha fame Kere Kaamegowda.


Click it and Unblock the Notifications











