Don't Miss!
- News ತೊಳೆಯೋದಕ್ಕೂ ನೀರು ಇಲ್ಲ ಗುರೂ: ಜನ ಹಿಂಗೆ ಕೇಳ್ತಿದ್ದಾರೆ!
- Lifestyle ಬೇಸಿಗೆಗೆ ಈ 3 ಸೊಪ್ಪಿನ ಚಟ್ನಿ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು
- Sports GT vs DC: ಐಪಿಎಲ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ದೊಡ್ಡ ಗೆಲುವು: ಗುಜರಾತ್ಗೆ ತವರಿನಲ್ಲಿ ಸೋಲು
- Automobiles ಸುಜುಕಿ ಹಯಬುಸಾ 25ನೇ ಆನಿವರ್ಸರಿ ಎಡಿಷನ್ ಬಿಡುಗಡೆ: ಬೆಲೆ ಎಷ್ಟು?
- Finance ಇನ್ಮುಂದೆ EMI ಕಟ್ಟೋದು ತಡವಾದ್ರೆ ಚಿಂತಿಸೋಹಾಗಿಲ್ಲ, ಫೈನ್ ಕೂಡ ಕಟ್ಟುವಂತಿಲ್ಲ!
- Technology ಸದ್ಯ ಎಂಟ್ರಿ ಲೆವೆಲ್ನಲ್ಲಿ ಇವೇ ಬೆಸ್ಟ್ ಸ್ಮಾರ್ಟ್ಫೋನ್ಗಳು!..ಫೀಚರ್ಸ್ ಏನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ರಾಜಾಜಿನಗರದಲ್ಲಿ ಡಾ.ರಾಜ್ ಕಂಚಿನ ಪ್ರತಿಮೆ ಅನಾವರಣ
ವರನಟ ಡಾ. ರಾಜ್ಕುಮಾರ್ ರವರ ಕಂಚಿನ ಪ್ರತಿಮೆಯ ಉದ್ಘಾಟನೆ ಸಮಾರಂಭ ಕೊನೆಗೂ ಅನಾವರಣ ಗೊಂಡಿದೆ. ರಾಜಾಜಿ ನಗರ ಮುಖ್ಯದ್ವಾರದ ಮೇಲ್ಸೇತುವೆ ಬಳಿ ಶ್ರೀ ಕೃಷ್ಣದೇವರಾಯ ಶೈಲಿಯಲ್ಲಿ ಡಾ. ರಾಜ್ ಕುಮಾರ್ ರವರ ಕಂಚಿನ ಪ್ರತಿಮೆಯನ್ನು ನಿರ್ಮಾಣ ಮಾಡಲು 10 ವರ್ಷಗಳ ಹಿಂದೆಯೇ ಯೋಜನೆ ನಿರ್ಮಿಸಲಾಗಿತ್ತು. ಪ್ರತಿಮೆ ಅನಾವರಣ ಈಗ ಪೂರ್ಣಗೊಂಡಿದೆ.
'ಡಾ. ರಾಜ್ ಕುಮಾರ್' ರವರ ಕಂಚಿನ ಪ್ರತಿಮೆಯನ್ನು ಕರ್ನಾಟಕ ರಕ್ಷಣಾ ವೇದಿಕೆ, ರಾಜಾಜಿನಗರ ಪದ್ಮಭೂಷಣ ಡಾ. ರಾಜ್ ಕುಮಾರ್ ಪ್ರತಿಷ್ಠಾನ ಮಂಡಳಿ ಸಹಯೋಗದಲ್ಲಿ ನಿರ್ಮಾಣ ಮಾಡಿ ಪ್ರತಿಮೆ ಅನಾವರಣ ಮಾಡಿದೆ.
ರಾಜ್ಕುಮಾರ್ ರವರ ಪ್ರತಿಮೆಯನ್ನು ರಾಜ್ಕುಮಾರ್ ರಸ್ತೆ ಗ್ರೇಡ್ ಸೆಪೆರೇಟರ್ ಕಡೆಯ ಮೆಜೆಸ್ಟಿಕ್ ಭಾಗದ ಕಡೆಯಿಂದ ರಾಜಾಜಿನಗರ ಮುಖ್ಯದ್ವಾರದ ಪ್ರದೇಶದಲ್ಲಿ ಸ್ಥಾಪಿಸಲಾಗಿದೆ.
ಕಂಚಿನ ಪ್ರತಿಮೆ ಅನಾವರಣ ವೇಳೆ ರಾಜ್ಕುಮಾರ್ ರವರ ಹಿರಿಯ ಪುತ್ರಿ ಲಕ್ಷ್ಮಿ, ಕರ್ನಾಟಕ ರಕ್ಷಣಾ ವೇದಿಕೆ ರಾಜಾಧ್ಯಕ್ಷ ನಾರಾಯಣ ಗೌಡ, ಸ್ಥಳೀಯ ಅಭಿಮಾನಿಗಳು ಮತ್ತು ಅಭಿಮಾನಿ ಟಿ ವೆಂಕಟೇಶ್ ಮತ್ತು ಇತರರು ಉಪಸ್ಥಿತರಿದ್ದರು. ಡಾ.ರಾಜ್ಕುಮಾರ್ ರವರ ಕಂಚಿನ ಪ್ರತಿಮೆಯು ಶ್ರೀ ಕೃಷ್ಣದೇವರಾಯ ಸಿನಿಮಾ ಪಾತ್ರವನ್ನು ಹೋಲುತ್ತದೆ.