Don't Miss!
- Sports 'ಕಾಮೆಂಟೇಟರ್ ಇಷ್ಟು ಚೆನ್ನಾಗಿ ಬ್ಯಾಟಿಂಗ್ ಮಾಡಿದ್ದನ್ನು ನೋಡಿಲ್ಲ'; ಡಿಕೆ ಸಾಹೇಬ್ ಅಬ್ಬರಕ್ಕೆ ದಂಗಾದ ಕೆಪಿ!
- News Chhattisgarh: ಪ್ರಮುಖ ನಾಯಕ ಸೇರಿ 29 ಮಾವೋವಾದಿಗಳನ್ನು ಹತ್ಯೆಗೈದ ಭದ್ರತಾ ಪಡೆಗಳು
- Automobiles ಪೆಟ್ರೋಲ್ ಎಂಜಿನ್ಗಳಲ್ಲಿ ಮಾತ್ರ ಬರಲಿದೆ ರೆನಾಲ್ಟ್ನ ಬ್ರಹ್ಮಾಸ್ತ್ರ ಡಸ್ಟರ್
- Lifestyle ಸೌದಿಯಲ್ಲಿ ಮಳೆ, ಪ್ರವಾಹ...ಮರುಭೂಮಿ ಮರೆಯಾಗಿ ನಳನಳಿಸುವ ಹಸಿರು...! ಇದು ಹೇಗೆ ಸಾಧ್ಯ ಗೊತ್ತಾ?
- Finance ಇಸ್ರೇಲ್-ಇರಾನ್ ಯುದ್ಧದ ಪರಿಣಾಮ ಷೇರು ಪೇಟೆಯಲ್ಲಿ ಭಾರಿ ನಷ್ಟ
- Technology YouTube: ಯೂಟ್ಯೂಬ್ ಬಳಕೆದಾರರಿಗೆ ಶಾಕಿಂಗ್ ನ್ಯೂಸ್! ಆಡ್ ಬ್ಲಾಕರ್ ವಿರುದ್ಧ ಸಮರ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಅಣ್ಣಾವ್ರು ಇದ್ದಿದ್ರೆ ಇದನ್ನ ಒಪ್ತಿದ್ರಾ ಹೇಳಿ ಶಿವಣ್ಣ?
ವರನಟ, ಗಾನಗಂಧರ್ವ ನಟ ಸಾರ್ವಭೌಮ ಡಾ.ರಾಜ್ ಕುಮಾರ್ ಮನಸ್ಸು ಮಾಡಿದ್ರೆ ಯಾವತ್ತೋ ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಗದ್ದುಗೆಯನ್ನ ಸುಲಭವಾಗಿ ಏರಿಬಿಡ್ತಿದ್ರು. ಗೋಕಾಕ್ ಚಳವಳಿಯ ಸಂದರ್ಭದಲ್ಲಿ ರಾಜಕೀಯಕ್ಕೆ ಬರ್ತೀರಾ ಅಂತ ರಾಜ್ ರನ್ನ ಪತ್ರಕರ್ತರು ಕೇಳಿದ್ದಕ್ಕೆ ಏನಂದಿದ್ರು ಗೊತ್ತಾ?
"ನನ್ನನ್ನ ಕನ್ನಡಿಗರು ರಾಜಕುಮಾರ ಅಂತ ಕರೆದಿದ್ದಾರೆ. ನಾನು ರಾಜಕುಮಾರನಾಗಿಯೇ ಇರ್ತೀನಿ, ರಾಜಕಾರಣಿ ಆಗೋದಿಲ್ಲ" ಅಂದಿದ್ರು. ಈಗ ರಾಜ್ ಕುಟುಂಬದ ಹಿರಿಯ ಸೊಸೆ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಪತ್ನಿ ಗೀತಾ ಶಿವರಾಜ್ ಕುಮಾರ್ ರಾಜಕೀಯಕ್ಕೆ ಬರೋದು ಗ್ಯಾರಂಟಿಯಾಗ್ತಿದೆ. [ಎಲ್ಲೆಲ್ಲೋ ಜಾರಿದೆ ನಟಿ ರಮ್ಯಾ ಮೇಡಂ ಮನಸು]
ರಾಜ್ ಕುಟುಂಬಕ್ಕೆ ರಾಜಕೀಯ ಬೇಡ ಅನ್ನೋದು ಎಷ್ಟೋ ಜನರ ಆಶಯ. ಆದರೆ ಸ್ವತಃ ಶಿವಣ್ಣ ಹೇಳೋದು ರಾಜಕೀಯ ಅಪ್ಪಾಜಿಗೆ ವೈಯಕ್ತಿಕವಾಗಿ ಇಷ್ಟವಿರ್ಲಿಲ್ಲ. ರಾಜಕೀಯವೇ ಬೇಡ ಅಂತಿದ್ರೆ ರಾಜಕಾರಣ ಹಿನ್ನೆಲೆಯ ಕುಟುಂಬದ ಗೀತಾನನ್ನ ಯಾಕೆ ಮದ್ವೆ ಮಾಡ್ತಿದ್ರು ಅಂತ.
ಆದ್ರೂ ಶಿವಣ್ಣ ಒಂದ್ಸಾರಿ ಯೋಚ್ನೆ ಮಾಡಿ ರಾಜ್ ಕುಟುಂಬ ಕೂಡ ರಾಜಕೀಯ ಅನ್ನೋ ಹೊಲಸಿಗೆ ಇಳೀತು ಅನ್ನೋ ಕಳಂಕ ಬರಬಾರ್ದಲ್ವಾ. ಅಣ್ಣಾವ್ರು ಇದ್ದಿದ್ರೆ ಇದನ್ನ ಒಪ್ತಿದ್ರಾ, ಹೇಳಿ ಶಿವಣ್ಣ?