Don't Miss!
- News Toilet Photo Viral: ಕಡಿಮೆ ಖರ್ಚಿನಲ್ಲಿ 'ಲೀಕೆಜ್ ಟ್ಯಾಂಕರ್'ನಿಂದ ಟಾಯ್ಲೆಟ್ ನಿರ್ಮಾಣ: ನೀವೂ ಟ್ರೈ ಮಾಡಿ
- Sports IPL 2024: ಹೈದರಾಬಾದ್-ಡೆಲ್ಲಿ ನಡುವೆ ಮೆಗಾ ಫೈಟ್; ಟಾಸ್, ಆಡುವ 11ರ ಬಳಗದ ವರದಿ
- Automobiles ಭಾರತದಲ್ಲಿ 80 ಲಕ್ಷ ಸ್ಕೂಟರ್ ಮಾರಿದ ಜಪಾನ್ ಕಂಪನಿ: ವಿಶ್ವಗುರು ಭಾರತದಲ್ಲಿ ಎಲ್ಲವೂ ಸಾಧ್ಯ!
- Technology 6000mAh ಬ್ಯಾಟರಿಯ ಈ ಫೋನ್ ಶೀಘ್ರದಲ್ಲೇ ಖರೀದಿಗೆ ಲಭ್ಯ!..ಬೆಲೆ ಎಷ್ಟು?
- Lifestyle 2 ಬಗೆಯ ಮಜ್ಜಿಗೆ ಸಾರು ರೆಸಿಪಿ: ಕಾಯಿ ಹಾಕಿದ, ಕಾಯಿ ಹಾಕದ ಸಾರಿನ ರೆಸಿಪಿ
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಡಾ.ರಾಜ್ ಅವರನ್ನು ದೇವರು ಅಂದ ಆ ನಟ ಯಾರು?
ಸ್ಯಾಂಡಲ್ ವುಡ್ ನ ವರನಟ ಡಾ.ರಾಜ್ ಕುಮಾರ್ ಅವರನ್ನು ತಮಿಳಿನ ಸೂಪರ್ ಸ್ಟಾರ್ ರಜನಿಕಾಂತ್ ಅವರು 'ಡಾ ರಾಜ್ ಕುಮಾರ್ ಅವರು ನಿಜವಾದ ದೇವರು' ಎಂದು ಕರೆದಿದ್ದಾರೆ.
ಇದು ಇಡೀ ಕರ್ನಾಟಕದ ಜನತೆಗೆ, ಅದ್ರಲ್ಲೂ ಇಂದು 60ನೇ ಕನ್ನಡ ರಾಜ್ಯೋತ್ಸವ ಆಚರಿಸುತ್ತಿರುವ, ಕನ್ನಡಿಗರು ಹೆಮ್ಮೆಯಿಂದ ಬೀಗಬೇಕಾದ ಹೇಳಿಕೆಯನ್ನು ತಮಿಳು ಸೂಪರ್ ಸ್ಟಾರ್ ನೀಡಿದ್ದಾರೆ.
ಜೊತೆಗೆ ಡಾ.ರಾಜ್ ಅವರನ್ನು ರಾಘವೇಂದ್ರ ಸ್ವಾಮಿ ಎಂದು ರಜನಿಕಾಂತ್ ಅವರು ಪರಿಗಣಿಸುತ್ತಾರಂತೆ. ಅಂದಹಾಗೆ ಸೂಪರ್ ಸ್ಟಾರ್ ರಜನಿಕಾಂತ್ ಅವರಿಗೂ ದೇವರು ರಾಘವೇಂದ್ರ ಸ್ವಾಮಿಗೂ ಒಂದು ಪ್ರಬಲವಾದ ಸಂಬಂಧವಿದೆ ಎಂದು ಇತ್ತೀಚೆಗೆ ನಡೆದ ಒಂದು ಕಾರ್ಯಕ್ರಮದಲ್ಲಿ ಸೂಪರ್ ಸ್ಟಾರ್ ರಜನಿ ಅವರು ತಮ್ಮ ಮನದಾಳದ ಮಾತನ್ನು ಹಂಚಿಕೊಂಡಿದ್ದಾರೆ.
ಅಂದಹಾಗೆ ವೆಂಟೇಶ್ವರ ಸ್ವಾಮಿ ಅವರು ಡಾ.ರಾಜ್ ಅವರ ಕನಸಲ್ಲಿ ಬಂದು ಕಾಡಿದ್ರೆ, ಶ್ರೀ ರಾಘವೇಂದ್ರ ಸ್ವಾಮಿ ಅವರು ಸೂಪರ್ ಸ್ಟಾರ್ ರಜನಿಕಾಂತ್ ಅವರ ಕನಸಲ್ಲಿ ಬಂದ ಕಾಡಿದ್ರಂತೆ. ಆ ನಂತರ ರಜನಿ ಅವರು ಮಂತ್ರಾಲಯ ಕ್ಷೇತ್ರಕ್ಕೆ ಭೇಟಿ ನೀಡಿ ಸ್ವಾಮಿಯ ದರ್ಶನ ಪಡೆದು ಬಂದರಂತೆ. ತದನಂತರ ಇದೀಗ ರಜನಿ ಅವರು ತಮ್ಮ ನಿವಾಸದಲ್ಲಿಯೇ ರಾಘವೇಂದ್ರ ಸ್ವಾಮಿ ಅವರ ವಿಗ್ರಹ ಪ್ರತಿಷ್ಠಾಪನೆ ಮಾಡಿ ಆರಾಧನೆ ಮಾಡುತ್ತಿದ್ದಾರೆ.
ಜೊತೆಗೆ ಸೂಪರ್ ಸ್ಟಾರ್ ರಜನಿಕಾಂತ್ ಅವರು ತಮ್ಮ 25ನೇ ಚಿತ್ರ 'ಶ್ರೀ ರಾಘವೇಂದ್ರ ಸ್ಟಾಮಿ' ಆಗಿರಬೇಕೆಂದು ಅವರು ಅಭಿಲಾಷೆ ವ್ಯಕ್ತಪಡಿಸಿದಾಗ ರಜನಿ ಅವರ ಆಪ್ತರಾದ ಕೆ.ಬಾಲಚಂದರ್ ಅವರು ರಾಘವೇಂದ್ರ ಸ್ವಾಮಿ ಸಿನಿಮಾ ಮಾಡುವ ಮೂಲಕ ರಜನಿ ಕಾಂತ್ ಅವರ ಆಸೆಯನ್ನು ಪೂರೈಸಿದ್ದರು.
ಆದರೆ ಅದೃಷ್ಟವಶಾತ್ ಆ ಸಿನಿಮಾ ಒಳ್ಳೆ ರೆಸ್ಪಾನ್ಸ್ ಗಿಟ್ಟಿಸಿಕೊಳ್ಳಲಿಲ್ಲ. ಆ ಸಂದರ್ಭದಲ್ಲಿ ಡಾ.ರಾಜ್ ಅವರು ರಜನಿ ಅವರಿಗೆ ಬಹಳ ಆಪ್ತರಾಗಿದ್ದು, ವರನಟ ಆ ಸಿನಿಮಾ ನೋಡಿದರಂತೆ. ಸಿನಿಮಾ ನೋಡಿದ ಡಾ.ರಾಜ್ ಅವರು 'ನಾನು ಮಾಡಿದ 'ಮಂತ್ರಾಲಯ ಮಹಾತ್ಮೆ' ಕೂಡ ಫಸ್ಟ್ ಬಿಡುಗಡೆ ಆದಾಗ ಅಷ್ಟಾಗಿ ರೆಸ್ಪಾನ್ಸ್ ಪಡೆದುಕೊಳ್ಳಲಿಲ್ಲ, ಆದರೆ ನಾನು ಆ ಚಿತ್ರವನ್ನು ಎರಡನೇ ಬಾರಿ ರನ್ ಮಾಡಿದಾಗ ಒಳ್ಳೆ ರೆಸ್ಪಾನ್ಸ್ ಸಿಕ್ಕಿತ್ತು. ಎಂದರಂತೆ.
ಆನಂತರ ಡಾ.ರಾಜ್ ಅವರ ಸಲಹೆ ಮೇರೆಗೆ ರಜನಿ ಅವರು 'ಶ್ರೀ ರಾಘವೇಂದ್ರ ಸ್ವಾಮಿ' ಚಿತ್ರವನ್ನು ಎರಡನೇ ಬಾರಿ ಚಿತ್ರಮಂದಿರಗಳಲ್ಲಿ ರನ್ ಮಾಡಿದಾಗ ಒಳ್ಳೆ ಕಲೆಕ್ಷನ್ ಮಾಡಿದ್ದನ್ನು ಕಂಡು ರಜನಿ ಅವರು ವರನಟ ಡಾ.ರಾಜ್ ಅವರಿಗೆ ನಿಜವಾದ ರಾಘವೇಂದ್ರ ಸ್ವಾಮಿ ಎಂದು ಕರೆದಿದ್ದಾರೆ.
ಒಟ್ನಲ್ಲಿ ಪರಭಾಷೆಯವರು ನಮ್ಮ ಕನ್ನಡದ ನಟನನ್ನು ದೇವರಿಗೆ ಹೋಲಿಸಿ ಅವರನ್ನು ಆರಾಧಿಸುತ್ತಾರೆ, ಅಂದರೆ ಕನ್ನಡಿಗರಾದ ನಮಗೆ ಹೆಮ್ಮೆಯ ಸಂಗತಿ ಅಲ್ವಾ?.