Don't Miss!
- Automobiles 'ಬಾಹುಬಲಿ' ಎಸ್ಯುವಿ ಪರಾಕ್ರಮ: ಟೊಯೊಟಾ ಫಾರ್ಚುನರ್ ಲೀಡರ್ ಎಡಿಷನ್ ವಿಶೇಷತೆಗಳೇನು?
- Technology ಇಂದು 3D ಕರ್ವ್ಡ್ ಡಿಸ್ಪ್ಲೇ ಇರುವ ಈ ಫೋನಿನ ಸೇಲ್!..ಆಫರ್ ಬೆಲೆ ಎಷ್ಟು?
- Finance April 25 Gold Rate: ಇಂದಿನ ಚಿನ್ನದ ಬೆಲೆ, ಬೆಂಗಳೂರಿನಲ್ಲಿ ದರ ಎಷ್ಟಿದೆ ತಿಳಿಯಿರಿ
- Lifestyle ಬೆಳ್ಳುಳ್ಳಿ ಕಬಾಬ್ ಅಂದುಕೊಂಡ್ರಾ? ಇದು ಚಿಕನ್ ರುಚಿಯ ಹೂವಿನ ಫ್ರೈ..!
- Sports 2009ರ ಐಪಿಎಲ್ ಫೈನಲ್ನಲ್ಲಿ ಆರ್ಸಿಬಿ ಸೋಲಲು ಕಾರಣ ತಿಳಿಸಿದ ಅನಿಲ್ ಕುಂಬ್ಳೆ
- News Srivari Seva: ತಿರುಮಲ ಶ್ರೀವಾರಿಯ ಸೇವಕರಾಗಲು ಒಂದು ಅದ್ಭುತ ಅವಕಾಶ.. ಕೂಡಲೇ ಬುಕ್ ಮಾಡಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸತ್ತ ಮೇಲೂ ನಾನು ವಿಷ್ಣು ಅಭಿಮಾನಿ ಎಂದು ಜಗತ್ತಿಗೆ ಸಾರಿದ ದಾದಾ ಸೇನಾನಿ
ಸಿನಿಮಾ ನಟರಿಗೆ ಎಂತೆಂತಾ ಅಭಿಮಾನಿಗಳು ಇರ್ತಾರೆ. ಸ್ಟಾರ್ ನಟರ ಹುಟ್ಟುಹಬ್ಬಕ್ಕೆ ಮನೆವರೆಗೂ ಹೋಗಿ ಕೇಕ್ ಕಟ್ ಮಾಡಿಸಿ, ಹೂವಿನ ಹಾರ ಹಾಕಿ, ಕೈ ಕುಲುಕಿ ಫೋಟೋ ತೆಗೆಸಿಕೊಂಡು ಹೋಗ್ತಾರೆ. ಎದೆ ಮೇಲೆ, ಮೈಮೇಲೆ ಆ ನಟನ ಹೆಸರು, ಫೋಟೋವನ್ನ ಟ್ಯಾಟು ಹಾಕಿಸಿಕೊಳ್ಳುತ್ತಾರೆ.
ಸ್ಟಾರ್ ಗಳ ಹೆಸರಲ್ಲಿ ಸಮಾಜ ಸೇವೆ ಮಾಡ್ತಾರೆ. ರಸ್ತೆ ಅಥವಾ ಮನೆಗೆ ಅವರ ಹೆಸರು ಇಡ್ತಾರೆ. ಅವರ ಮಕ್ಕಳಿಗೆ ನಟರ ಹೆಸರಿಡುತ್ತಾರೆ. ಅವರ ಹೆಸರಲ್ಲಿ ಬಡಮಕ್ಕಳಿಗೆ ನೆರವು ಕೊಡ್ತಾರೆ. ಹೀಗೆ ಅನೇಕ ರೀತಿಯ ಅಭಿಮಾನ ನೋಡಿರುತ್ತೇವೆ.
ವಿಷ್ಣುರನ್ನ ಸ್ಮರಿಸಿದ ಚಿತ್ರರಂಗ: ಒಬ್ಬೊಬ್ಬರಿಗೆ ಒಂದೊಂದು ರೀತಿ ಸ್ಫೂರ್ತಿ ಈ 'ಸಿಂಹ'
ಈಗ ನಾವು ಹೇಳಲು ಹೊರಟಿರುವ ಅಭಿಮಾನಿಯ ಕಥೆ ಬಹುಶಃ ಅಪರೂಪದಲ್ಲಿ ಅಪರೂಪ. ಇಂತಹ ಅಭಿಮಾನವನ್ನ ಇದುವರೆಗೂ ಯಾರೂ ನೋಡಿರಲು ಸಾಧ್ಯವಿಲ್ಲ. ಹೌದು, ಇಷ್ಟು ದಿನ ನೀವು ನೋಡಿದ್ದು ಬದುಕಿರುವವರೆಗೂ ಇರ್ತಿದ್ದ ಅಭಿಮಾನ. ಆದ್ರೆ, ಇದು ಸತ್ತ ಮೇಲೂ ಆ ಅಭಿಮಾನ ಹಾಗೆ ಉಳಿಸಿಕೊಂಡ ವಿಷ್ಣು ಅಭಿಮಾನಿ ರಮೇಶ್ ಕಥೆ. ಪೂರ್ತಿ ವಿವರ ತಿಳಿಯಲು ಮುಂದೆ ಓದಿ.....
ಸಮಾಧಿ ಕಲ್ಲಿನಲ್ಲಿ ಅಭಿಮಾನ ಮೆರೆದ ವಿಷ್ಣು ಅಭಿಮಾನಿ
ಯಮಲೂರು ವಿಷ್ಣು ಸೇನಾ ಸಮಿತಿಯ ಅಧ್ಯಕ್ಷರಾಗಿದ್ದ ಎಸ್ ರಮೇಶ್ ಅವರು ಕಳೆದ ವರ್ಷ ನಿಧನರಾಗಿದ್ದರು. ಇವರ ಅಂತ್ಯ ಸಂಸ್ಕಾರವಾದ ಸ್ಥಳದಲ್ಲಿ ಸಮಾಧಿ ಕಟ್ಟಲಾಗಿದ್ದು, ಆ ಸಮಾಧಿ ಕಲ್ಲಿನಲ್ಲಿ ರಮೇಶ್ ಅವರ ಭಾವಚಿತ್ರದ ಜೊತೆ ದಿವಂಗತ ನಟ ಡಾ ವಿಷ್ಣುವರ್ಧನ್ ಅವರ ಭಾವಚಿತ್ರವೂ ಹಾಕಲಾಗಿದೆ.
ಯಾವುದೇ ಕಾರ್ಯಕ್ರಮಕ್ಕೆ ಹೋದ್ರು ಸುದೀಪ್ ಈ ಸಾಂಗ್ ಹಾಡ್ತಾರೆ ಯಾಕೆ.?
ರಮೇಶ್ ಆಸೆ ನೆರವೇರಿಸಿದ ಕುಟುಂಬ
ರಮೇಶ್ ಅವರು ವಿಷ್ಣುವರ್ಧನ್ ಅವರ ಅಪ್ಪಟ ಅಭಿಮಾನಿ. ತಾನೂ ಸಾಯುವುದಕ್ಕೂ ಮುಂಚೆ ಮನೆಯವರ ಬಳಿ, 'ನಾನು ಸತ್ತ ಬಳಿಕ ನನ್ನ ಸಮಾಧಿಗೆ ನೆಡುವ ಗುರುತು ಕಲ್ಲಿನಲ್ಲಿ ಯಜಮಾನ್ರ ಫೋಟೋ ಇರಬೇಕು' ಅಂತ ಹೇಳಿದ್ದರಂತೆ. ಅದರಂತೆ ಅವರ ಕುಟುಂಬದವರು ರಮೇಶ್ ಅವರ ಕೊನೆ ಆಸೆಯನ್ನು ಈಡೇರಿಸಿದ್ದಾರೆ.
ಡಾ.ವಿಷ್ಣು ಹಾಗೂ ಸುದೀಪ್ ಬಗ್ಗೆ ಅನು ಪ್ರಭಾಕರ್ ಕಂಡ ಕನಸು ನನಸಾಗಲು ಸಾಧ್ಯವೇ ಇಲ್ಲ!
ಇಂತಹ ಅಭಿಮಾನಕ್ಕೆ ಸಾವುಂಟೆ?
ಆ ನಟ ಸಾಯುಬಹುದು, ಆ ಅಭಿಮಾನಿಯೂ ಸಾಯಬಹುದು. ಆದ್ರೆ, ಇಂತಹ ಅಭಿಮಾನ ಎಂದಿಗೂ ಸಾಯುವುದಿಲ್ಲ. ಇಂತಹ ಅಭಿಮಾನಕ್ಕೆ ನಿಜಕ್ಕೂ ಸಾವಿಲ್ಲ. ಮತ್ತು ಸಾಯಿಯೂ ಇಲ್ಲ ಬಿಡಿ. ವಿಷ್ಣುವರ್ಧನ್ ಅಂತಹ ನಟರನ್ನ ಪಡೆದ ನಾವು ಪುಣ್ಯವಂತರು ಎಂದು ವಿಷ್ಣು ಅಭಿಮಾನಿಗಳು ಹೇಳ್ತಾರೆ. ಆದ್ರೆ, ಈ ಅಭಿಮಾನ ನೋಡಿದ್ಮೇಲೆ ಇಂತಹ ಅಭಿಮಾನಿಗಳನ್ನ ಪಡೆದು ವಿಷ್ಣುವರ್ಧನ್ ಅವರು ಕೂಡ ಪುಣ್ಯವಂತರು.
ದಶಕಗಳ ಹಿಂದೆ ವಿಜಯನಾರಸಿಂಹ ನಡೆಸಿದ ಡಾ.ವಿಷ್ಣುರ ಅಪರೂಪದ ಸಂದರ್ಶನ ಇಲ್ಲಿದೆ
ವಿಷ್ಣು ಸ್ಮಾರಕ ಆಗಿಲ್ಲ ಎನ್ನುವುದೇ ಬೇಸರ
ತಾನೂ ಸತ್ತ ಮೇಲೂ ವಿಷ್ಣು ಅಭಿಮಾನಿ ಎಂದು ಜಗತ್ತಿಗೆ ಸಾರಿದ ರಮೇಶ್ ಅವರನ್ನ ನೆನೆದರೇ ಮೈ ರೋಮಾಂಚನವಾಗುತ್ತೆ. ಆದ್ರೆ, ಇಂತಹ ಅಭಿಮಾನಿಗಳನ್ನ ಹೊಂದಿರುವ ನಟನಿಗೆ ಮಾತ್ರ ಇನ್ನೂ ಸ್ಮಾರಕ ನಿರ್ಮಾಣವಾಗಿಲ್ಲ ಎನ್ನುವುದು ಬೇಸರದ ಸಂಗತಿ. ಆದಷ್ಟೂ ಬೇಗ ಯಜಮಾನರ ಸ್ಮಾರಕ ಆಗಲಿ.