ಡ್ರಾಮಾ ಚಿತ್ರದಲ್ಲಿ ಧಾರ್ಮಿಕ ನಿಂದನೆ ಸರೀನಾ ಭಟ್ರೇ?

ಚಿತ್ರದಲ್ಲಿ ಬರುವ ಒಂದು ಸನ್ನಿವೇಶ. ಆತ ಫುಲ್ ಟೈಟ್ ಆಗಿರುತ್ತಾನೆ. ತನ್ನ ಕಾಲೇಜು ಪ್ರಿನ್ಸಿಪಾಲರ ತಲೆ ಬೋಳಿಸಲು ರೆಡಿಯಾಗಿ ಬಂದಿರುತ್ತಾನೆ. ಆಗ ಇನ್ನೇನು ತಲೆಗೆ ಮಿಷಿನ್ ಆಡಿಸಬೇಕು ಎನ್ನುವ ಹೊತ್ತಿಗೆ..
"ಇನ್ ಮುಂದೆ ತಿರುಪತಿಗೆ ಹೋಗೋ ಬದಲು ನನ್ ಹತ್ರಾನೇ ಬರ್ಬೇಕು. ಹಾಗ್ ಬೋಳಸ್ತೀನಿ ನೋಡು ಸತೀಸಾ.." ಹೀಗೊಂದು ಡೈಲಾಗ್ ಹೇಳುತ್ತಾನೆ ನಾಯಕ ಯಶ್.
ವಾಟ್ ನಾನ್ ಸೆನ್ಸ್ ದಿಸ್ ಈಸ್ ಭಟ್ರೇ. ದೇವರಲ್ಲಿ ನಮಗೂ ನಂಬಿಕೆಯಿದೆ ನಿಮಗೂ ನಂಬಿಕೆಯಿದೆ.
* ಚಿತ್ರದಲ್ಲಿ ಬರುವ ಈ ಡೈಲಾಗು ಎಷ್ಟರ ಮಟ್ಟಿಗೆ ಸರಿ?
* ಚಿತ್ರದಲ್ಲಿನ ಈ ಸನ್ನಿವೇಶಕ್ಕೆ ಇಂಥಹ ಸಂಭಾಷಣೆ ಬಳಸಿದ್ದು ಸರೀನಾ ಅಥವಾ ಅಂಥದೊಂದು ಡೈಲಾಗ್ ಬೇಕಿತ್ತಾ?
* ಇದನ್ನು ನಾವು ದೇವರ ಹಾಗೂ ಧಾರ್ಮಿಕ ನಿಂದನೆ ಎನ್ನಬಹುದಾ?
* ಸೆನ್ಸಾರ್ ಮಂಡಳಿ ಇದನ್ನು ಹೇಗೆ ಓಕೆ ಮಾಡಿತು?
* ಸಾಮಾಜಿಕ ಕಳಕಳಿ ಇರುವ ನೀವು ತಿರುಪತಿ ದೇವರಿಗೆ ಮುಡಿ ಕೊಡುವ ಶಾಸ್ತ್ರವನ್ನು ಅಲ್ಲಗಳೆದದ್ದಾದರೂ ಏಕೆ?
ತಮಾಷೆ ಮತ್ತು ವ್ಯಂಗ್ಯದ ಹೆಸರಲ್ಲಿ ದೇವರಿಗೆ ಸಂಬಂಧಿಸಿದ ತಮಾಷೆ ಮಾಡುವುದು ಎಷ್ಟೆಂದರೂ ಸರಿಯಲ್ಲ. ಭಟ್ಟರಿಗೆ ಈ ಮಾತು ಕೇಳುತ್ತಿದೆ ಎಂದುಕೊಳ್ಳುತ್ತೇವೆ.
ಡ್ರಾಮಾ ಚಿತ್ರ ವಿಮರ್ಶೆ.


Click it and Unblock the Notifications











