Don't Miss!
- Technology Motorola: ಮೊಟೊರೊಲಾ ಎಡ್ಜ್ 50 ಅಲ್ಟ್ರಾ ಸ್ಮಾರ್ಟ್ಫೋನ್ ಫೀಚರ್ಸ್ ಲೀಕ್! ವಿಶೇಷತೆ ಏನು?
- Automobiles Tata Curvv Vs Citroen Basalt: ಟಾಟಾಗೆ ಸೆಡ್ಡು ಹೊಡೆಯುವ ತಾಕತ್ತಿದೆಯೇ?
- Lifestyle ನರಿ ಮತ್ತು ಕೋಳಿಗೂ ಮೂರ್ಖರ ದಿನಕ್ಕೂ ಇದೆ ನಂಟು..! ಏನದು.?
- News RBI: ಬ್ಯಾಂಕ್ ಕೆಲಸ ಮುಗಿದಿಲ್ವಾ? ಭಯ ಬೇಡ ಮಾರ್ಚ್ 30, 31ಕ್ಕೂ ಓಪನ್ ಇರುತ್ತೆ ಆರ್ಬಿಐ ಕಚೇರಿಗಳು!
- Finance ಮೊದಲ ಬಾರಿಗೆ ಅಂಬಾನಿ ಅದಾನಿ ಸೇರಿ ವ್ಯಾಪಾರ ಒಪ್ಪಂದ, ಇಲ್ಲಿದೆ ಒಪ್ಪಂದ ವಿವರ
- Sports IPL 2024: ವಿರಾಟ್ ಕೊಹ್ಲಿ ಕೆಕೆಆರ್ ಡಗೌಟ್ ನೋಡಿದ್ರೆ ಉರಿದು ಬೀಳ್ತಾರೆ; ಆರ್ಸಿಬಿ ಮಾಜಿ ಕ್ರಿಕೆಟಿಗ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಕನ್ನಡದ ಹೆಸರಲ್ಲಿ ಅನಾಚಾರ': 'ಡಬ್ಬಿಂಗ್' ವಿರುದ್ಧ ಗುಡುಗಿದ ನಟ ಜಗ್ಗೇಶ್.!
ಕನ್ನಡದಲ್ಲಿ ಡಬ್ಬಿಂಗ್ ಬೇಕೇ.? ಬೇಡವೇ.? ಎಂಬ ಚರ್ಚೆ ಎಲ್ಲೆಲ್ಲೂ ಜೋರಾಗಿ ನಡೆಯುತ್ತಿರುವಾಗಲೇ ಅಜಿತ್ ಅಭಿನಯದ ಬ್ಲಾಕ್ ಬಸ್ಟರ್ ತಮಿಳು ಸಿನಿಮಾ 'ಎನ್ನೈ ಅರಿಂದಾಲ್' ಕನ್ನಡಕ್ಕೆ 'ಸತ್ಯದೇವ್ ಐಪಿಎಸ್' ಎಂಬ ಹೆಸರಿನಲ್ಲಿ ಡಬ್ ಆಗಿದೆ. ಈಗಾಗಲೇ ಟ್ರೈಲರ್ ಕೂಡ ಬಿಡುಗಡೆ ಆಗಿದೆ.[ಸತ್ಯದೇವ್ ಐಪಿಎಸ್ 'ಡಬ್ಬಿಂಗ್' ಚಿತ್ರದ ಟ್ರೈಲರ್ ನೋಡಿ]
ಇದನ್ನು ಕಂಡು ನಟ ಜಗ್ಗೇಶ್ ಸಿಡಿದೆದ್ದಿದ್ದಾರೆ. ''ಕನ್ನಡದ ಹೆಸರಿನಲ್ಲಿ ಅನಾಚಾರ ನಡೆಯುತ್ತಿದೆ'' ಅಂತ 'ಡಬ್ಬಿಂಗ್' ಕುರಿತು ನವರಸ ನಾಯಕ ಜಗ್ಗೇಶ್ ಹೊಸ ಬಾಂಬ್ ಸಿಡಿಸಿದ್ದಾರೆ. ಮುಂದೆ ಓದಿ....
ಡಬ್ಬಿಂಗ್ ವಿರುದ್ಧ ಗುಡುಗಿದ ನಟ ಜಗ್ಗೇಶ್
''ಕನ್ನಡಕ್ಕೆ ಡಬ್ ಆಗಿರುವ 'ಸತ್ಯದೇವ್ ಐ.ಪಿ.ಎಸ್' ಯಾಕೆ ರಿಲೀಸ್ ಆಗುತ್ತಿದೆ.? ಇದರ ಬಗ್ಗೆ ಗಮನ ಹರಿಸಿ'' ಅಂತ ರತೀಶ್ ಕುಮಾರ್ ಎಂಬುವರು ಹೇಳಿದ್ದಕ್ಕೆ ನಟ ಜಗ್ಗೇಶ್ ಪ್ರತಿಕ್ರಿಯೆ ಕೊಟ್ಟಿದ್ದು ಹೀಗೆ....
ಕನ್ನಡದಲ್ಲಿ ಗಂಡುನಟರಿಲ್ಲವೇ.?
''ಕನ್ನಡದ ಹೆಸರಲ್ಲಿ ಅನಾಚಾರ.! ಇದನ್ನ ಮಾಡಲು 40 ಲಕ್ಷ ಇನಾಮ್ ಪರರಾಜ್ಯದಿಂದ ಪಡೆದ ಮಾಹಿತಿ ಇದೆ.! ಆದಷ್ಟು ಬೇಗ ಹೊರಬಂದು ಬೆತ್ತಲಾಗುತ್ತಾರೆ.! ವೆಭಿಚಾರಿಗಳು.! ಕನ್ನಡದಲ್ಲಿ ಗಂಡುನಟರಿಲ್ಲವೇ.!'' ಅಂತ ನಟ ಜಗ್ಗೇಶ್ ಟ್ವೀಟ್ ಮಾಡಿದ್ದಾರೆ.[ಬಾಹುಬಲಿ 2 ಕನ್ನಡಕ್ಕೆ ಡಬ್ ಆಗಲಿ- ಟ್ವೀಟ್ ಅಭಿಯಾನ]
ನಮ್ಮ ಚಿತ್ರ ಅಲ್ಲಿ ಬೇಡ ಯಾಕೆ.?
''ನಮ್ಮ ಕನ್ನಡ ಚಿತ್ರ ಪರರಾಜ್ಯದಲ್ಲಿ ಬಿಡುಗಡೆ ಮಾಡುವ ಗಂಡಸರಿದ್ದಾರಾ ಕೇಳಿ.. ಕಂಡವರ ಮಲ ಹೊರಲು ಹೊರಟಿರುವ ಮಂದಿಗೆ.! ನಮ್ಮಲ್ಲಿ ಅವರ ಚಿತ್ರ ಓಕೆ.! ನಮ್ಮ ಚಿತ್ರ ಅಲ್ಲಿ ಬೇಡ ಯಾಕೆ.?'' ಎಂದು ಟ್ವೀಟ್ ಮಾಡಿ ಜಗ್ಗೇಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಡಬ್ಬಿಂಗ್ ನಿಲ್ಲಿಸಲು ಯತ್ನಿಸುತ್ತೇನೆ
''ಸಾಧ್ಯ ಆದಷ್ಟು ಕನ್ನಡಿಗನಾಗಿ ಡಬ್ಬಿಂಗ್ ನಿಲ್ಲಿಸಲು ಯತ್ನಿಸುವೆ.. ಯಾವ ನಿಷ್ಠೂರಕ್ಕೂ ಮಣಿಯೋಲ್ಲ.! ನೋಡೋಣ ಯತ್ನ ಮಾಡುವೆವು.. ಕೋಟಿಮಂದಿಗಿಂತ ಪ್ರೀತಿಸುವ ಕೆಲವು ಮಂದಿ ಕನ್ನಡಿಗ ಸಾಕು.!'' - ಜಗ್ಗೇಶ್
ನಮ್ಮ ಭಾಷೆ ನಮಗೆ ದೇವರು
''ಸಮುದ್ರ ಮಂಥನ ಆದಾಗ ದೇವ-ದಾನವ ಯುದ್ಧದಲ್ಲಿ ದೇವನೇ ಗೆದ್ದದ್ದು.. ನಮ್ಮ ಭಾಷೆ ನಮ್ಮ ದೇವರು'' - ಜಗ್ಗೇಶ್
ಬೇಕಾದರೆ ಹೋರಾಡಿ..
''ಇಂದು ಸಿನಿಮಾ, ನಾಳೆ ನಮ್ಮ ನೆಲ, ನಾಡಿದ್ದು ನಮ್ಮ ಯುವಕರ ಕೆಲಸ.! ಬಿಟ್ಟರೆ ನಮ್ಮ ಹೂಳುವ ಜಾಗವೂ ಕೇಳುತ್ತಾರೆ. ಬೇಕಾದರೆ ಹೋರಾಡಿ.! ಬೇಡವಾದರೆ ಬಿಟ್ಹಾಕಿ'' ಅಂತ ಜಗ್ಗೇಶ್ ಡಬ್ಬಿಂಗ್ ವಿರುದ್ಧ ಸಿಡಿದೆದ್ದಿದ್ದಾರೆ.