Don't Miss!
- Finance ಸಂಸ್ಥೆಯ ಎಲ್ಲ 30,000 ಉದ್ಯೋಗಿಗಳಿಗೆ ವರ್ಕ್ ಫಮ್ ಹೋಂ ನೀಡಿದ ಟೆಕ್ ಕಂಪೆನಿ
- Technology Earbuds: 2000 ರೂ. ಒಳಗೆ ಲಭ್ಯ ಇರುವ ಅತ್ಯುತ್ತಮ ಇಯರ್ಬಡ್ಸ್! ಸಖತ್ ಫೀಚರ್ಸ್...
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕನ್ನಡತನಕ್ಕೆ ಡಬ್ಬಿಂಗ್ ಕೊಡಲಿ: ಮುಖ್ಯಮಂತ್ರಿ ಚಂದ್ರು
ಕೊರೊನಾ ಕಾಲದಲ್ಲಿ ಡಬ್ಬಿಂಗ್ ಧಾರಾವಾಹಿಗಳು ನಿಧಾನಕ್ಕೆ ಕನ್ನಡ ಟಿವಿಗಳನ್ನು ಪ್ರವೇಶಿಸಿ ಬಾಹುಗಳನ್ನು ವಿಸ್ತರಿಸುತ್ತಾ ಸಾಗಿವೆ.
Recommended Video
ಹಿಂದಿಯ ಮಹಾಭಾರತ, ರಾಮಾಯಣದಿಂದ ಪ್ರಾರಂಭವಾಗಿ ಪ್ರಸ್ತುತ ಸಿಬಿಐ ಹಾಗೂ ಇನ್ನಿತರೆ ಧಾರಾವಾಹಿಗಳು ಸಹ ಕನ್ನಡ ಡಬ್ಬಿಂಗ್ ಮೂಲಕ ಟಿವಿಗಳನ್ನು ಪ್ರವೇಶಿಸುತ್ತಿವೆ.
ಯಾವ ಚಿತ್ರವೂ ಮಾಡದ ವಿಶೇಷ ದಾಖಲೆ ಬರೆದ ಅಲ್ಲು ಅರ್ಜುನ್ ನಟನೆಯ 'ಸರೈನೋಡು'
ಡಬ್ಬಿಂಗ್ ಧಾರಾವಾಹಿಗಳ ವಿರುದ್ಧ ಮುಖ್ಯಮಂತ್ರಿ ಚಂದ್ರು ಸೇರಿದಂತೆ ಕೆಲವು ಹಿರಿಯ ಕಲಾವಿದರು, ರಂಗಭೂಮಿ ಕಲಾವಿದರೂ ಸೇರಿ ಪ್ರತಿಭಟನಾರ್ತಕ ಪತ್ರವೊಂದನ್ನು ಇಂದು ಪತ್ರಿಕೆಯೊಂದಕ್ಕೆ ಬರೆದಿದ್ದು, ಪತ್ರವು ಸಾಕಷ್ಟು ವೈರಲ್ ಆಗಿದೆ. ಆ ಮೂಲಕ ಡಬ್ಬಿಂಗ್ ವಿರೋಧ ಚರ್ಚೆಯೊಂದು ಹುಟ್ಟಿಕೊಂಡಿದೆ.
ಉತ್ತರದ ಸಂಸ್ಕೃತಿಯ ಹೇರಿಕೆ: ಮುಖ್ಯಮಂತ್ರಿ ಚಂದ್ರು
ಫಿಲ್ಮೀಬೀಟ್ ಕನ್ನಡ ಜೊತೆ ಮಾತನಾಡಿದ ಮುಖ್ಯಮಂತ್ರಿ ಚಂದ್ರು, ಡಬ್ಬಿಂಗ್ ಎನ್ನುವುದು ಪ್ರಾದೇಶಿಕತನಕ್ಕೆ ಕೊಡಲಿ ಪೆಟ್ಟು ಎಂದರು. ಡಬ್ಬಿಂಗ್ ಎನ್ನುವುದು ಪ್ರಾದೇಶಿಕತನದ ಮೇಲೆ ಉತ್ತರದ ಸಂಸ್ಕೃತಿಯ ಹೇರಿಕೆಯಾಗಿದೆ ಇದರ ಬಗ್ಗೆ ಸರ್ಕಾರ ಮಧ್ಯಪ್ರವೇಶಿಸಬೇಕು ಎಂದರು.
ಸಾವಿರಾರು ಮಂದಿಯ ಕೆಲಸ ಕಸಿದಿದೆ ಡಬ್ಬಿಂಗ್
ಡಬ್ಬಿಂಗ್ ಧಾರಾವಾಹಿಗಳು ಸ್ಥಳೀಯರಾದ ನೂರಾರು, ಸಾವಿರಾರು ಮಂದಿಯ ಕೆಲಸಗಳನ್ನು ಕಸಿದುಕೊಳ್ಳುತ್ತಿದೆ. ಇದರ ಜೊತೆಗೆ ದೊಡ್ಡ ಮಟ್ಟದಲ್ಲಿ ಕನ್ನಡ ಸಂಸ್ಕೃತಿಕೆ, ಈ ನೆಲದ ಮೂಲ ಸಂಸ್ಕೃತಿಗೆ ಹಾನಿ ಮಾಡುತ್ತಿದೆ ಎಂದು ಹೇಳಿದರು.
ಪ್ರಭಾಸ್ ಸಿನಿಮಾ ಬಹಿಷ್ಕರಿಸಲು ಆಗ್ರಹ: ಕನ್ನಡಿಗರ ಅಸಮಾಧಾನಕ್ಕೆ ಕಾರಣವೇನು?
ವಿಜ್ಞಾನ, ಕ್ರೀಡೆ, ಶಿಕ್ಷಣ ಡಬ್ಬಿಂಗ್ಗೆ ವಿರೋಧವಿಲ್ಲ
ವಿಜ್ಞಾನ, ಕ್ರೀಡೆ, ಶಿಕ್ಷಣ ಇಂಥಹಾ ವಿಷಯಕ್ಕೆ ಡಬ್ಬಿಂಗ್ ಮಾಡಿದರೆ ನಮ್ಮ ವಿರೋಧಿವಿಲ್ಲ. ಆದರೆ ಸಂಸ್ಕೃತಿಯನ್ನು ಪ್ರತಿನಿಧಿಸುವ ಸಾಹಿತ್ಯ, ಸಂಸ್ಕೃತಿ, ಸಿನಿಮಾ, ಧಾರಾವಾಹಿಗಳು ಡಬ್ಬಿಂಗ್ ಅನ್ನು ನೆಚ್ಚಿಕೊಂಡರೆ, ನಮ್ಮತನ ಉಳಿಯುವುದಿಲ್ಲ ಎಂದು ಮುಖ್ಯಮಂತ್ರಿ ಚಂದ್ರು ಅಭಿಪ್ರಾಯಪಟ್ಟರು.
'ಪ್ರತಿಭಟನೆಗಳೇ ಮಾಡಲಾಗದ ಕಾಲದಲ್ಲಿ ನಾವಿದ್ದೇವೆ'
ಸಿನಿಮಾಗಳಲ್ಲಿ ದೊಡ್ಡ ಮಟ್ಟದಲ್ಲಿ ಪ್ರತಿಭಟನೆಗಳನ್ನು ಮಾಡಿದರು, ಆದರೆ ಟಿವಿ ವಿಭಾಗದಲ್ಲಿ ಈ ಒಗ್ಗಟ್ಟು ಕಾಣುತ್ತಿಲ್ಲ. ಅದೂ ಅಲ್ಲದೆ ಕೊರೊನಾ ಸಮಯದಲ್ಲಿ ಸಂಘಟನೆ, ಪ್ರತಿಭಟನೆಗಳು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ. ಟಿವಿ ಸಂಬಂಧಿತ ಸಂಘಟನೆಗಳು ಈ ಸೀಮಿತ ಪರಿಸ್ಥಿತಿಯಲ್ಲಿ ಕೈಲಾದ ಪ್ರತಿಭಟನೆಯನ್ನು ಡಬ್ಬಿಂಗ್ ವಿರುದ್ಧ ತೋರಲೇ ಬೇಕು ಎಂದು ಅವರು ಹೇಳಿದರು.
ಡಬ್ಬಿಂಗ್ ಧಾರಾವಾಹಿ ಒಪ್ಪಿಕೊಂಡ ವೀಕ್ಷಕರು: ಹೆಚ್ಚಿದ ಟೆಲಿವಿಷನ್ ರೇಟಿಂಗ್