Don't Miss!
- Technology Vivo: ಶೀಘ್ರದಲ್ಲೇ ವಿವೋ Y38 5G ಸ್ಮಾರ್ಟ್ಫೋನ್; ವಿನ್ಯಾಸ ಮತ್ತು ಫೀಚರ್ಸ್ ಲೀಕ್
- News ಬೆಂಗಳೂರಿನಲ್ಲಿ ಮೋದಿ ಮತಬೇಟೆ; ರಾಜ್ಯಕ್ಕೆ ಪ್ರಧಾನಿ ಮೋದಿಯ ಕೊಡುಗೆ ಏನಿದೆ?: ಡಾ.ಜಿ ಪರಮೇಶ್ವರ್
- Sports DC vs SRH: ಹೈದರಾಬಾದ್ ಬ್ಯಾಟರ್ಗಳನ್ನು ಕಟ್ಟಿಹಾಕಲಿದ್ದಾರಾ ಡೆಲ್ಲಿ ಬೌಲರ್ಸ್?; ಸಂಭಾವ್ಯ ಆಡುವ 11ರ ಬಳಗ
- Automobiles Mahindra: ದೊಡ್ಡ ಅಪಘಾತ ತಪ್ಪಿಸಿತು XUV700 ಕಾರಿನ ಈ ಸೇಫ್ಟಿ ಫೀಚರ್: ಎಲ್ಲರೂ ಸೇಫ್!
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ನಾಗಾಲೋಟದಲ್ಲಿ ‘ಕೋದಂಡರಾಮ’ನ ಮುನ್ನಡೆ
ಕ್ರೇಜಿಸ್ಟಾರ್ ರವಿಚಂದ್ರನ್ ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ ಅಪೂರ್ವ ಸಂಗಮದ 'ಕೋದಂಡರಾಮ" ಚಿತ್ರಕ್ಕೆ ಭರದಿಂದ ಚಿತ್ರೀಕರಣ ಸಾಗಿದೆ. ಶ್ರೀಲಕ್ಷ್ಮೀ ಪ್ರೊಡಕ್ಷನ್ಸ್ ಲಾಂಛನದ ಈ ಚಿತ್ರಕ್ಕೆ ಜೆಡ್ ಗಾರ್ಡನ್ನಲ್ಲಿ ವೈಭವಪೂರ್ಣ ಮುಹೂರ್ತ ನಡೆದಿತ್ತು.
ಈಗ ಕನಕಪುರ ಬಳಿಯ ವೆಂಕಟ್ ತೋಟದ ಮನೆಯಲ್ಲಿ ಸೆಪ್ಟೆಂಬರ್ 26ರಿಂದ ಎರಡನೇ ಹಂತದ ಚಿತ್ರೀಕರಣ ಭರದಿಂದ ಸಾಗಿದೆ. ರವಿಚಂದ್ರನ್, ಸಾಕ್ಷಿ ಶಿವಾನಂದ್, ಶಿವರಾಜ್ಕುಮಾರ್, ಲಕ್ಷ್ಮಣ್, ಶೈಲಜಾ ಜೋಷಿ ಅವರು ಈ ಹಂತದ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾರೆ. ತೆಂಕಾಸಿ ಪಟ್ನಂ ಎಂಬ ಮಲೆಯಾಳಿ ಚಿತ್ರದ ಕಥೆ ಆಧರಿಸಿದ ಈ ಚಿತ್ರವನ್ನು ವಿ. ರವಿಚಂದ್ರನ್ ಚಿತ್ರಕತೆ, ಸಂಭಾಷಣೆ, ಹಾಡುಬರೆದು, ಸಂಗೀತ ಸಂಯೋಜಿಸಿ ನಿರ್ದೇಶಿಸುತ್ತಿದ್ದಾರೆ. ಈಶ್ವರಿ ಪ್ರೊಡಕ್ಷನ್ಸ್ ಅವರ ಚಪ್ಪಾಳೆ ಚಿತ್ರದಲ್ಲೇ ಜೊತೆಯಾಗಿ ನಟಿಸಬೇಕಾಗಿದ್ದ ರವಿ-ಶಿವು ಈ ಚಿತ್ರದಲ್ಲಿ ಒಟ್ಟಾಗಿ ನಟಿಸುತ್ತಿದ್ದಾರೆ.
ಭೀಷ್ಮ: ಪ್ರಮೋದ್ ಹಾಗೂ ಶೇಷು ಚಕ್ರವರ್ತಿ ಸೋದರರ 'ಭೀಷ್ಮ "ಕ್ಕೆ ಅಕ್ಟೋಬರ್ 8ರಿಂದ ಡಬ್ಬಿಂಗ್ ನಡೆಯಲಿದೆ. ಒಂದೇ ಹಂತದಲ್ಲಿ ಚಿತ್ರೀಕರಣ ಮುಗಿಸಿರುವ ಭೀಷ್ಮ ಮಾತಿನ ಮನೆಗೆ ಅವಸರದಿಂದ ಹೊರಟಿದ್ದಾನೆ.
ಈ ಚಿತ್ರದ ತಾರಾಗಣದಲ್ಲಿ ದೇವರಾಜ್, ತಾರಾ, ಪ್ರಮೋದ್ ಚಕ್ರವರ್ತಿ, ಅರವಿಂದ್, ಮೈಕಲ್, ತನುಜಾ, ಗಿರಿಶೆಟ್ಟಿ, ರೇಣುಕಾಪ್ರಸಾದ್, ಮಹಿಮಾ ಇದ್ದಾರೆ. ನಿರ್ದೇಶಕ ಸಾಯಿಪ್ರಕಾಶ್ ಸಹ ವಿಶಿಷ್ಟ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಪ್ರೀತಿಮಾಡೋ ಹುಡುಗುಗರಿಗೆಲ್ಲಾ...: ಬಿ.ಎನ್. ಗಂಗಾಧರ್ ಎ.ಎನ್.ಎಸ್. ಪ್ರೊಡಕ್ಷನ್ಸ್ ಲಾಂಛನದಲ್ಲಿ ನಿರ್ಮಿಸುತ್ತಿರುವ ಪ್ರೀತಿ ಮಾಡೋ ಹುಡುಗರಿಗೆಲ್ಲಾ... ಚಿತ್ರದ ಚಿತ್ರೀಕರಣ ಮುಗಿದಿದ್ದು, ಮಾತುಗಳ ಮರುಜೋಡಣೆ ಕಾರ್ಯ ವಸಂತ್ ಸಂಕೇತ್ ಸಂಗಮದ ಧ್ವನಿಗ್ರಹಣ ಕೇಂದ್ರದಲ್ಲಿ ಮುಗಿದಿದೆ.
ಈ ಚಿತ್ರಕ್ಕೆ ಊಟಿಯಲ್ಲಿ ಎರಡು ಹಾಡುಗಳ ಚಿತ್ರೀಕರಣ ನಡೆಸಲಾಗಿದೆ. ಹಂಸಲೇಖರ ಗೀತಸಂಗೀತ, ಪ್ರಸಾದ್ ನೃತ್ಯ, ಶಿವು ಸಾಹಸ ಇರುವ ಈ ಚಿತ್ರದ ನಿರ್ದೇಶಕರು ಮಿಸ್ಟರ್ ಹರಿಶ್ಚಂದ್ರ ಖ್ಯಾತಿಯ ಆರ್.ಸಿ. ರಂಗಾ. ತಾರಾಬಳಗದಲ್ಲಿ ರಮೇಶ್ಪಂಡಿತ್, ನವೀನ್, ಮಯೂರ್, ಅರುಣ, ಪದ್ಮಾವಾಸಂತಿ, ಅರವಿಂದ್, ಭರತ್, ಅಶೋಕ್ ಬಾದರದಿನ್ನಿ ಮೊದಲಾದವರಿದ್ದಾರೆ.