Don't Miss!
- News Tulsi Gowda: ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ತುಳಸಿ ಗೌಡ ಆರೋಗ್ಯದಲ್ಲಿ ಏರುಪೇರು: ಐಸಿಯುಗೆ ದಾಖಲು
- Finance ಎವರೆಸ್ಟ್ ಮಾತ್ರವಲ್ಲ ಎಂಡಿಎಚ್ನ ಉತ್ಪನ್ನದಲ್ಲೂ ಕೀಟನಾಟಕ ಪತ್ತೆ
- Sports ಟಿ20 ವಿಶ್ವಕಪ್ನಲ್ಲಿ ವಿರಾಟ್ ಕೊಹ್ಲಿಗೆ ಬ್ಯಾಟಿಂಗ್ ಕ್ರಮಾಂಕ ನೀಡಿದ ಆರೋನ್ ಫಿಂಚ್
- Lifestyle ರಾಜ್ಯದಲ್ಲಿ ಮುಂದಿನ 1 ವಾರ ಹವಾಮಾನ ಹೇಗಿರಲಿದೆ? ಎಲ್ಲೆಲ್ಲಿ ಮಳೆಯಾಗಲಿದೆ?
- Technology ಲಾವಾ ಅಗ್ನಿ 2 5G ಮೊಬೈಲ್ ಬೆಲೆಯಲ್ಲಿ ದಿಢೀರ್ ಇಳಿಕೆ; ಗ್ರಾಹಕರಿಗೆ ಖುಷಿ!
- Automobiles ಮಾರುಕಟ್ಟೆಯಲ್ಲಿ ಸುನಾಮಿ ಎಬ್ಬಿಸಲು ಹೊಸ ಟೊಯೊಟಾ ಫಾರ್ಚುನರ್ ಲೀಡರ್ ಎಡಿಷನ್ ಅನಾವರಣ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ದುನಿಯಾ ರಶ್ಮಿ ಯಾರ್ ಜೊತೆಗೂ ಮಾತಾಡುತ್ತಿಲ್ಲ ಯಾಕೆ?
ಸಾಮಾನ್ಯವಾಗಿ ಹುಡುಗಿರು ತುಂಬ ಮಾತಾನಾಡುತ್ತಾರೆ. ಆದರೆ, ನಟಿ ದುನಿಯಾ ರಶ್ಮಿ ಈಗ ಯಾರ್ ಜೊತೆಗೂ ಮಾತನಾಡುತ್ತಿಲ್ಲ. ಹಾಗಂತ ಅದು ರಿಯಲ್ ಲೈಫ್ ನಲ್ಲಿ ಅಲ್ಲ ಸಿನಿಮಾದಲ್ಲಿ ಮಾತ್ರ.
ರಶ್ಮಿ ಈಗ 'ಕಾರ್ನಿ' ಎಂಬ ಹೊಸ ಸಿನಿಮಾ ಮಾಡುತ್ತಿದ್ದಾರೆ. ಈ ಸಿನಿಮಾದ ಲೀಡ್ ರೋಲ್ ನಲ್ಲಿ ಅವರ ಕಾಣಿಸಿಕೊಳ್ಳುತ್ತಿದ್ದು, ಈ ಬಾರಿ ವಿಭಿನ್ನ ಪಾತ್ರವನ್ನು ಅವರು ಪ್ರಯತ್ನ ಮಾಡಿದ್ದಾರೆ. ಯಾಕೆಂದರೆ, ಈ ಚಿತ್ರದಲ್ಲಿ ಅವರು ಕೇವಲ ಸನ್ನೆ ಮೂಲಕ ನಟನೆ ಮಾಡಿದ್ದಾರೆ.
'ಕಾರ್ನಿ' ಎಂಬುದು ಸಂಸ್ಕೃತ ಪದವಾಗಿದ್ದು, ದೇವಿಯ ಆಯುಧದ ಹೆಸರಂತೆ. ಈ ಸಿನಿಮಾದಲ್ಲಿ ರಶ್ಮಿಗೆ ಯಾವುದೇ ಡೈಲಾಗ್ ಗಳು ಇಲ್ಲ. ಎರಡು ಸೀನ್ ಗಳನ್ನು ಬಿಟ್ಟರೆ ಇಡೀ ಸಿನಿಮಾ ಅವರು ಸೈಲೆಂಟ್ ಆಗಿ ಇರುತ್ತಾರಂತೆ.
ಅಂದಹಾಗೆ, ಎರಡು ವರ್ಷಗಳ ನಂತರ ಮತ್ತೆ ಸಿನಿಮಾ ಶುರು ಮಾಡಿರುವ ರಶ್ಮಿ ಅವರು ಈ ರೀತಿಯ ಪಾತ್ರವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ವಿನೋದ್ ಕುಮಾರ್ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದು, ನಿರಂತ್ ನಾಯಕನಾಗಿದ್ದಾರೆ. ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಕಥೆಯನ್ನು ಹೊಂದಿದೆ.