Don't Miss!
- Finance ಬೆಂಗಳೂರು-ತುಮಕೂರು ನಮ್ಮ ಮೆಟ್ರೋ ಯೋಜನೆ: ಬರಲಿವೆ 19 ಎತ್ತರದ ನಿಲ್ದಾಣಗಳು
- News ಬೆಳಗಾವಿಯಲ್ಲಿ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಆರೋಪ: ಲಕ್ಷ್ಮಿ ಹೆಬ್ಬಾಳ್ಕರ್ಗೆ ಸಮನ್ಸ್ ಜಾರಿ
- Technology iPhone: ಆಪಲ್ ಅಂತಿಮವಾಗಿ ಐಫೋನ್ 12 ಬಳಕೆದಾರರಿಗೆ ಗುಡ್ ನ್ಯೂಸ್ ನೀಡಿಯೇ ಬಿಟ್ಟಿತು! ಏನದು?
- Automobiles Tata Nexon: ಟಾಟಾ ನೆಕ್ಸಾನ್ ಹೊಸ ರೂಪಾಂತರಗಳು ಬಿಡುಗಡೆ, ರೂ.10 ಲಕ್ಷ ಬೆಲೆ.. ಆಕರ್ಷಕ ವೈಶಿಷ್ಟ್ಯಗಳು
- Sports Riyan Parag: 'ಗಾಯದಿಂದ ಮೂರು ದಿನ ಒದ್ದಾಡಿ ಹೋಗಿದ್ದೆ': ರಿಯಾನ್ ಪರಾಗ್
- Lifestyle ಗುಡ್ಫ್ರೈಡೆ ಆಚರಣೆ ಹುಟ್ಟಿದ್ದು ಹೇಗೆ? ಇದರ ಮಹತ್ವವೇನು ಗೊತ್ತಾ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ರೀಲ್ ಮೇಲೆ ಮತ್ತೊಬ್ಬ ರಿಯಲ್ ರೌಡಿಯ ಕರಾಳ ಅಧ್ಯಾಯ
'ಕೆಂಡಸಂಪಿಗೆ' ಮತ್ತು 'ದೊಡ್ಮನೆ ಹುಡುಗ' ಜೊತೆ ಜೊತೆಗೆ ದುನಿಯಾ ಸೂರಿ ಮತ್ತೊಂದು ಸಿನಿಮಾ ಮಾಡುತ್ತಿರುವ ಸುದ್ದಿಯನ್ನ ನಾವೇ ನಿಮಗೆ ಹೇಳಿದ್ವಿ. ಖ್ಯಾತ ಪತ್ರಕರ್ತ ಅಗ್ನಿ ಶ್ರೀಧರ್ ಜೊತೆಗೂಡಿ ದುನಿಯಾ ಸೂರಿ ಒಂದು ರಿಯಲಿಸ್ಟಿಕ್ ಸಿನಿಮಾ ಮಾಡೋಕೆ ಮನಸ್ಸು ಮಾಡಿರುವ ಬಗ್ಗೆ ನಿಮ್ಮ ನೆಚ್ಚಿನ 'ಫಿಲ್ಮಿಬೀಟ್ ಕನ್ನಡ'ದಲ್ಲಿ ಓದಿದ್ರಿ.
ಇದೀಗ ಆ ರಿಯಲ್ ಸ್ಟೋರಿ ಯಾವುದು ಅನ್ನೋದು ಬಯಲಾಗಿದೆ. ಹಾಗಾದ್ರೆ, ಸೂರಿ ನಿರ್ದೇಶಿಸುತ್ತಿರುವ 'ರಿಯಲ್' ಕಥೆ ಯಾರದ್ದು? ಒಂದ್ಕಾಲದ ರೌಡಿ 'ಸೈಲೆಂಟ್ ಸುನೀಲ'ರದ್ದು!
ಹೌದು, ಭೂಗತ ಜಗತ್ತಿನ ಕುಖ್ಯಾತ ರೌಡಿ ಸೈಲೆಂಟ್ ಸುನೀಲನ ರಕ್ತಸಿಕ್ತ ಅಧ್ಯಾಯ ತೆರೆಮೇಲೆ ಅನಾವರಣವಾಗಲಿದೆ. ನಿಜ ಜೀವನದ ಕಥೆ ಆದ್ದರಿಂದ ಚಿತ್ರಕ್ಕೆ 'ಸೈಲೆಂಟ್ ಸುನೀಲ' ಅಂತಲೇ ನಾಮಕರಣ ಮಾಡಿದ್ದಾರೆ ನಿರ್ದೇಶಕ ದುನಿಯಾ ಸೂರಿ.
ಕುಖ್ಯಾತ ರೌಡಿ ಬೆಕ್ಕಿನ ಕಣ್ಣು ರಾಜೇಂದ್ರನ ಮರ್ಡರ್ ಕೇಸ್ ನಲ್ಲಿ ತಗಲಾಕೊಂಡಿದ್ದ ಸೈಲೆಂಟ್ ಸುನೀಲ, ತಮ್ಮ ನಿಜ ಜೀವನದ ಪಾತ್ರವನ್ನ ತೆರೆಮೇಲೂ ಪೋಷಿಸುತ್ತಿರುವುದು ಇಲ್ಲಿನ ವಿಶೇಷ. ಅರ್ಥಾತ್ 'ರಿಯಲ್' ಸೈಲೆಂಟ್ ಸುನೀಲ, 'ರೀಲ್'ನಲ್ಲಿ ತಮ್ಮ ಪಾತ್ರವನ್ನ ತಾವೇ ನಿಭಾಯಿಸಿ 'ಹೀರೋ' ಆಗುತ್ತಿದ್ದಾರೆ.
ಅದಾಗಲೇ ಸದ್ದಿಲ್ಲದೇ ಚಿತ್ರೀಕರಣಕ್ಕೂ ಚಾಲನೆ ನೀಡಿದ್ದಾರೆ ದುನಿಯಾ ಸೂರಿ. ಆಗ್ನಿ ಶ್ರೀಧರ್ ರವರ ಮೇಘ ಮೂವೀಸ್ ಬ್ಯಾನರ್ ನಲ್ಲಿ ಚಿತ್ರ ನಿರ್ಮಾಣವಾಗುತ್ತಿದೆ. ದುನಿಯಾ ಸೂರಿ ಕ್ಯಾಂಪಿನ ಕ್ಯಾಮರಾಮೆನ್ ಸತ್ಯ ಹೆಗಡೆ, ಸಂಕಲನಕಾರ ದೀಪು.ಎಸ್.ಕುಮಾರ್ ಇಲ್ಲೂ ಮುಂದುವರೆಯಲಿದ್ದಾರೆ. [ಅಗ್ನಿ ಶ್ರೀಧರ್ ಜೊತೆ ದುನಿಯಾ ಸೂರಿ 'ದಾದಾಗಿರಿ']
ಅಷ್ಟುಬಿಟ್ಟರೆ, ಪಾತಕ ಲೋಕದಲ್ಲಿ ಒಂದು ದಶಕದ ಕಾಲ ಮೆರೆದ 'ಸೈಲೆಂಟ್ ಸುನೀಲ'ನ ಜೊತೆ ಚಿತ್ರದಲ್ಲಿ ಯಾರ್ಯಾರು ಇರಲಿದ್ದಾರೆ ಅಂತ ಫೈನಲ್ ಆಗಿಲ್ಲ. ಅದೇನೇ ಇರಲಿ, ಅಗ್ನಿ ಶ್ರೀಧರ್ ಕಿಸೆಯಿಂದ ದುನಿಯಾ ಸೂರಿ ಕೃಪೆಯಿಂದ ಬೆಳ್ಳಿತೆರೆ ಮೇಲೆ ಮತ್ತೊಮ್ಮೆ 'ರಿಯಲ್' ರೌಡಿಗಳ ರುದ್ರನರ್ತನ ನಡೆಯಲಿದೆ. (ಏಜೆನ್ಸೀಸ್)