twitter
    For Quick Alerts
    ALLOW NOTIFICATIONS  
    For Daily Alerts

    ಡಿಸಿಪಿ ಅಣ್ಣಾಮಲೈ ಮುಂದೆ ದುನಿಯಾ ವಿಜಯ್ ಫ್ಯಾಮಿಲಿ ಹಾಜರ್

    |

    ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿ ಅಣ್ಣಾಮಲೈ ಎದುರು ನಟ ದುನಿಯಾ ವಿಜಯ್ ಕುಟುಂಬ ಇಂದು ಹಾಜರ್ ಆಗಿ ಹೇಳಿಕೆ ನೀಡಿದೆ.

    ಆಗಾಗ ಜಗಳ ಮಾಡಿಕೊಳ್ಳುತ್ತಿರುವ ದುನಿಯಾ ವಿಜಯ್ ಕುಟುಂಬದಿಂದ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗುತ್ತಿದೆ ಎಂದು ಸಿ.ಆರ್.ಪಿ.ಸಿ ಸೆಕ್ಷನ್ 107 ರ ಅಡಿಯಲ್ಲಿ ಗಿರಿನಗರ ಪೊಲೀಸರು ದುನಿಯಾ ವಿಜಯ್ ಕುಟುಂಬದ ವಿರುದ್ಧ ಸ್ವಯಂಪ್ರೇರಿತ ದೂರ ದಾಖಲಿಸಿಕೊಂಡಿದ್ದರು.

    ಮಾಧ್ಯಮಗಳೆದುರು ಕೈಮುಗಿದ ದುನಿಯಾ ವಿಜಯ್‌

    ಈ ದೂರಿನ ಅನ್ವಯ ದುನಿಯಾ ವಿಜಯ್ ಕುಟುಂಬದ ಸದಸ್ಯರನ್ನು ಡಿಸಿಪಿ ಅಣ್ಣಾಮಲೈ ವಿಚಾರಣೆಗೆ ಒಳಪಡಿಸಿದರು. ಎಲ್ಲರ ಹೇಳಿಕೆಗಳನ್ನು ದಾಖಲಿಸಿಕೊಂಡ ಬಳಿಕ ದುನಿಯಾ ವಿಜಯ್ ರಿಂದ ಐದು ಲಕ್ಷ ಶ್ಯೂರಿಟಿ ಹಾಗೂ ಮುಚ್ಚಳಿಕೆಯನ್ನ ಬರೆಯಿಸಿಕೊಳ್ಳಲಾಗಿದೆ.

    Duniya Vijay and Family attend inquiry in DCP Office

    ದುನಿಯಾ ವಿಜಯ್ ವಿರುದ್ಧ ಜಾರ್ಚ್ ಶೀಟ್ ಸಲ್ಲಿಕೆದುನಿಯಾ ವಿಜಯ್ ವಿರುದ್ಧ ಜಾರ್ಚ್ ಶೀಟ್ ಸಲ್ಲಿಕೆ

    ''ನಾನು ಶಾಂತಿ ಕದಡುವ ಪ್ರಯತ್ನ ಮಾಡಿಲ್ಲ. ಕಾನೂನಿಗೆ ಧಕ್ಕೆ ತಂದಿಲ್ಲ. ಪೊಲೀಸರು ತಮ್ಮ ಕರ್ತವ್ಯ ಮಾಡುತ್ತಿದ್ದಾರೆ. ಎಲ್ಲರಿಗೂ ಒಳ್ಳೆದಾಗಲಿ'' ಎಂದು ಮಾಧ್ಯಮಗಳಿಗೆ ದುನಿಯಾ ವಿಜಯ್ ತಿಳಿಸಿದರು.

    ದುನಿಯಾ ವಿಜಿ ಪತ್ನಿ ನಾಗರತ್ನಗೆ ನಿರೀಕ್ಷಣಾ ಜಾಮೀನುದುನಿಯಾ ವಿಜಿ ಪತ್ನಿ ನಾಗರತ್ನಗೆ ನಿರೀಕ್ಷಣಾ ಜಾಮೀನು

    ಇತ್ತ ನಾಗರತ್ನ ಕೂಡ ಡಿಸಿಪಿ ಅಣ್ಣಾಮಲೈ ಎದುರು ಹಾಜರ್ ಆಗಬೇಕಿದೆ. ಇಷ್ಟು ದಿನ ನಾಪತ್ತೆ ಆಗಿದ್ದ ನಾಗರತ್ನಗೆ ಮಧ್ಯಂತರ ಜಾಮೀನು ಸಿಕ್ಕಿದೆ. ಇನ್ನಾದರೂ ಪೊಲೀಸರ ಮುಂದೆ ನಾಗರತ್ನ ಪ್ರತ್ಯಕ್ಷವಾಗುತ್ತಾರಾ, ನೋಡಬೇಕು.

    English summary
    Duniya Vijay and Family attend inquiry in DCP Office.
    Wednesday, November 7, 2018, 17:55
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X