ಡಿಸಿಪಿ ಅಣ್ಣಾಮಲೈ ಮುಂದೆ ದುನಿಯಾ ವಿಜಯ್ ಫ್ಯಾಮಿಲಿ ಹಾಜರ್
ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿ ಅಣ್ಣಾಮಲೈ ಎದುರು ನಟ ದುನಿಯಾ ವಿಜಯ್ ಕುಟುಂಬ ಇಂದು ಹಾಜರ್ ಆಗಿ ಹೇಳಿಕೆ ನೀಡಿದೆ.
ಆಗಾಗ ಜಗಳ ಮಾಡಿಕೊಳ್ಳುತ್ತಿರುವ ದುನಿಯಾ ವಿಜಯ್ ಕುಟುಂಬದಿಂದ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗುತ್ತಿದೆ ಎಂದು ಸಿ.ಆರ್.ಪಿ.ಸಿ ಸೆಕ್ಷನ್ 107 ರ ಅಡಿಯಲ್ಲಿ ಗಿರಿನಗರ ಪೊಲೀಸರು ದುನಿಯಾ ವಿಜಯ್ ಕುಟುಂಬದ ವಿರುದ್ಧ ಸ್ವಯಂಪ್ರೇರಿತ ದೂರ ದಾಖಲಿಸಿಕೊಂಡಿದ್ದರು.
ಮಾಧ್ಯಮಗಳೆದುರು ಕೈಮುಗಿದ ದುನಿಯಾ ವಿಜಯ್
ಈ ದೂರಿನ ಅನ್ವಯ ದುನಿಯಾ ವಿಜಯ್ ಕುಟುಂಬದ ಸದಸ್ಯರನ್ನು ಡಿಸಿಪಿ ಅಣ್ಣಾಮಲೈ ವಿಚಾರಣೆಗೆ ಒಳಪಡಿಸಿದರು. ಎಲ್ಲರ ಹೇಳಿಕೆಗಳನ್ನು ದಾಖಲಿಸಿಕೊಂಡ ಬಳಿಕ ದುನಿಯಾ ವಿಜಯ್ ರಿಂದ ಐದು ಲಕ್ಷ ಶ್ಯೂರಿಟಿ ಹಾಗೂ ಮುಚ್ಚಳಿಕೆಯನ್ನ ಬರೆಯಿಸಿಕೊಳ್ಳಲಾಗಿದೆ.

''ನಾನು ಶಾಂತಿ ಕದಡುವ ಪ್ರಯತ್ನ ಮಾಡಿಲ್ಲ. ಕಾನೂನಿಗೆ ಧಕ್ಕೆ ತಂದಿಲ್ಲ. ಪೊಲೀಸರು ತಮ್ಮ ಕರ್ತವ್ಯ ಮಾಡುತ್ತಿದ್ದಾರೆ. ಎಲ್ಲರಿಗೂ ಒಳ್ಳೆದಾಗಲಿ'' ಎಂದು ಮಾಧ್ಯಮಗಳಿಗೆ ದುನಿಯಾ ವಿಜಯ್ ತಿಳಿಸಿದರು.
ಇತ್ತ ನಾಗರತ್ನ ಕೂಡ ಡಿಸಿಪಿ ಅಣ್ಣಾಮಲೈ ಎದುರು ಹಾಜರ್ ಆಗಬೇಕಿದೆ. ಇಷ್ಟು ದಿನ ನಾಪತ್ತೆ ಆಗಿದ್ದ ನಾಗರತ್ನಗೆ ಮಧ್ಯಂತರ ಜಾಮೀನು ಸಿಕ್ಕಿದೆ. ಇನ್ನಾದರೂ ಪೊಲೀಸರ ಮುಂದೆ ನಾಗರತ್ನ ಪ್ರತ್ಯಕ್ಷವಾಗುತ್ತಾರಾ, ನೋಡಬೇಕು.


Click it and Unblock the Notifications











