twitter
    For Quick Alerts
    ALLOW NOTIFICATIONS  
    For Daily Alerts

    ಇಂದು ವಿಚಾರಣಾಧೀನ ಖೈದಿಗಳ ಕೊಠಡಿಗೆ ವಿಜಯ್ ಅಂಡ್ ಗ್ಯಾಂಗ್ ಶಿಫ್ಟ್.!

    |

    Recommended Video

    ಬೇಲೂ ಇಲ್ಲ, ಊಟಾನೂ ಇಲ್ಲ ವಿಜಯ್ & ಟೀಂಗೆ..! | Filmibeat Kannada

    ತೆರೆ ಮೇಲೆ ಹೀರೋ ಆಗಿ... ಝಬರ್ದಸ್ತ್ ಫೈಟ್ ಮಾಡುತ್ತಾ... ದುಷ್ಟರ ರುಂಡ ಚೆಂಡಾಡುತ್ತಿದ್ದ ದುನಿಯಾ ವಿಜಯ್ ನಿಜ ಜೀವನದಲ್ಲೂ ಒಬ್ಬರ ಮೇಲೆ ಹಲ್ಲೆ ನಡೆಸಿ ಪರಪ್ಪನ ಅಗ್ರಹಾರ ಜೈಲಿನ ಅತಿಥಿ ಆಗಿದ್ದಾರೆ.

    ಜಿಮ್ ಟ್ರೈನರ್ ಹಾಗೂ ಬಾಡಿ ಬಿಲ್ಡರ್ ಮಾರುತಿ ಗೌಡ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಪರಿಣಾಮ ದುನಿಯಾ ವಿಜಯ್ ಮತ್ತು ಸಹಚರರು ಕಂಬಿ ಎಣಿಸುವಂತಾಗಿದೆ.

    ಮಾರುತಿ ಗೌಡ ಮೇಲೆ ಹಲ್ಲೆ ನಡೆಸಿರುವುದು ನಿಜ ಅಂತ ದುನಿಯಾ ವಿಜಯ್ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡರು. ಬಳಿಕ ದುನಿಯಾ ವಿಜಯ್, ಜಿಮ್ ಟ್ರೈನರ್ ಪ್ರಸಾದ್, ಡ್ರೈವರ್ ಪ್ರಸಾದ್ ಹಾಗೂ ಮಣಿ ಎಂಬುವವರನ್ನ ನಿನ್ನೆ ರಾತ್ರಿ ನ್ಯಾಯಾಧೀಶರ ಮುಂದೆ ಹಾಜರು ಪಡಿಸಲಾಗಿತ್ತು.

    ವಿಚಾರಣೆ ನಡೆಸಿದ ನ್ಯಾಯಾಧೀಶರು ದುನಿಯಾ ವಿಜಯ್ ಮತ್ತು ಗ್ಯಾಂಗ್ ಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದರು. ಹೀಗಾಗಿ ಪರಪ್ಪನ ಅಗ್ರಹಾರಕ್ಕೆ ದುನಿಯಾ ವಿಜಯ್ ಮತ್ತು ಗ್ಯಾಂಗ್ ನ ಕರೆದೊಯ್ಯಲಾಯಿತು. ಇಂದು ಅವರನ್ನ ವಿಚಾರಣಾಧೀನ ಖೈದಿಗಳ ರೂಮ್ ಗೆ ಶಿಫ್ಟ್ ಮಾಡಲಾಗುವುದು. ಮುಂದೆ ಓದಿರಿ...

    ಇಂದು ಖೈದಿಗಳ ಕೊಠಡಿಯಲ್ಲಿ ದುನಿಯಾ ವಿಜಯ್

    ಇಂದು ಖೈದಿಗಳ ಕೊಠಡಿಯಲ್ಲಿ ದುನಿಯಾ ವಿಜಯ್

    ಕೋಪದಲ್ಲಿ ಮಾಡಿಕೊಂಡ ಒಂದು ಅವಾಂತರದಿಂದ ದುನಿಯಾ ವಿಜಯ್ ಅಂಡ್ ಗ್ಯಾಂಗ್ ಇಂದು ಪರಪ್ಪನ ಅಗ್ರಹಾರದಲ್ಲಿ ಮುದ್ದೆ ಮುರಿಯುವ ಹಾಗಾಗಿದೆ. ನಿನ್ನೆ ತಡರಾತ್ರಿ ಪರಪ್ಪನ ಅಗ್ರಹಾರ ಸೇರಿದ ದುನಿಯಾ ವಿಜಯ್ ಮತ್ತು ತಂಡವನ್ನ ಇಂದು ವಿಚಾರಣಾಧೀನ ಖೈದಿಗಳ ಕೊಠಡಿಗೆ ಶಿಫ್ಟ್ ಮಾಡಲಾಗುತ್ತದೆ.

    ದುನಿಯಾ ವಿಜಿಗೆ ಸಿಕ್ಕಿಲ್ಲ ಬೇಲ್, ಪರಪ್ಪನ ಅಗ್ರಹಾರಕ್ಕೆ ಹೊರಟ 'ಕರಿಚಿರತೆ'ದುನಿಯಾ ವಿಜಿಗೆ ಸಿಕ್ಕಿಲ್ಲ ಬೇಲ್, ಪರಪ್ಪನ ಅಗ್ರಹಾರಕ್ಕೆ ಹೊರಟ 'ಕರಿಚಿರತೆ'

    ಕಂಬಿ ಹಿಂದೆ ದುನಿಯಾ ವಿಜಯ್ ಮತ್ತು ತಂಡ

    ಕಂಬಿ ಹಿಂದೆ ದುನಿಯಾ ವಿಜಯ್ ಮತ್ತು ತಂಡ

    ನಿನ್ನೆ ರಾತ್ರಿ ಪರಪ್ಪನ ಅಗ್ರಹಾರ ತಲುಪುತ್ತಿದ್ದಂತೆಯೇ, ಜೈಲಿನ ಲೆಡ್ಜರ್ ಪುಸ್ತಕದಲ್ಲಿ ದುನಿಯಾ ವಿಜಯ್, ಜಿಮ್ ಟ್ರೈನರ್ ಪ್ರಸಾದ್, ಡ್ರೈವರ್ ಪ್ರಸಾದ್ ಹಾಗೂ ಮಣಿ ಹೆಸರನ್ನ ಎಂಟ್ರಿ ಮಾಡಲಾಗಿದೆ.

    ಒಂದಲ್ಲ ಎರಡಲ್ಲ.. ದುನಿಯಾ ವಿಜಯ್ ಕಿರಿಕ್ ಗಳ ಪಟ್ಟಿ ನೋಡಿ ಒಂದಲ್ಲ ಎರಡಲ್ಲ.. ದುನಿಯಾ ವಿಜಯ್ ಕಿರಿಕ್ ಗಳ ಪಟ್ಟಿ ನೋಡಿ

    ರಾತ್ರಿ ಊಟ ಇಲ್ಲ.!

    ರಾತ್ರಿ ಊಟ ಇಲ್ಲ.!

    ನಿನ್ನೆ ರಾತ್ರಿ ಪರಪ್ಪನ ಅಗ್ರಹಾರ ತಲುಪುವಷ್ಟರಲ್ಲಿ ಊಟದ ಸಮಯ ಮುಗಿದಿದ್ದರಿಂದ, ವಿಜಯ್ ಮತ್ತು ಗ್ಯಾಂಗ್ ಗೆ ಊಟ ಲಭ್ಯವಾಗಿಲ್ಲ. ಇಂದು ಜೈಲಿನ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ಪ್ರಕ್ರಿಯೆ ಮುಗಿದ ಬಳಿಕ ನಾಲ್ವರಿಗೆ ವಿಚಾರಾಣಾಧೀನ ಖೈದಿ ನಂಬರ್ ನೀಡಿ, ವಿಚಾರಾಣಾಧೀನ ಖೈದಿಗಳ ಕೊಠಡಿಯಲ್ಲಿ ಇರಿಸಲಾಗುವುದು.

    ದುನಿಯಾ ವಿಜಿ-ಪಾನಿಪುರಿ ಕಿಟ್ಟಿ ಮಧ್ಯೆ ಇರೋ ಈ 'ಪ್ರಸಾದ್' ಯಾರು.?ದುನಿಯಾ ವಿಜಿ-ಪಾನಿಪುರಿ ಕಿಟ್ಟಿ ಮಧ್ಯೆ ಇರೋ ಈ 'ಪ್ರಸಾದ್' ಯಾರು.?

    ಗೃಹ ಸಚಿವರನ್ನ ಭೇಟಿ ಮಾಡ್ತಾರಂತೆ ಪಾನಿಪೂರಿ ಕಿಟ್ಟಿ

    ಗೃಹ ಸಚಿವರನ್ನ ಭೇಟಿ ಮಾಡ್ತಾರಂತೆ ಪಾನಿಪೂರಿ ಕಿಟ್ಟಿ

    ತಮಗೆ ಸೂಕ್ತ ನ್ಯಾಯ ದೊರಕಿಸುವಂತೆ ಕೋರಿಕೊಳ್ಳಲು ಗೃಹ ಸಚಿವರನ್ನ ಭೇಟಿ ಮಾಡಲು ಮಾರುತಿ ಗೌಡ ಚಿಕ್ಕಪ್ಪ ಪಾನಿಪೂರಿ ಕಿಟ್ಟಿ ನಿರ್ಧರಿಸಿದ್ದಾರೆ. ಕಾನೂನು ಹೋರಾಟಕ್ಕೆ ಪಾನಿಪೂರಿ ಕಿಟ್ಟಿ ಸಜ್ಜಾಗಿದ್ದಾರೆ.

    English summary
    Kannada Actor Duniya Vijay and Gang to be Parappana Agrahara jail.
    Monday, September 24, 2018, 8:19
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X