ದುನಿಯಾ ವಿಜಯ್ ಹುಟ್ಟುಹಬ್ಬಕ್ಕೆ 'ಲಕ್ಷ್ಮಣ' ಚಿತ್ರತಂಡದ ಸರ್ ಪ್ರೈಸ್
ಸ್ಯಾಂಡಲ್ ವುಡ್ ಸೂಪರ್ ಸ್ಟಾರ್, ಬ್ಲಾಕ್ ಕೋಬ್ರಾ, ಕರಿ ಚಿರತೆ ದುನಿಯಾ ವಿಜಯ್ ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಅಭಿಮಾನಿಗಳ ಜೊತೆ ತಮ್ಮ ಜನ್ಮದಿನವನ್ನ ಇವತ್ತು ಆಚರಿಸಿಕೊಂಡ ದುನಿಯಾ ವಿಜಯ್ ಗೆ ಸ್ಪೆಷಲ್ ಸರ್ ಪ್ರೈಸ್ ಸಿಕ್ಕಿದ್ದು 'ಲಕ್ಷ್ಮಣ' ಚಿತ್ರತಂಡದ ಕಡೆಯಿಂದ.
'ಲಕ್ಷ್ಮಣ' ನಿರ್ದೇಶಕ ಆರ್.ಚಂದ್ರು ಮತ್ತು ನಾಯಕ ಅನೂಪ್ ರೇವಣ್ಣ ಇವತ್ತು ದುನಿಯಾ ವಿಜಯ್ ಮನೆಗೆ ಭೇಟಿ ನೀಡಿ, ಅವರಿಗೆ ವಿಶ್ ಮಾಡಿ, ಶಾಲು-ಪೇಟ ತೊಡಿಸಿ ಸನ್ಮಾನ ಮಾಡಿದ್ದಾರೆ. [ಬೆಂಕಿ ಜೊತೆ ಸರಸವಾಡಿದ 'ಲಕ್ಷ್ಮಣ' ಹೀರೋ ಅನೂಪ್]

ಆರ್.ಚಂದ್ರು ನಿರ್ದೇಶನದ 'ಲಕ್ಷ್ಮಣ' ಚಿತ್ರದ ಚಿತ್ರೀಕರಣ ಪೂರ್ಣಗೊಂಡು ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಕಾಂಗ್ರೆಸ್ ನಾಯಕ ರೇವಣ್ಣ ಪುತ್ರ ಅನೂಪ್ ಈ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಪದಾರ್ಪಣೆ ಮಾಡುತ್ತಿದ್ದಾರೆ. ಕ್ರೇಜಿ ಸ್ಟಾರ್ ರವಿಚಂದ್ರನ್ ಈ ಚಿತ್ರದಲ್ಲಿ ಖಾಕಿ ತೊಟ್ಟು ಖಡಕ್ ಪೊಲೀಸ್ ಆಫೀಸರ್ ಪಾತ್ರ ನಿರ್ವಹಿಸಿದ್ದಾರೆ.
ಆರ್.ಚಂದ್ರುಗೆ ಆಪ್ತರಾಗಿರುವ ದುನಿಯಾ ವಿಜಯ್ ಹುಟ್ಟುಹಬ್ಬದ ಸಂದರ್ಭದಲ್ಲಿ 'ಲಕ್ಷ್ಮಣ' ಕೂಡ ಸದ್ದು ಮಾಡುತ್ತಿದ್ದಾನೆ.


Click it and Unblock the Notifications











