twitter
    For Quick Alerts
    ALLOW NOTIFICATIONS  
    For Daily Alerts

    ಪಾನಿಪುರಿ ಕಿಟ್ಟಿ ಮೇಲೂ ಬಿತ್ತು ಕೇಸ್: ಕಿಟ್ಟಿಗೂ ಎದುರಾಯ್ತು ಸಂಕಷ್ಟ

    |

    Recommended Video

    ಯಾವ ಕಾರಣಕ್ಕೆ ಕಿಟ್ಟಿ ವಿರುದ್ಧ ಎಫ್.ಐ.ಆರ್ ದಾಖಲಾಗಿದೆ..? | Filmibeat Kannada

    ಜಿಮ್ ಟ್ರೈನರ್ ಮಾರುತಿ ಗೌಡ ಅವರ ಮೇಲೆ ಹಲ್ಲೆ ಮತ್ತು ಕಿಡ್ನ್ಯಾಪ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಟ ದುನಿಯಾ ವಿಜಯ್, ಪ್ರಸಾದ್ ಸೇರಿದಂತೆ ನಾಲ್ಕು ಜನ ಬಂಧನವಾಗಿದ್ದು, ಕೇಂದ್ರ ಕಾರಗೃಹದಲ್ಲಿದ್ದಾರೆ.

    ಪಾನಿಪುರಿ ಕಿಟ್ಟಿ ಅವರ ಅಣ್ಣನ ಮಗ ಮಾರುತಿ ಗೌಡ ಅವರ ಸೂಚನೆಯಿಂತೆ ಕಿಟ್ಟಿ ದೂರು ದಾಖಲಿಸಿದ್ದರು. ಆದ್ರೀಗ, ಕಿಟ್ಟಿ ಮೇಲೂ ಕೇಸ್ ಬಿದ್ದಿದೆ.

    ಯಾರೀ ದುನಿಯಾ ವಿಜಯ್ ದುಷ್ಮನ್ 'ಪಾನಿಪೂರಿ' ಕಿಟ್ಟಿ.? ಯಾರೀ ದುನಿಯಾ ವಿಜಯ್ ದುಷ್ಮನ್ 'ಪಾನಿಪೂರಿ' ಕಿಟ್ಟಿ.?

    ಕಿಟ್ಟಿ ವಿರುದ್ಧದ ದೂರಿನ ಅನ್ವಯ ಎಫ್.ಐ.ಆರ್ ಕೂಡ ದಾಖಲಾಗಿದ್ದು, ಬಹುಶಃ ಕಿಟ್ಟಿಗೂ ಸಂಕಷ್ಟ ಎದುರಾಗಲಿದೆ. ಅಷ್ಟಕ್ಕೂ, ಪಾನಿಪೂರಿ ಕಿಟ್ಟಿ ದೂರು ನೀಡಿದ್ದು ಯಾರು.? ಯಾವ ಕಾರಣಕ್ಕಾಗಿ ದೂರು ನೀಡಲಾಗಿದೆ.? ಏನಿದೆ ಎಫ್.ಐ.ಆರ್ ಪ್ರತಿಯಲ್ಲಿ ಎಂದು ಮುಂದೆ ಓದಿ.....

    ದುನಿಯಾ ವಿಜಿ ನೀಡಿದ ದೂರು

    ದುನಿಯಾ ವಿಜಿ ನೀಡಿದ ದೂರು

    ಪಾನಿಪುರಿ ಕಿಟ್ಟಿ ಅವರು ವಿಜಿ ವಿರುದ್ಧ ದೂರು ನೀಡಿದ ಮೇಲೆ, ಈಗ ವಿಜಿ ಕಡೆಯಿಂದ ಕಿಟ್ಟಿ ಮೇಲೂ ಕೇಸ್ ದಾಖಲಾಗಿದೆ. ಕೊಲೆ ಬೆದರಿಕೆ, ಜೀವ ಬೆದರಿಕೆ ಹಾಗೂ ಹಲ್ಲೆ ಮಾಡಿದ್ದಾರೆ, ನನ್ನ ಮಗನಿಗೆ ಬೆದರಿಕೆ ಹಾಕುತ್ತಿದ್ದಾನೆ ಎಂದು ವಿಜಿ ದೂರು ನೀಡಿದ್ದಾರೆ.

    ಮಾರುತಿ ಗೌಡ ಮೇಲೆ ದುನಿಯಾ ವಿಜಯ್ ಹಲ್ಲೆಗೆ ಅಸಲಿ ಕಾರಣ ಏನು.?ಮಾರುತಿ ಗೌಡ ಮೇಲೆ ದುನಿಯಾ ವಿಜಯ್ ಹಲ್ಲೆಗೆ ಅಸಲಿ ಕಾರಣ ಏನು.?

    ಏನಿದೆ ದೂರಿನಲ್ಲಿ.?

    ಏನಿದೆ ದೂರಿನಲ್ಲಿ.?

    ''ಕಾನೂನಿನ ಬೆಲೆ ಕೊಟ್ಟು, ಪೊಲೀಸರ ಮಾತಿಗೆ ಗೌರವ ಕೊಟ್ಟು ಮಾರುತಿ ಎಂಬುವವರನ್ನ ಠಾಣೆಯ ಬಳಿ ಕರೆದುಕೊಂಡು ಬಂದಾಗ, ನನ್ನನ್ನು ಅಡ್ಡಗಟ್ಟಿ ಪಾನಿಪುರಿ ಕಿಟ್ಟಿ ಮತ್ತು ಸಹೋದರರು ನಿನ್ನನ್ನು ಕೊಲೆ ಮಾಡುತ್ತೇವೆ ಎಂದು ಬೆದರಿಕೆಯೊಡ್ಡಿದ್ದಾರೆ. ಠಾಣೆ ಬಳಿ ಬಂದಾಗ ನನಗೆ ಡಿಚ್ಚಿ ಹೊಡೆದಿದ್ದಾನೆ''

    ದುನಿಯಾ ವಿಜಿ-ಪಾನಿಪುರಿ ಕಿಟ್ಟಿ ಮಧ್ಯೆ ಇರೋ ಈ 'ಪ್ರಸಾದ್' ಯಾರು.?ದುನಿಯಾ ವಿಜಿ-ಪಾನಿಪುರಿ ಕಿಟ್ಟಿ ಮಧ್ಯೆ ಇರೋ ಈ 'ಪ್ರಸಾದ್' ಯಾರು.?

    ಕೊಲೆ ಪ್ರಯತ್ನ ಮಾಡಲಾಗಿದೆ

    ಕೊಲೆ ಪ್ರಯತ್ನ ಮಾಡಲಾಗಿದೆ

    ''ಪಾನಿಪುರಿ ಕಿಟ್ಟಿ ಮತ್ತು ಸಹಚರರು ಚಾಕುವಿನಿಂದ ಚುಚ್ಚಲು ಬಂದಿದ್ದರು. ಮಾರುತಿ ಬಂದು ಹೆದರಿಸಿದ್ದಾನೆ. ನನ್ನ ಮಗನಿಗೆ ಕೂಡ ಎದುರಿಸಿದ್ದಾನೆ. ಪಾನಿಪುರಿ ಕಿಟ್ಟಿ ಕೂಡ ಫೋನ್ ಮಾಡಿ ಧಮ್ಕಿ ಹಾಕಿದ್ದಾರೆ. ಕಾರು ಜಖಂ ಮಾಡಿದ್ದಾರೆ. ಅಪರಿಚತ ವ್ಯಕ್ತಿಯೊಬ್ಬ ಕೊಲ್ಲಲು ಮುಂದೆ ಬಂದಿದ್ದ. ದಯವಿಟ್ಟು ನನಗೆ ರಕ್ಷಣೆ ಕೊಡಿ ಮತ್ತು ಅವರ ವಿರುದ್ಧ ಕ್ರಮ ಜರುಗಿಸಬೇಕೆಂದು ಕೇಳಿಕೊಳ್ಳುತ್ತಿದ್ದೇನೆ'' ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

    'ತನ್ನ ಶ್ರಮವನ್ನ ಗಾಳಿಗೆ ತೂರಿಬಿಟ್ಟ ದುನಿಯಾ ವಿಜಿ' - ಜಗ್ಗೇಶ್ ಬೇಸರ'ತನ್ನ ಶ್ರಮವನ್ನ ಗಾಳಿಗೆ ತೂರಿಬಿಟ್ಟ ದುನಿಯಾ ವಿಜಿ' - ಜಗ್ಗೇಶ್ ಬೇಸರ

    ಕಾನೂನಾತ್ಮಕವಾಗಿ ಹೋರಾಟ

    ಕಾನೂನಾತ್ಮಕವಾಗಿ ಹೋರಾಟ

    ವಿಜಿ ಅವರ ದೂರಿನ ಹಿನ್ನೆಲೆ ಕಿಟ್ಟಿ ಅವರನ್ನ ಕರೆದು ವಿಚಾರಣೆ ನಡೆಸುವ ಸಾಧ್ಯತೆ ಇದೆ. ನಂತರ ಪೊಲೀಸರು ಏನು ಕ್ರಮ ತೆಗೆದುಕೊಳ್ಳುತ್ತಾರೆ ಎಂಬುದು ಕುತೂಹಲ ಮೂಡಿಸಿದೆ. ಮತ್ತೊಂದೆಡೆ ಕಿಟ್ಟಿ ಈ ದೂರು ಸಂಪೂರ್ಣ ಸುಳ್ಳು, ನಾನು ಕಾನೂನಾತ್ಮಕವಾಗಿ ಹೋರಾಟ ಮಾಡ್ತೀನಿ ಎಂದರು.

    ಪಾನಿಪುರಿ ಕಿಟ್ಟಿ ಜೊತೆಗಿನ 20 ವರ್ಷದ 'ಸೇಡು-ಸ್ನೇಹ'ದ ಕಥೆ ಬಿಚ್ಚಿಟ್ಟಿದ್ದ ವಿಜಿಪಾನಿಪುರಿ ಕಿಟ್ಟಿ ಜೊತೆಗಿನ 20 ವರ್ಷದ 'ಸೇಡು-ಸ್ನೇಹ'ದ ಕಥೆ ಬಿಚ್ಚಿಟ್ಟಿದ್ದ ವಿಜಿ

    English summary
    Kannada actor Duniya vijay duniya vijay failed complaint against panipuri kitty at high ground police station.
    Tuesday, September 25, 2018, 20:31
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X