Don't Miss!
- News 11 ಕೋಟಿ ಮಹಿಳೆಯರಿಗೆ ಅಡುಗೆ ಅನಿಲ: ಡಾ. ಕೆ. ಸುಧಾಕರ್
- Sports RCB vs KKR IPL 2024: ಕೆಕೆಆರ್ ವಿರುದ್ಧ ಆರ್ಸಿಬಿ ಹಸಿರು ಜೆರ್ಸಿಯಲ್ಲಿ ಕಣಕ್ಕೆ; ಅಂದೇ ಏಕೆ?
- Lifestyle ಮನೆಯಲ್ಲಿ ಸುಲಭವಾಗಿ ಬೀನ್ಸ್ ಬೆಳೆಯಬಹುದು..! ಹೇಗೆ ನೋಡಿ..!
- Automobiles ಎಲೆಕ್ಟ್ರಿಕ್ ಕಾರು ಖರೀದಿಸಿ ಪರಿಸರ ಪ್ರೇಮ ಮೆರೆದ ನಟಿ: ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!
- Finance ಬಿಸಿಲ ಬೇಗೆಯಿಂದ ರಕ್ಷಿಸಿಕೊಳ್ಳಲು ಟ್ರಾಫಿಕ್ ಪೊಲೀಸರಿಗೆ ರಿಲಿಫ್: ಬಂತು ಹವಾನಿಯಂತ್ರಿತ ಎಸಿ ಹೆಲ್ಮೆಟ್!
- Technology Samsung: ಸ್ಯಾಮ್ಸಂಗ್ನ ಈ ಸರಣಿ ಫೋನ್ಗಳಲ್ಲಿ ಗ್ರೀನ್ ಲೈನ್ ಸಮಸ್ಯೆ! ವರದಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಪಾನಿಪುರಿ ಕಿಟ್ಟಿ ಮೇಲೂ ಬಿತ್ತು ಕೇಸ್: ಕಿಟ್ಟಿಗೂ ಎದುರಾಯ್ತು ಸಂಕಷ್ಟ
Recommended Video
ಜಿಮ್ ಟ್ರೈನರ್ ಮಾರುತಿ ಗೌಡ ಅವರ ಮೇಲೆ ಹಲ್ಲೆ ಮತ್ತು ಕಿಡ್ನ್ಯಾಪ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಟ ದುನಿಯಾ ವಿಜಯ್, ಪ್ರಸಾದ್ ಸೇರಿದಂತೆ ನಾಲ್ಕು ಜನ ಬಂಧನವಾಗಿದ್ದು, ಕೇಂದ್ರ ಕಾರಗೃಹದಲ್ಲಿದ್ದಾರೆ.
ಪಾನಿಪುರಿ ಕಿಟ್ಟಿ ಅವರ ಅಣ್ಣನ ಮಗ ಮಾರುತಿ ಗೌಡ ಅವರ ಸೂಚನೆಯಿಂತೆ ಕಿಟ್ಟಿ ದೂರು ದಾಖಲಿಸಿದ್ದರು. ಆದ್ರೀಗ, ಕಿಟ್ಟಿ ಮೇಲೂ ಕೇಸ್ ಬಿದ್ದಿದೆ.
ಯಾರೀ ದುನಿಯಾ ವಿಜಯ್ ದುಷ್ಮನ್ 'ಪಾನಿಪೂರಿ' ಕಿಟ್ಟಿ.?
ಕಿಟ್ಟಿ ವಿರುದ್ಧದ ದೂರಿನ ಅನ್ವಯ ಎಫ್.ಐ.ಆರ್ ಕೂಡ ದಾಖಲಾಗಿದ್ದು, ಬಹುಶಃ ಕಿಟ್ಟಿಗೂ ಸಂಕಷ್ಟ ಎದುರಾಗಲಿದೆ. ಅಷ್ಟಕ್ಕೂ, ಪಾನಿಪೂರಿ ಕಿಟ್ಟಿ ದೂರು ನೀಡಿದ್ದು ಯಾರು.? ಯಾವ ಕಾರಣಕ್ಕಾಗಿ ದೂರು ನೀಡಲಾಗಿದೆ.? ಏನಿದೆ ಎಫ್.ಐ.ಆರ್ ಪ್ರತಿಯಲ್ಲಿ ಎಂದು ಮುಂದೆ ಓದಿ.....
ದುನಿಯಾ ವಿಜಿ ನೀಡಿದ ದೂರು
ಪಾನಿಪುರಿ ಕಿಟ್ಟಿ ಅವರು ವಿಜಿ ವಿರುದ್ಧ ದೂರು ನೀಡಿದ ಮೇಲೆ, ಈಗ ವಿಜಿ ಕಡೆಯಿಂದ ಕಿಟ್ಟಿ ಮೇಲೂ ಕೇಸ್ ದಾಖಲಾಗಿದೆ. ಕೊಲೆ ಬೆದರಿಕೆ, ಜೀವ ಬೆದರಿಕೆ ಹಾಗೂ ಹಲ್ಲೆ ಮಾಡಿದ್ದಾರೆ, ನನ್ನ ಮಗನಿಗೆ ಬೆದರಿಕೆ ಹಾಕುತ್ತಿದ್ದಾನೆ ಎಂದು ವಿಜಿ ದೂರು ನೀಡಿದ್ದಾರೆ.
ಮಾರುತಿ ಗೌಡ ಮೇಲೆ ದುನಿಯಾ ವಿಜಯ್ ಹಲ್ಲೆಗೆ ಅಸಲಿ ಕಾರಣ ಏನು.?
ಏನಿದೆ ದೂರಿನಲ್ಲಿ.?
''ಕಾನೂನಿನ ಬೆಲೆ ಕೊಟ್ಟು, ಪೊಲೀಸರ ಮಾತಿಗೆ ಗೌರವ ಕೊಟ್ಟು ಮಾರುತಿ ಎಂಬುವವರನ್ನ ಠಾಣೆಯ ಬಳಿ ಕರೆದುಕೊಂಡು ಬಂದಾಗ, ನನ್ನನ್ನು ಅಡ್ಡಗಟ್ಟಿ ಪಾನಿಪುರಿ ಕಿಟ್ಟಿ ಮತ್ತು ಸಹೋದರರು ನಿನ್ನನ್ನು ಕೊಲೆ ಮಾಡುತ್ತೇವೆ ಎಂದು ಬೆದರಿಕೆಯೊಡ್ಡಿದ್ದಾರೆ. ಠಾಣೆ ಬಳಿ ಬಂದಾಗ ನನಗೆ ಡಿಚ್ಚಿ ಹೊಡೆದಿದ್ದಾನೆ''
ದುನಿಯಾ ವಿಜಿ-ಪಾನಿಪುರಿ ಕಿಟ್ಟಿ ಮಧ್ಯೆ ಇರೋ ಈ 'ಪ್ರಸಾದ್' ಯಾರು.?
ಕೊಲೆ ಪ್ರಯತ್ನ ಮಾಡಲಾಗಿದೆ
''ಪಾನಿಪುರಿ ಕಿಟ್ಟಿ ಮತ್ತು ಸಹಚರರು ಚಾಕುವಿನಿಂದ ಚುಚ್ಚಲು ಬಂದಿದ್ದರು. ಮಾರುತಿ ಬಂದು ಹೆದರಿಸಿದ್ದಾನೆ. ನನ್ನ ಮಗನಿಗೆ ಕೂಡ ಎದುರಿಸಿದ್ದಾನೆ. ಪಾನಿಪುರಿ ಕಿಟ್ಟಿ ಕೂಡ ಫೋನ್ ಮಾಡಿ ಧಮ್ಕಿ ಹಾಕಿದ್ದಾರೆ. ಕಾರು ಜಖಂ ಮಾಡಿದ್ದಾರೆ. ಅಪರಿಚತ ವ್ಯಕ್ತಿಯೊಬ್ಬ ಕೊಲ್ಲಲು ಮುಂದೆ ಬಂದಿದ್ದ. ದಯವಿಟ್ಟು ನನಗೆ ರಕ್ಷಣೆ ಕೊಡಿ ಮತ್ತು ಅವರ ವಿರುದ್ಧ ಕ್ರಮ ಜರುಗಿಸಬೇಕೆಂದು ಕೇಳಿಕೊಳ್ಳುತ್ತಿದ್ದೇನೆ'' ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
'ತನ್ನ ಶ್ರಮವನ್ನ ಗಾಳಿಗೆ ತೂರಿಬಿಟ್ಟ ದುನಿಯಾ ವಿಜಿ' - ಜಗ್ಗೇಶ್ ಬೇಸರ
ಕಾನೂನಾತ್ಮಕವಾಗಿ ಹೋರಾಟ
ವಿಜಿ ಅವರ ದೂರಿನ ಹಿನ್ನೆಲೆ ಕಿಟ್ಟಿ ಅವರನ್ನ ಕರೆದು ವಿಚಾರಣೆ ನಡೆಸುವ ಸಾಧ್ಯತೆ ಇದೆ. ನಂತರ ಪೊಲೀಸರು ಏನು ಕ್ರಮ ತೆಗೆದುಕೊಳ್ಳುತ್ತಾರೆ ಎಂಬುದು ಕುತೂಹಲ ಮೂಡಿಸಿದೆ. ಮತ್ತೊಂದೆಡೆ ಕಿಟ್ಟಿ ಈ ದೂರು ಸಂಪೂರ್ಣ ಸುಳ್ಳು, ನಾನು ಕಾನೂನಾತ್ಮಕವಾಗಿ ಹೋರಾಟ ಮಾಡ್ತೀನಿ ಎಂದರು.
ಪಾನಿಪುರಿ ಕಿಟ್ಟಿ ಜೊತೆಗಿನ 20 ವರ್ಷದ 'ಸೇಡು-ಸ್ನೇಹ'ದ ಕಥೆ ಬಿಚ್ಚಿಟ್ಟಿದ್ದ ವಿಜಿ