Don't Miss!
- Finance April 25 Gold Rate: ಇಂದಿನ ಚಿನ್ನದ ಬೆಲೆ, ಬೆಂಗಳೂರಿನಲ್ಲಿ ದರ ಎಷ್ಟಿದೆ ತಿಳಿಯಿರಿ
- Lifestyle ಬೆಳ್ಳುಳ್ಳಿ ಕಬಾಬ್ ಅಂದುಕೊಂಡ್ರಾ? ಇದು ಚಿಕನ್ ರುಚಿಯ ಹೂವಿನ ಫ್ರೈ..!
- Sports 2009ರ ಐಪಿಎಲ್ ಫೈನಲ್ನಲ್ಲಿ ಆರ್ಸಿಬಿ ಸೋಲಲು ಕಾರಣ ತಿಳಿಸಿದ ಅನಿಲ್ ಕುಂಬ್ಳೆ
- News Srivari Seva: ತಿರುಮಲ ಶ್ರೀವಾರಿಯ ಸೇವಕರಾಗಲು ಒಂದು ಅದ್ಭುತ ಅವಕಾಶ.. ಕೂಡಲೇ ಬುಕ್ ಮಾಡಿ
- Automobiles XUV300: ಮಹೀಂದ್ರಾ ಎಕ್ಸ್ಯುವಿ300 ಕಾರನ್ನು ನಿಮ್ಮ ಮನೆಗೆ ತರಬೇಕೇ.. ಆನ್-ರೋಡ್ ಬೆಲೆ ಎಷ್ಟು, EMI ಏನು?
- Technology OnePlus: ಒನ್ಪ್ಲಸ್ ವಾಚ್ 2 ನಾರ್ಡಿಕ್ ಬ್ಲೂ ಆವೃತ್ತಿ ಲಾಂಚ್! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಪತ್ನಿ ನಾಗರತ್ನರಿಂದ ದೂರವಾಗಲು ಕಾರಣ ಬಿಚ್ಚಿಟ್ಟ ದುನಿಯಾ ವಿಜಯ್
Recommended Video
ದುನಿಯಾ ವಿಜಯ್ ಮೊದಲ ಪತ್ನಿ ನಾಗರತ್ನ ಅವರಿಂದ ವಿಜಿ ದೂರವಾಗಿದ್ದಾರೆ. ಸದ್ಯ ಕೀರ್ತಿ ಗೌಡ ಅವರೊಂದಿಗೆ ದಾಂಪತ್ಯ ಜೀವನ ಮುಂದುವರಿಸಿದ್ದಾರೆ.
ವಿಜಿ ಅವರ ತಂದೆ-ತಾಯಿ, ಎರಡನೇ ಪತ್ನಿ ಕೀರ್ತಿ ಗೌಡ ಮತ್ತು ಮೂವರು ಮಕ್ಕಳು ಒಟ್ಟಿಗೆ ಒಂದೇ ಮನೆಯಲ್ಲಿದ್ದಾರೆ. ಆದ್ರೆ, ನಾಗರತ್ನ ಅವರು ಬೇರೆ ಮನೆಯಲ್ಲಿದ್ದಾರೆ. ಅಷ್ಟಕ್ಕೂ, ನಾಗರತ್ನ ಅವರನ್ನ ವಿಜಿ ದೂರ ಮಾಡಿಕೊಂಡಿದ್ದೇಕೆ ಎಂಬ ಅನುಮಾನ ಎಲ್ಲರನ್ನ ಕಾಡುತ್ತೆ.!
ಜೈಲಿನ ಬಳಿ ಬಂದಿದ್ದ ನಾಗರತ್ನಗೆ 'ನೋ ಎಂಟ್ರಿ' ಎಂದ ದುನಿಯಾ ವಿಜಯ್
ಈ ಮಧ್ಯೆ ನಾಗರತ್ನ ಅವರು ಕೀರ್ತಿ ಗೌಡ ಅವರೊಂದಿಗೆ ಜಗಳವಾಡಿ ಪೊಲೀಸ್ ಠಾಣೆಯಲ್ಲಿ ದೂರು ಕೂಡ ದಾಖಲಿಸಿದ್ದರು. ಅಲ್ಲಿಗೆ ವಿಜಿ ಪತ್ನಿಯರ ನಡುವಿನ ಈ ಕಿತ್ತಾಟವೇಕೆ.? ನಾಗರತ್ನ ಅವರಿಂದ ವಿಜಯ್ ದೂರವಾಗಿರುವುದೇಕೆ ಎಂಬುದನ್ನ ಸ್ವತಃ ವಿಜಿ ಅವರೇ ಮಾಧ್ಯಮಗಳ ಮುಂದೆ ಬಿಚ್ಚಿಟ್ಟಿದ್ದಾರೆ. ಮುಂದೆ ಓದಿ.....
2 ವರ್ಷ ಹಿಂದೆ ರಾಜಿ ಆಗಿದ್ವಿ
ಎಲ್ಲರಿಗೂ ತಿಳಿದಿರುವಂತೆ ದುನಿಯಾ ವಿಜಯ್ ಮತ್ತು ನಾಗರತ್ನ ಅವರ ಮಧ್ಯೆ ಸುಮಾರು ಎರಡೂವರೆ ವರ್ಷದ ಹಿಂದೆ ಮನಸ್ತಾಪ ಉಂಟಾಗಿ, ಪ್ರಕರಣ ಕೋರ್ಟ್ ಮೆಟ್ಟಿಲೇರಿತ್ತು. ಇಬ್ಬರು ವಿಚ್ಛೇದನಕ್ಕೆ ಮುಂದಾಗಿದ್ದರು. ಆದ್ರೆ, ಅಂತಿಮ ಕ್ಷಣದಲ್ಲಿ ಇಬ್ಬರು ಒಪ್ಪಂದ ಮಾಡಿಕೊಂಡು ಮತ್ತೆ ಒಟ್ಟಿಗೆ ಜೀವನ ನಡೆಸಲು ನಿರ್ಧರಿಸಿದ್ದರು. ಆದ್ರೆ, ಅಲ್ಲಿ ಆಗಿದ್ದೇ ಬೇರೆ.
ಕೀರ್ತಿ ಗೌಡಗೆ ಮಗು ಇಲ್ವಂತೆ.! ದುನಿಯಾ ವಿಜಯ್ ಸುಳ್ಳು ಹೇಳಿದ್ರೇನು.?
ಒಪ್ಪಂದಂತೆ ಆಗಿಲ್ಲ
ಅಂದು ಕೋರ್ಟ್ ನಲ್ಲಿ, ವಕೀಲರ ಮುಂದೆ ದುನಿಯಾ ವಿಜಿ ಮತ್ತು ನಾಗರತ್ನ ಅವರು ಒಪ್ಪಂದ ಮಾಡಿಕೊಂಡಿದ್ದರಂತೆ. ಅದನ್ನ ಸ್ವತಃ ವಿಜಿ ಅವರೇ ಹೇಳಿದ್ದಾರೆ. 'ತಂದೆ-ತಾಯಿನಾ ಚೆನ್ನಾಗಿ ನೋಡ್ಕೋಬೇಕು. ಮನೆಯಲ್ಲಿ ನೆಮ್ಮದಿಯಾಗಿರಬೇಕು ಎಂದು ಷರತ್ತು ವಿಧಿಸಿ ರಾಜಿಯಾಗಿದ್ದೆ. ಆದ್ರೆ, ಅಲ್ಲಿಂದ ಬಂದ ಮೇಲೂ ನಮ್ಮ ಮಧ್ಯೆ ಬಾಂಧವ್ಯ ಸರಿಯಾಗಿಲ್ಲ. ಹಾಗಾಗಿ ಬೇರೆ ಹೋಗಲು ನಿರ್ಧರಿಸಿದೆ'' ಎಂದು ನಟ ವಿಜಿ ತಿಳಿಸಿದ್ದಾರೆ.
ನಾಗರತ್ನ ಕೊಟ್ಟ ಕಂಪ್ಲೇಂಟ್ ಕಾಪಿ ನೋಡಿ ಶಾಕ್ ಆಯ್ತು ಎಂದ ಕೀರ್ತಿ ಗೌಡ.!
ಡಿವೋರ್ಸ್ ಬೇಡ ಅಂದಿದ್ರು
'ಡಿವೋರ್ಸ್ ಮಾಡೋಕೆ ಮುಂದಾಗಲಿಲ್ಲ. ಆದ್ರೆ, ನಾನು ಬೇರೆ ಮದುವೆ ಆಗುವುದಾಗಿ ಹೇಳಿದ್ದೆ. ಅದರಂತೆ ನಾನು ಕೀರ್ತಿ ಗೌಡ ಅವರನ್ನ ವಿವಾಹ ಮಾಡಿಕೊಂಡು ಈಗ ಜೀವನ ಮಾಡುತ್ತಿದ್ದೇನೆ. ಅದಕ್ಕಾಗಿ ನಾಗರತ್ನ ಅವರಿಗೆ ಏನೂ ಬೇಕು ಅದೆಲ್ಲವೂ ಮಾಡಿಕೊಟ್ಟಿದ್ದೀನಿ'
ಕೀರ್ತಿ ಗೌಡದು ದರಿದ್ರ ಕಾಲು: ಛೀಮಾರಿ ಹಾಕಿದ ದುನಿಯಾ ವಿಜಯ್ ಪತ್ನಿ ನಾಗರತ್ನ.!
ನಾಗರತ್ನ ಕೇಳಿದ್ದು ನಾನು ಕೊಟ್ಟೆ
''ನಾಗರತ್ನ ಅವರು ಕೇಳಿದ್ದನ್ನ ನಾನು ಮಾಡಿಕೊಟ್ಟಿದ್ದೆ. ಮೊದಲು ಮನೆ ಮಾಡಿಕೊಡಿ ಅಂತ ಕೇಳಿದ್ರು, 'ದುನಿಯಾ ಋಣ' ಮನೆಯನ್ನ ಆಕೆಯ ಹೆಸರಿಗೆ ಬರೆದುಕೊಟ್ಟೆ. ಆಮೇಲೆ ತೋಟ ಬೇಕು ಅಂದ್ರು, ಅದಕ್ಕೆ ನನ್ನ ಮಗನ ಸಾಮ್ರಾಟ್ ಹೆಸರಿಗೆ ಆ ತೋಟ ಮಾಡಿಕೊಟ್ಟೆ. ನನ್ನ ಹೆಣ್ಣು ಮಕ್ಕಳಿಗೆ ಕೂಡ ಜಾಗ ಮಾಡಿಕೊಟ್ಟಿದ್ದೇನೆ'' ಎಂದು ವಿಜಿ ತಿಳಿಸಿದ್ರು.
ಕೀರ್ತಿ ಗೌಡ-ದುನಿಯಾ ವಿಜಿ ನಡುವೆ ಅನೈತಿಕ ಸಂಬಂಧವಿದೆ: ದೂರಿನಲ್ಲಿ ನಾಗರತ್ನ ಉಲ್ಲೇಖ.!
ನನ್ನ ತಂದೆ-ತಾಯಿಗೆ ನೋವು ನೀಡಿದ್ದಾರೆ
''ನನ್ನ ತಂದೆ ಮತ್ತು ತಾಯಿಗೆ ನಾಗರತ್ನ ತುಂಬಾ ನೋವು ನೀಡಿದ್ದಾರೆ. ಇದರಿಂದ ಬೇಸತ್ತ ನಮ್ಮ ತಂದೆ-ತಾಯಿ ವಿಲ್ ಮಾಡಿಟ್ಟಿದ್ದಾರೆ. ನನ್ನ ಸಾವಿಗೆ ನೀನು ಯಾವುದೇ ಕಾರಣಕ್ಕೂ ಬರಬಾರದು ಎಂದು ನನ್ನ ತಂದೆ ಮತ್ತು ತಾಯಿ ಪ್ರತ್ಯೇಕವಾಗಿ ವಿಲ್ ಮಾಡಿದ್ದಾರೆ. ನಾನೂ ಸತ್ರೂ ಕೂಡ ನೀನು ಬರಬಾರದು ನಾನು ವಿಲ್ ಮಾಡಿದ್ದೇನೆ'' ಎಂದರು.
ದುನಿಯಾ ವಿಜಯ್ ಮೊದಲ ಪತ್ನಿಯಿಂದ ಮತ್ತೊಂದು ದೂರು ದಾಖಲು.!
ಮಕ್ಕಳಿಗೂ ನಾನು ಹೇಳಿದ್ದೆ
''ನಾನು ಇರುವ ಕಡೆ ಆಕೆ ಇರಬಾರದು ಅಂತ ಮಕ್ಕಳಿಗೂ ಹೇಳಿದ್ದೆ. ಈ ಎರಡೂವರೆ ವರ್ಷದಲ್ಲಿ ಆಕೆ ನನ್ನನ್ನು ಭೇಟಿ ಮಾಡಿಲ್ಲ. ಮಕ್ಕಳು, ಕೀರ್ತಿ, ನಾನು, ತಂದೆ-ತಾಯಿ ಒಟ್ಟಿಗೆ ಇದ್ವಿ. ಈಗ ಸಡನ್ ಆಗಿ ಬಂದು ಯಾಕೆ ಖ್ಯಾತೆ ತೆಗೆದರು ಗೊತ್ತಿಲ್ಲ'' ಎಂದು ವಿಜಿ ಸ್ಪಷ್ಟನೆ ನೀಡಿದ್ದಾರೆ.