Don't Miss!
- News ಮೈತ್ರಿ ಹೆಸರಿನಲ್ಲಿ ಬೆನ್ನಿಗೆ ಚೂರಿ ಹಾಕಿದರು; ಎಚ್.ಡಿ. ಕುಮಾರಸ್ವಾಮಿ ಆಕ್ರೋಶ
- Automobiles KTM Duke 125 ಬೆಲೆಗೆ ಯಾವೆಲ್ಲಾ ಬೈಕ್ಗಳು ಸಿಗುತ್ತೆ ಗೊತ್ತಾ?: ಪಲ್ಸರ್ನಿಂದ ಹಿಡಿದು MT 15 ವರೆಗೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Lifestyle ವಿಭಿನ್ನ ಶೈಲಿಯಲ್ಲಿ ಮೊಟ್ಟೆ ಸಾಂಬಾರ್ ಮಾಡಿ..! ಇಲ್ಲಿದೆ ಸಿಂಪಲ್ ಅಡುಗೆ
- Sports IPL 2024: ಕೆಕೆಆರ್ ವಿರುದ್ಧದ ಪಂದ್ಯಕ್ಕೂ ಮುನ್ನ ಕ್ರಿಕೆಟ್ ಬಿಟ್ಟು ಆರ್ಸಿಬಿ ಆಟಗಾರರು ಮಾಡಿದ್ದೇನು?
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮಾರುತಿ ಗೌಡ ಮೇಲಿನ ಹಲ್ಲೆ ಬಗ್ಗೆ ದುನಿಯಾ ವಿಜಯ್ ಹೇಳಿದ ಕಥೆಯೇ ಬೇರೆ
ನಟ ದುನಿಯಾ ವಿಜಯ್ ಜಿಮ್ ಟ್ರೈನರ್ ಮಾರುತಿ ಗೌಡ ಅವರನ್ನ ಕಿಡ್ನ್ಯಾಪ್ ಮಾಡಿ ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಅಂಬೇಡ್ಕರ್ ಭವನದಲ್ಲಿ ವಿಜಿ ಮತ್ತು ಸ್ನೇಹಿತರು ಹಲ್ಲೆ ಮಾಡಿ, ಕಾರಿನಲ್ಲಿ ಕರೆದುಕೊಂಡು ಹೋಗಿ ಬೆದರಿಕೆ ಹಾಕಿದ್ದಾರೆ ಎಂದು ಹೇಳಲಾಗಿತ್ತು.
ಸ್ವತಃ ಹಲ್ಲೆಗೆ ಒಳಗಾದ ಮಾರುತಿ ಗೌಡ ಅವರೇ ''ದುನಿಯಾ ವಿಜಯ್ ನನ್ನ ಮೇಲೆ ಹಲ್ಲೆ ಮಾಡಿದ್ರು, ವಿಡಿಯೋ ಮಾಡಿ ಬ್ಲ್ಯಾಕ್ ಮೇಲ್ ಮಾಡಿದ್ರು'' ಎಂದು ಹೇಳಿದ್ದರು.
ಅಂಬೇಡ್ಕರ್ ಭವನದಲ್ಲಿ ಏನಾಯ್ತು ಎಂದು ಪಿನ್ ಟು ಪಿನ್ ಮಾಹಿತಿ ಬಿಚ್ಚಿಟ್ಟ ಮಾರುತಿ ಗೌಡ
ಆದ್ರೀಗ, ಮೊದಲ ಬಾರಿಗೆ ದುನಿಯಾ ವಿಜಯ್ ಅವರು ಈ ಘಟನೆ ಬಗ್ಗೆ ಸಂಪೂರ್ಣವಾಗಿ ಮಾತನಾಡಿದ್ದಾರೆ. ಅಂದು ರಾತ್ರಿ ಅಂಬೇಡ್ಕರ್ ಭವನದಲ್ಲಿ ಏನಾಯ್ತು ಎಂಬ ಘಟನೆಯನ್ನ ವಿವರಿಸಿದ್ದಾರೆ. ನಿಜಕ್ಕೂ ಮಾರುತಿ ಗೌಡ ಮೇಲೆ ಹಲ್ಲೆ ಮಾಡಿದ್ದು ಯಾರು ಎಂದು ಬಹಿರಂಗಪಡಿಸಿದ್ದಾರೆ. ಹಾಗಿದ್ರೆ, ಈ ಹಲ್ಲೆ ಬಗ್ಗೆ ದುನಿಯಾ ವಿಜಯ್ ಹೇಳಿದ್ದೇನು.? ಮುಂದೆ ಓದಿ....
ನಾನು ಕಾಂಪಿಟೇಶನ್ ನೋಡೋಕೆ ಹೋಗಿದ್ದೆ.....
''ನಾನು ಕಾಂಪಿಟೇಶನ್ ನೋಡೋದಕ್ಕೆ ಹೋಗಿದ್ವಿ. ಕಾಂಪಿಟೇಶನ್ ಮುಗಿಸಿ ನಾವು ವಾಪಸ್ ಬರುತ್ತಿರುವಾಗ ಮಾರುತಿ ಗೌಡ ಕಾಣಿಸಿದರು. ಕಿಟ್ಟಿ ಎಲ್ಲಿ ಎಂದು ನಾನು ಕೇಳಿದೆ, ಅದಕ್ಕೆ ಅವರು ಗೊತ್ತಿಲ್ಲ ಎಂದರು. ನಾನು ಅಲ್ಲಿಂದ ಹೊರಟೆ. ಆಗ, ಮಾರುತಿ ಗೌಡ ನನ್ನ ಮಗ ಸಾಮ್ರಾಟ್ ತಲೆ ಮೇಲೆ ಟಚ್ ಮಾಡಿದ್ದಾರೆ. ಅದಕ್ಕೆ ನನ್ನ ಮಗ 'ಯಾಕ್ರೀ ತಲೆಗೆ ಹೊಡೆದಿದ್ದು' ಅಂತ ಕೇಳಿದ್ದಾನೆ''
ದುನಿಯಾ ವಿಜಿಯಿಂದ ಹೊಡೆತ ತಿಂದ ಮಾರುತಿ ಗೌಡ ಯಾರು.? ಆತನ ಹಿನ್ನಲೆ ಏನು.?
ನನ್ನ ಮಗನಿಗೆ ಬೈಯ್ದ ಮಾರುತಿ ಗೌಡ
''ನನ್ನ ಮಗನ ಬಳಿ ಮಾರುತಿ ಗೌಡ 'ನಿಂದು ಜಾಸ್ತಿ ಆಯ್ತು, ನಿಮ್ಮ ಅಪ್ಪದು ಜಾಸ್ತಿ ಆಯ್ತು. ಈ ವಯಸ್ಸಿನಲ್ಲೇ ಈ ಥರ ಡೈಲಾಗ್ ಅಲ್ಲ ಹೊಡಿತಿದ್ದಿಯಾ ನೋಡ್ಕೊಳ್ತೀನಿ' ಅಂದಿದ್ದಾನೆ. ಆ ವೇಳೆ ಅಲ್ಲಿ ಯಾರೋ ಒಬ್ಬ ಯಾಕೋ ಆ ಹುಡುಗನಿಗೆ ಹಾಗೆ ಅಂತಿದ್ದೀಯಾ ಎಂದು ಬಾಯಿ ಮುಚ್ಚಿದ್ದಾನೆ. ಅಷ್ಟರಲ್ಲೇ ಗುಂಪಿನಲ್ಲಿ ಹೊಡೆಯೋಕೆ ಶುರು ಮಾಡಿದ್ರು''
'ನಾನು ಹಲ್ಲೆ ಮಾಡಿಲ್ಲ, ಕಿಟ್ಟಿ ಮೇಲೆ ದ್ವೇಷ ಇಲ್ಲ' ಎಂದ ದುನಿಯಾ ವಿಜಯ್
ನಾನು ಕಾರು ಬಳಿ ಇದ್ದೆ
'ನಾನು ಆಗ ಕಾರು ಬಳಿ ಇದ್ದೆ. ತಕ್ಷಣ ಕೆಳಗೆ ಇಳಿದು ಬಂದೆ. ಅದು ಯಾರೋ ಅದು ಹಾಗೆ ಹೊಡಿತಿದ್ದಾರೆ ಅಂತ ಕೇಳಿದ್ದಕ್ಕೆ. ಅಪ್ಪ ನನ್ನ ಬೈಯ್ದಬಿಟ್ಟ ಎಂದು ಸಾಮ್ರಾಟ್ ಹೇಳಿದ. ಆಗ ನಾನು 'ಹೇ ಅವನು ನಮ್ಮ ಕಿಟ್ಟಿ ಅವರ ಅಣ್ಣನ ಮಗ, ಕರೆದುಕೊಳ್ರಿ' ಅಂತ ಹೇಳಿ ಕಾರಿನಲ್ಲಿ ಕೂರಿಸಿಕೊಂಡ್ವಿ''
ಜೈಲಿನಿಂದ ಹೊರಬಂದ ಬ್ಲಾಕ್ ಕೋಬ್ರಾ ದುನಿಯಾ ವಿಜಯ್
ಮನೆಗೆ ಡ್ರಾಪ್ ಮಾಡೋಕೆ ಹೊಗಿದ್ದು
''ಆಮೇಲೆ ಮಾರುತಿ ಗೌಡ ಅವರನ್ನ ಮನೆಗೆ ಬಿಡೋಕೆ ಹೋದ್ವಿ. ಆಲ್ ರೆಡಿ ತುಂಬಾ ಹೊಡೆದಿದ್ರು. ಬಾಯಲ್ಲಿ ರಕ್ತ ಬರ್ತಿತ್ತು. ಆಗ ರಾಜರಾಜೇಶ್ವರಿ ನಗರದವರೆಗೂ ಹೋಗಿದ್ವಿ. ಆಗ ಮಾರುತಿ ಗೌಡ ಇಲ್ಲಿ ಬಿಡಿ ನನ್ನ ಅಂದ್ರು. ಬೇಡ ನಾವು ಮನೆಗೆ ಬಿಡ್ತೀವಿ ಅಂತ ಹೇಳಿದ್ರ''
ದುನಿಯಾ ವಿಜಯ್ ಗೆ ಜಾಮೀನು: ಪಾನಿಪೂರಿ ಕಿಟ್ಟಿ ಏನಂದ್ರು.?
ಪೊಲೀಸಿನವರು ಫೋನ್ ಮಾಡಿದ್ರು
''ಅಷ್ಟರಲ್ಲೇ ಕಿಟ್ಟಿ ಫೋನ್ ಮಾಡಿದ್ರು. ಆದ್ರೆ, ಕಿಟ್ಟಿಗೆ ಸತ್ಯ ಗೊತ್ತಿಲ್ಲ. ಅವರಿಗೆ ಹೋಗಿದ್ದ ಸಂದೇಶವೇ ಬೇರೆ. ಆಮೇಲೆ ಕಿಟ್ಟಿಗೂ ನನಗೂ ಮಾತಾಯ್ತು. ಸರಿ ಗಾಡಿ ತಿರುಗಿಸಿಕೊಂಡು ವಾಪಸ್ ಬರೋಣ ಅನ್ನುವಷ್ಟರಲ್ಲಿ ಪೊಲೀಸ್ ಸ್ಟೇಷನ್ ನಿಂದ ಫೋನ್ ಬಂತು. ಮಾರುತಿಗೌಡ ಅವರನ್ನ ಕರೆದುಕೊಂಡು ಬನ್ನಿ, ಇಲ್ಲಂದ್ರೆ ಸಮಸ್ಯೆಯಾಗುತ್ತೆ ಅಂದ್ರು. ಸರಿ ಅಂತ ಹೈಗ್ರೌಂಡ್ ಪೊಲೀಸ್ ಠಾಣೆ ಬಳಿ ಕರೆದುಕೊಂಡು ಬಂದು ನಿಲ್ಲಿಸಿದೆ''
ಮಾರುತಿ ಗೌಡ ಮೇಲೆ ದುನಿಯಾ ವಿಜಯ್ ಹಲ್ಲೆಗೆ ಅಸಲಿ ಕಾರಣ ಏನು.?
ಅವರು ಕಡೆಯವರು ಎಗರಾಡಿದ್ರು
''ಆಮೇಲೆ ನಾನು ಪೊಲೀಸಿನವರು ಮಾತಿಗೆ ಗೌರವ ಕೊಟ್ಟು ಹೈಗ್ರೌಂಡ್ ಪೊಲೀಸ್ ಸ್ಟೇಷನ್ ಬಳಿ ಬಂದೆ. ಆಗ ಅವರ ಕಡೆಯವರು ಹುಡುಗರು ನನ್ನ ಮೇಲೆ ಎಗರಾಡಿದ್ರು. ಆದ್ರೆ, ನನ್ನ ಮಾತನ್ನ ಕೇಳದ ಕಿಟ್ಟಿ ಡಿಚ್ಚಿ ಹೊಡೆದ. ಇಷ್ಟೆ ಆಗಿದ್ದು'' ಎಂದು ದುನಿಯಾ ವಿಜಯ್ ಅವರು ಬಹಿರಂಗಪಡಿಸಿದ್ರು.
ದುನಿಯಾ ವಿಜಿ-ಪಾನಿಪುರಿ ಕಿಟ್ಟಿ ಮಧ್ಯೆ ಇರೋ ಈ 'ಪ್ರಸಾದ್' ಯಾರು.?
ವಿಜಿ ಹೇಳೋದು ಹಲ್ಲೆ ಮಾಡಿಲ್ಲ
ಇಷ್ಟೆಲ್ಲಾ ಘಟನೆಯನ್ನ ವಿವರಿಸಿದ ದುನಿಯಾ ವಿಜಯ್ ಅವರು ನಾನು ಮಾರುತಿ ಗೌಡ ಅವರ ಮೇಲೆ ಹಲ್ಲೆ ಮಾಡಿಲ್ಲ. ಇಲ್ಲಿ ಅಪಾರ್ಥವಾಗಿದೆ. ಕಿಟ್ಟಿಗೂ ಸತ್ಯ ಗೊತ್ತಿಲ್ಲ. ನಾನು ಹಲ್ಲೆ ಮಾಡಿಲ್ಲ ಎಂದು ಮಾಧ್ಯಮಗಳೊಂದಿಗೆ ಹೇಳಿದ್ದಾರೆ.