Don't Miss!
- News ರಾಯಚೂರಿನಲ್ಲಿ ಭಿನ್ನಮತ ಸ್ಫೋಟ: ಡೀಸೆಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನ..!
- Automobiles ಇದು ಮಹೀಂದ್ರಾ ಥಾರ್ ಹೊಸ ಅಧ್ಯಾಯ: ಸ್ವಾತಂತ್ರ್ಯ ದಿನದಂದು 5-ಡೋರ್ ಅವತಾರದಲ್ಲಿ ಲಗ್ಗೆ
- Sports IPL 2024: 14 ವರ್ಷಗಳ ಹಿಂದಿನ ಬೃಹತ್ ಐಪಿಎಲ್ ದಾಖಲೆಯನ್ನು ಮುರಿದ SRH vs MI ಪಂದ್ಯ
- Finance ಲೋಕಸಭಾ ಚುನಾವಣೆ ಟಿಕೆಟ್ ನಿರಾಕರಿಸಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡ ಸಂಸದ?
- Technology ಇಂದು ಪೊಕೊ C61 ಫೋನಿನ ಫಸ್ಟ್ ಸೇಲ್!..ಬೆಲೆ, ಆಫರ್ ಮಾಹಿತಿ ಇಲ್ಲಿದೆ
- Lifestyle ಕೈಗೆ ಹಿಡಿದ ಬಣ್ಣ ತೆಗಿಯೋದು ತುಂಬಾ ಸಿಂಪಲ್..! ಇಂಥಾ ಪ್ರತಿಭೆ ನೀವೆಲ್ಲೂ ನೋಡಿರಲ್ಲ..!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಟಗರು' ಅಡ್ಡಾದಲ್ಲಿ ಕಾಣಿಸಿಕೊಂಡ 'ಸಲಗ': ಇಲ್ಲಿದೆ ಕಾರಣ
Recommended Video
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರನ್ನು ನಟ ದುನಿಯಾ ವಿಜಯ್ ಭೇಟಿಯಾಗಿ ಅಚ್ಚರಿ ಮೂಡಿಸಿದ್ದಾರೆ. ಬ್ಲಾಕ್ ಕೋಬ್ರ ಕೆಲವು ದಿನಗಳಿಂದ 'ಸಲಗ' ಸಿನಿಮಾ ಮೂಲಕ ಸದ್ದು ಮಾಡುತ್ತಿದ್ದಾರೆ. ಇದರ ನಡುವೆ ಸ್ಯಾಂಡಲ್ ವುಡ್ 'ಟಗರು' ಅನ್ನು 'ಸಲಗ' ದಿಢೀರ್ ಭೇಟಿ ಆಗಿರುವುದು ಅಭಿಮಾನಿಗಳ ಅಚ್ಚರಿಗೆ ಕಾರಣವಾಗಿದೆ.
ದುನಿಯಾ ವಿಜಿ ಅಭಿನಯದ 'ಸಲಗ' ಚಿತ್ರದಲ್ಲಿ ಬಹುತೇಕ 'ಟಗರು' ಚಿತ್ರತಂಡ ಕೆಲಸಮಾಡುತ್ತಿದೆ. ಪ್ರಾರಂಭದಲ್ಲಿ ನಿಂತು ಹೋಗಿದ್ದ 'ಸಲಗ' ಚಿತ್ರವನ್ನು 'ಟಗರು' ನಿರ್ಮಾಪಕ ಕೆ ಪಿ ಶ್ರೀಕಾಂತ್ ಕೈಗೆತ್ತಿಕೊಂಡು ಬಂಡವಾಳ ಹೂಡುವ ಮೂಲಕ ಚಿತ್ರವನ್ನು ಕಿಕ್ ಸ್ಟಾರ್ ಮಾಡಿದ್ದಾರೆ.
'ಸಲಗ' ದುನಿಯಾ ವಿಜಿ ಜೊತೆ ಸೇರಿದ ಟಗರು ಟೀಂ
ಇದೆ ಖುಷಿಯಲ್ಲಿ ವಿಜಿ ಹ್ಯಾಟ್ರಿಕ್ ಹೀರೋ ಮನೆಗೆ ಭೇಟಿ ನೀಡಿ ಶಿವಣ್ಣ ಆಶೀರ್ವಾದ ಪಡೆದಿದ್ದಾರೆ. ಅಷ್ಟೆಯಲ್ಲದೆ ಶಿವಣ್ಣ ಸಲಗ ಚಿತ್ರತಂಡಕ್ಕೆ ಒಂದಿಷ್ಟು ಸಲಹೆಗಳನ್ನು ನೀಡಿದ್ದಾರಂತೆ. ನಿಜವಾದ ಟಗರಿನ ಆಶೀರ್ವಾದದ ಜೊತೆಗೆ ಸಲಗ ಪ್ರಾರಂಭಿಸುತ್ತಿದ್ದಾರೆ ದುನಿಯಾ ವಿಜಿ.
'ಟಗರು' ಸ್ಯಾಂಡಲ್ ವುಡ್ ನಲ್ಲಿ ದೊಡ್ಡ ಸಕ್ಸಸ್ ಕಂಡ ಸಿನಿಮಾವಾಗಿದೆ. ಸೆಂಚುರಿ ಸ್ಟಾರ್ ಸಿನಿಮಾ ಯಶಸ್ವಿಯಾಗಿ ಸೆಂಚುರಿ ಬಾರಿಸಿ, 125 ದಿನಗಳ ಅದ್ಧೂರಿ ಪ್ರದರ್ಶನ ಕಂಡ ಸಿನಿಮಾವಾಗಿತ್ತು. ಅದೆ ಚಿತ್ರತಂಡವೀಗ 'ಸಲಗ' ಚಿತ್ರಕ್ಕೂ ಕೆಲಸ ಮಾಡುತ್ತಿರುವುದರಿಂದ 'ಟಗರು' ಅಂತಹ ಮತ್ತೊಂದು ದೊಡ್ಡ ಹಿಟ್ ಸಿನಿಮಾ ಕೊಡುವ ತಯಾರಿಯಲ್ಲಿದೆ ಚಿತ್ರತಂಡ.
ಅಂದ್ಹಾಗೆ 'ಸಲಗ' ಚಿತ್ರಕ್ಕೆ ನಿರ್ದೇಶಕ ಯಾರು ಎನ್ನುವುದು ಇನ್ನು ಅಂತಿಮವಾಗಿಲ್ಲ. ಆದ್ರೆ 'ಟಗರು' ಚಿತ್ರಕ್ಕೆ ಕೆಲಸ ಮಾಡಿದ್ದ ಸಂಗೀತ ನಿರ್ದೇಶಕ ಚರಣ್ ರಾಜ್, ಚಿತ್ರದ ಸಹ ನಿರ್ದೇಶಕ ಅಭಿ, ಮಾಸ್ತಿ ಸಂಭಾಷಣೆ 'ಸಲಗ' ಚಿತ್ರದಲ್ಲೂ ಮುಂದುವರೆಯಲಿದ್ದಾರೆ. ವಿಶೇಷ ಅಂದ್ರೆ ಚಿತ್ರದಲ್ಲಿ ವಿಜಿಗೆ ಟಕ್ಕರ್ ಕೊಡಲಿದ್ದಾರೆ ಡಾಲಿ ಧನಂಜಯ್.