Don't Miss!
- Sports CSK vs LSG IPL 2024: ರುತುರಾಜ್ ಭರ್ಜರಿ ಶತಕ, ದುಬೆ ಸ್ಫೋಟಕ ಬ್ಯಾಟಿಂಗ್; ಲಕ್ನೋಗೆ ಬೃಹತ್ ಗುರಿ ನೀಡಿದ ಚೆನ್ನೈ
- News Narendra Modi: ಕರ್ನಾಟಕಕ್ಕೆ ಏಪ್ರಿಲ್ 29, 29ಕ್ಕೆ ಪ್ರಧಾನಿ ಮೋದಿ ಆಗಮನ
- Lifestyle UPSCಯಲ್ಲಿ 2ನೇ ರ್ಯಾಂಕ್ ಗಳಿಸಿದ ಸಾಧಕನ ಡ್ಯಾನ್ಸ್ ವೀಡಿಯೋ ವೈರಲ್: ಇವರ ಬದುಕಿನಲ್ಲಿ ನಡೆದಿದೆ ಹಲವು ದುರಂತಗಳು
- Automobiles ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಜೈಲಿನಿಂದ ಹೊರಬಂದ ಬ್ಲಾಕ್ ಕೋಬ್ರಾ ದುನಿಯಾ ವಿಜಯ್
ಎಂಟು ದಿನಗಳ ಸೆರೆವಾಸದ ಬಳಿಕ ಸ್ಯಾಂಡಲ್ ವುಡ್ 'ಕರಿಚಿರತೆ' ದುನಿಯಾ ವಿಜಯ್ ಗೆ ಬಿಡುಗಡೆ ಭಾಗ್ಯ ಸಿಕ್ಕಿದೆ. ಎಂಟು ದಿನಗಳ ಕಾಲ ಪರಪ್ಪನ ಅಗ್ರಹಾರ ಜೈಲಿನಲ್ಲಿ ಕಂಬಿ ಎಣಿಸಿದ್ದ ದುನಿಯಾ ವಿಜಯ್, ಡ್ರೈವರ್ ಪ್ರಸಾದ್, ಟ್ರೈನರ್ ಪ್ರಸಾದ್ ಹಾಗೂ ಮಣಿ ಇದೀಗ ಹೊರಗೆ ಬಂದಿದ್ದಾರೆ.
ಜಿಮ್ ಟ್ರೈನರ್ ಮಾರುತಿ ಗೌಡ ಕಿಡ್ನ್ಯಾಪ್ ಹಾಗೂ ಹಲ್ಲೆ ನಡೆಸಿದ ಆರೋಪದ ಮೇಲೆ ದುನಿಯಾ ವಿಜಯ್ ಮತ್ತು ಮೂವರನ್ನು ಬಂಧಿಸಲಾಗಿತ್ತು. ದುನಿಯಾ ವಿಜಯ್ ಮತ್ತು ಸ್ನೇಹಿತರು ಸೆಷನ್ಸ್ ಕೋರ್ಟ್ ನಲ್ಲಿ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಪುರಸ್ಕರಿಸಿ ಇವತ್ತು ಷರತ್ತು ಬದ್ಧ ಜಾಮೀನು ಮಂಜೂರು ಮಾಡಲಾಯ್ತು.
ಒಂದು ಲಕ್ಷ ರೂಪಾಯಿ ಬಾಂಡ್ ಹಾಗೂ ಶ್ಯೂರಿಟಿ ಆಧಾರದ ಮೇರೆಗೆ ಸೆಷನ್ಸ್ ಕೋರ್ಟ್ ಜಾಮೀನು ಮಂಜೂರು ಮಾಡಿತು. ''ಸಿನಿಮಾ ನಟರು ರೋಲ್ ಮಾಡೆಲ್ ಆಗಿರಬೇಕು. ಹೀಗೆಲ್ಲಾ ಮಾಡುವುದು ಸರಿಯಲ್ಲ. ನೀವು ಇಂತಹ ಆರೋಪಗಳಲ್ಲಿ ಕೋರ್ಟ್ ಮೆಟ್ಟಿಲೇರಬಾರದು'' ಎಂದು ದುನಿಯಾ ವಿಜಯ್ ಗೆ ಎಚ್ಚರಿಕೆ ಕೊಟ್ಟು ನ್ಯಾಯಾಧೀಶರು ಜಾಮೀನು ನೀಡಿದ್ದರು. ಮುಂದೆ ಓದಿರಿ...
ಜಾಮೀನು ಪ್ರಕ್ರಿಯೆ ಪೂರ್ಣ
ಜಾಮೀನು ಮಂಜೂರು ಆದ ಕೂಡಲೆ, ಆದೇಶದ ಪ್ರತಿಯನ್ನು ದುನಿಯಾ ವಿಜಯ್ ಪರ ವಕೀಲರು ಸೆಂಟ್ರಲ್ ಜೈಲಿಗೆ ತಲುಪಿಸಿದರು. ಜಾಮೀನು ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ ಬಳಿಕ ದುನಿಯಾ ವಿಜಯ್ ಮತ್ತು ಸ್ನೇಹಿತರು ಹೊರಗೆ ಬಂದರು.
ದುನಿಯಾ ವಿಜಯ್ ಗೆ ಜಾಮೀನು: ಪಾನಿಪೂರಿ ಕಿಟ್ಟಿ ಏನಂದ್ರು.?
ಕೀರ್ತಿ ಗೌಡಗಾಗಿ ಕಾದ ದುನಿಯಾ ವಿಜಯ್
ಜಾಮೀನು ಪ್ರಕ್ರಿಯೆ ಪೂರ್ಣಗೊಂಡರೂ, ಸುಮಾರು ಒಂದು ಗಂಟೆ ಕಾಲ ಜೈಲಿನಲ್ಲೇ ದುನಿಯಾ ವಿಜಯ್ ಇದ್ದರು ಎಂದು ಮಾಧ್ಯಮಗಳು ವರದಿ ಮಾಡಿವೆ. ಎರಡನೇ ಪತ್ನಿ ಕೀರ್ತಿ ಗೌಡ ಮೈಸೂರಿನಿಂದ ಬರುತ್ತಿದ್ದ ಕಾರಣ, ಕೀರ್ತಿ ಗೌಡ ಪರಪ್ಪನ ಅಗ್ರಹಾರಕ್ಕೆ ಬರುವವರೆಗೂ ಹೊರಗೆ ಬಾರದಿರಲು ದುನಿಯಾ ವಿಜಯ್ ನಿರ್ಧರಿಸಿದ್ದರು ಎಂದು ವರದಿ ಆಗಿದೆ.
ದುನಿಯಾ ವಿಜಯ್ ಗೆ ಬಿಡುಗಡೆ ಭಾಗ್ಯ: ಜಾಮೀನು ನೀಡಿದ ಸೆಷನ್ಸ್ ಕೋರ್ಟ್
ಪತ್ನಿಯನ್ನ ಅಪ್ಪಿಕೊಂಡ ದುನಿಯಾ ವಿಜಯ್
7.30 ಗಂಟೆ ಸುಮಾರಿಗೆ ಕೀರ್ತಿ ಗೌಡ ಪರಪ್ಪನ ಅಗ್ರಹಾರ ಜೈಲು ತಲುಪಿದರು. ಬಳಿಕ ದುನಿಯಾ ವಿಜಯ್ ಮತ್ತು ಗ್ಯಾಂಗ್ ಜೈಲಿನಿಂದ ಹೊರಗೆ ಬಂದರು. ಆಚೆ ಬರುತ್ತಿದ್ದಂತೆಯೇ, ಕೀರ್ತಿ ಗೌಡ ರನ್ನ ದುನಿಯಾ ವಿಜಯ್ ಅಪ್ಪಿಕೊಂಡರು.
ಮಾರುತಿ ಗೌಡ ಮೇಲೆ ದುನಿಯಾ ವಿಜಯ್ ಹಲ್ಲೆಗೆ ಅಸಲಿ ಕಾರಣ ಏನು.?
ನಿವಾಸದತ್ತ ಹೊರಟ ದುನಿಯಾ ವಿಜಯ್
ಜೈಲಿನಿಂದ ಹೊರಗೆ ಬಂದ್ಮೇಲೆ ನಿವಾಸದ ಕಡೆಗೆ ದುನಿಯಾ ವಿಜಯ್ ಹೊರಟರು. ಈ ವೇಳೆ ಪತ್ನಿ ಹಾಗೂ ಸ್ನೇಹಿತರು ಜೊತೆಯಲ್ಲಿ ಇದ್ದರು.