Don't Miss!
- News Heavy Rain: ಭಾರೀ ಗಾಳಿ, ಮಳೆಗೆ ಧರೆಗುರುಳಿದ ಮರಗಳು, ವಿದ್ಯುತ್ ಕಂಬಗಳು: ಸಿಡಿಲು ಬಡಿದು 25 ಮೇಕೆಗಳ ಸಾವು
- Technology ಇಂದು ಸ್ಯಾಮ್ಸಂಗ್ ಗ್ಯಾಲಕ್ಸಿ F15 5G ಫೋನ್ ಸೇಲ್!..ಬೆಲೆ ಎಷ್ಟು?
- Lifestyle ಹೊಟ್ಟೆಯೇ ಇಲ್ಲದೆ ಬದುಕಿದ್ದ ನತಾಶಾ ದಿಡ್ಡಿ ನಿಧನ...! ಈಕೆ ಯಾರು ಗೊತ್ತಾ?
- Finance ಸುಗಮ, ಸುರಕ್ಷಿತ ಸಂಚಾರಕ್ಕಾಗಿ ವಿಶೇಷ ಅಭಿಯಾನ ಆರಂಭಿಸಿದ ಬೆಂಗಳೂರು ಸಂಚಾರಿ ಪೊಲೀಸ್
- Automobiles ಹಲವು ಆಯ್ಕೆಗಳಲ್ಲಿ ಸಿಗಲಿದೆ 5 ಡೋರ್ ಥಾರ್: ಸುದ್ದಿ ತಿಳಿದು ನಿಟ್ಟುಸಿರು ಬಿಟ್ಟ ಮಹೀಂದ್ರಾ ಫ್ಯಾನ್ಸ್!
- Sports ಟಿ20 ವಿಶ್ವಕಪ್ 2024: ಟೀಮ್ ಇಂಡಿಯಾಗೆ ದೊಡ್ಡ ಚಿಂತೆಯಾದ ಈ ಆರಂಭಿಕನ ಫಾರ್ಮ್
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಹುಚ್ಚು ಅಭಿಮಾನದಿಂದ ಕಾಲು ಕಳೆದುಕೊಂಡ ದುನಿಯಾ ವಿಜಯ್ ಅಭಿಮಾನಿ!
'ಅಭಿಮಾನ ಇರಬೇಕು ಅಂದರೆ ಅದು ಅತಿರೇಕವಾಗಬಾರದು' ಎನ್ನುವ ಮಾತು ಈ ಸ್ಟೋರಿಗೆ ಸೂಕ್ತವಾಗಿ ಹೇಳಿದ ಹಾಗಿದೆ. ಯಾಕಂದ್ರೆ, ನಟ ದುನಿಯಾ ವಿಜಯ್ ಮೇಲೆ ಹುಚ್ಚು ಅಭಿಮಾನ ಹೊಂದಿದ್ದ ಯಾದಗಿರಿಯ ಒಬ್ಬ ಯುವಕ ಈಗ ತನ್ನ ಕಾಲುಗಳನ್ನೇ ಕಳೆದುಕೊಂಡಿದ್ದಾನೆ.
ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ವಜ್ಜಲ್ ಗ್ರಾಮದ ಯುವಕ ಹುಲಗಪ್ಪ ಅಲಿಯಾಸ್ ಜಂಗ್ಲಿ ದುನಿಯಾ ವಿಜಯ್ ಅವರ ಅಪಟ್ಟ ಅಭಿಮಾನಿ. ಅದು ಯಾವ ಮಟ್ಟಿಗೆ ಅಂದರೆ ಈತನ ಕೈ, ತೋಳ್ಮೇಲೆ ಜಂಗ್ಲಿ, ಜಾನಿ ಎಂಬ ಅಚ್ಚೆ ಇದೆ. ಮನೆಯ ಗೋಡೆಯ ತುಂಬ ನೆಚ್ಚಿನ ನಟನ ಫೋಟೋಗಳೆ ತುಂಬಿವೆ.
ಹೀಗಿರುವಾಗ ದುನಿಯಾ ವಿಜಯ್ ಅಭಿಮಾನಿ ಎಂದು ಸಾಬೀತು ಮಾಡುವುದಕ್ಕೆ ಹೋಗಿ ಈತ ತನ್ನ ಕಾಲುಗಳನ್ನು ಕಳೆದುಕೊಂಡಿದ್ದಾನೆ. ಮುಂದೆ ಓದಿ...
ಗೆಳೆಯರ ಜೊತೆ ಚಾಲೆಂಜ್
ಇತ್ತೀಚಿಗೆ ಸ್ನೇಹಿತರ ಜೊತೆ ಹುಲಗಪ್ಪ ಕುಳಿತಿದ್ದಾಗ ''ದುನಿಯಾ ವಿಜಯ್ ಅಭಿಮಾನಿಯಾದ ನೀನು ಅವರಂತೆಯೇ ಸ್ಟಂಟ್ ಮಾಡು'' ಎಂದು ಚಾಲೆಂಜ್ ಮಾಡಿದ್ದಾರೆ. ಇದನ್ನೇ ಸವಾಲಾಗಿ ಸ್ವೀಕರಿಸಿದ ಈ ಯುವಕ ಸುಮಾರು 15 ಅಡಿ ಎತ್ತರದ ಗೋಡೆ ಮೇಲಿಂದ ಹಾರಿದ್ದಾನೆ.
ಪಾದದ ಮೂಳೆಗಳು ತಪ್ಪಿವೆ
15 ಅಡಿಯಿಂದ ಹಾರಿದ ಹುಲಗಪ್ಪನ ಎರಡು ಕಾಲಿನ ಪಾದದ ಮೂಳೆಗಳು ತಪ್ಪಿವೆ. ಈಗ ಎಂದಿನಂತೆ ಓಡಾಡಲು ಆಗುತ್ತಿಲ್ಲ. ಹೀಗಾಗಿ ಹಾಸಿಗೆ ಹಿಡಿದಿದ್ದು, ಹೆಚ್ಚಿನ ಚಿಕಿತ್ಸೆ ದೂರದ ಆಸ್ಪತ್ರೆಗೆ ತೆರಳಲು ಹಣವಿಲ್ಲದೇ ಸಂಕಷ್ಟ ಅನುಭವಿಸುತ್ತಿದ್ದಾನೆ.
'ಕನಕ' ದುನಿಯಾ ವಿಜಯ್ ಬಾಯಿಯಲ್ಲಿಯೂ ಬಂತು 'ಹವಾ' ಡೈಲಾಗ್
ದುನಿಯಾ ವಿಜಯ್ ಬಳಿ ಮನವಿ
ಆಸ್ಪತ್ರೆಗೆ ತೆರಳಲು ಹಣವಿಲ್ಲದ ಹುಲಿಗಪ್ಪ ಚಿಕಿತ್ಸೆಗಾಗಿ ಹಣಕಾಸಿನ ನೆರವು ಮಾಡಿ ಎಂದು ನಟ ದುನಿಯಾ ವಿಜಯ್ ಬಳಿ ಮನವಿ ಮಾಡಿದ್ದಾನೆ.
ಅಪ್ಪನ ರೀತಿ ಚಿತ್ರರಂಗಕ್ಕೆ ಕಾಲಿಡಲಿದ್ದಾರೆ ದುನಿಯಾ ವಿಜಯ್ ಪುತ್ರ
ಹಿರಿಯ ಮಗ
ತಂದೆಯನ್ನು ಕಳೆದುಕೊಂಡಿರುವ ಹುಲಗಪ್ಪ ಮನೆಗೆ ಹಿರಿಯ ಮಗ. ಈತನೇ ಟೆಂಟ್ ಹೌಸ್ಗಳಲ್ಲಿ ಕೆಲಸ ಮಾಡಿ ಕುಟುಂಬಕ್ಕೆ ಆಧಾರವಾಗಿದ್ದ. ಆದರೆ, ಮಗನ ಈ ಸ್ಥಿತಿಯ ಬಳಿಕ ಹುಲಗಪ್ಪನ ತಾಯಿಯೇ ಕೂಲಿ ಮಾಡಿ ಕುಟುಂಬ ನಡೆಸುತ್ತಿದ್ದಾಳೆ.
ಸ್ಟಂಟ್ ಮಾಡಿ ಹಾಸಿಗೆ ಹಿಡಿದ ದುನಿಯಾ ವಿಜಯ್ ಅಭಿಮಾನಿ
ಅಭಿಮಾನ ಇರಲಿ ಹುಚ್ಚು ಅಭಿಮಾನ ಬೇಡ
ಚಿತ್ರನಟರ ಅಭಿಮಾನಕ್ಕೆ ಮನಸೋಲುವ ಯುವಕರು ಅವರಂತೆಯೇ ಅನುಸರಿಸಲು ಹೋಗುತ್ತಾರೆ. ಇದರಿಂದ ಅನಾಹುತಗಳಿಗೆ ಈಡಾಗುತ್ತಿದ್ದಾರೆ. ಇಂಥ ಮನಸ್ಥಿತಿಯಿಂದ ಯುವಕರು ಹೊರ ಬರಬೇಕಿದೆ. ನಟರ ಮೇಲೆ ಅಭಿಮಾನ ಇರಲಿ ಆದರೆ ಹುಚ್ಚು ಅಭಿಮಾನ ಬೇಡ.