Don't Miss!
- Automobiles Royal Enfield Himalayan ಸುಲಭವಾಗಿ ಖರೀದಿಸುವುದು ಹೇಗೆ?: ಇಲ್ಲಿದೆ ಡೌನ್ಪೇಮೆಂಟ್, EMI ಮಾಹಿತಿಗಳು!
- News ಮಳೆ.. ಮಳೆ.. ಭರ್ಜರಿ ಮಳೆ.. ಬೇಸಿಗೆಯಲ್ಲೂ ಮಳೆ!
- Technology Bengaluru: ಆ ಆಪ್ ಇನ್ಸ್ಟಾಲ್ ಮಾಡಿದ್ದೇ ತಡ 5.2 ಕೋಟಿ ರೂ. ಮಾಯ.. ನೀವು ಎಚ್ಚರ
- Sports ಟಿ20 ವಿಶ್ವಕಪ್ಗೆ 15 ಸದಸ್ಯರ ಭಾರತ ತಂಡದ ಆಯ್ಕೆ ಮಾಡಿದ ಇರ್ಫಾನ್ ಪಠಾಣ್; ಸಂಜು, ರಾಹುಲ್ಗೆ ಸ್ಥಾನವಿಲ್ಲ!
- Lifestyle 3ನೇ ಬಾರಿ ಬಾಹ್ಯಾಕಾಶಕ್ಕೆ ಹಾರಲು ಮುಂದಾದ ಸುನೀತಾ ವಿಲಿಯಮ್ಸ್..!
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ದುನಿಯಾ ವಿಜಯ್ 'ಸಿಂಹಾದ್ರಿ' ಗರ್ಜಿಸಲು ರೆಡಿ
ಕನ್ನಡದಲ್ಲಿ ಬಹಳವಾಗಿ ಯಶಸ್ವಿ ಆದ 'ತವರಿಗೆ ಬಾ ತಂಗಿ' ಅಲ್ಲದೆ ಇನ್ನೂ ಅನೇಕ ಸಿನಿಮಾಗಳನ್ನು ನಿರ್ಮಿಸುತ್ತ ಬಂದಿರುವ ನಿರ್ಮಾಪಕರು ಆರ್.ಎಸ್.ಗೌಡ. ಈಗವರು ಮತ್ತೊಂದು ಸಾಹಸ ಹಾಗೂ ಮನೆ ಮಂದಿಗೆಲ್ಲ ಇಷ್ಟವಾಗುವ 'ಸಿಂಹಾದ್ರಿ' ಚಿತ್ರವನ್ನು ಮೇಘ ಹಿಟ್ ಫಿಲಂಸ್ ಬ್ಯಾನರ್ ನಲ್ಲಿ ನಿರ್ಮಾಣ ಮಾಡಲು ಸಜ್ಜಾಗಿದ್ದಾರೆ. ಈ ಸಿನೆಮಕ್ಕೆ ಅವರದೇ ಆದ ಕಥೆ ಇದೆ.
ಸಾಹಸ ಸಿನಿಮಾಗಳ ನಿರ್ದೇಶಕರೆಂದೇ ಮೆಚ್ಚುಗೆ ಗಳಿಸಿರುವ ಶಿವಮಣಿ ಅವರು 'ಜೋಶ್' ನಂತರ ಮತ್ತೆ ನಿರ್ದೇಶನಕ್ಕೆ ಕಾಲಿಡುತ್ತಿದ್ದಾರೆ. ಸಾಹಸಮಯ ಸನ್ನಿವೇಶಗಳು, ಪ್ರೀತಿ, ಕಾಮಿಡಿ, ಮನಮಿಡಿಯುವ ದೃಶ್ಯಗಳು ಈ ಸಿನೆಮಾದ ಜೀವಾಳ ಎನ್ನುತ್ತಾರೆ ಶಿವಮಣಿ. [ದುನಿಯಾ ವಿಜಯ್ ಉಚಿತ ಕಾಲ್ ಶೀಟ್]
ಮೊದಲ ಬಾರಿಗೆ ದುನಿಯ ವಿಜಯ್ ಅವರ ಜೊತೆ ಕನ್ನಡ ಹಾಗೂ ಮಲಯಾಳಂ ಭಾಷೆಗಳಲ್ಲಿ ಜನಪ್ರಿಯತೆ ಪಡೆದಿರುವ ಮೇಘನಾ ರಾಜ್ ಅವರು ನಾಯಕಿಯಾಗಿ ಆಯ್ಕೆಯಾಗಿದ್ದಾರೆ. 'ದಾಸ್ವಾಳ' ಚಿತ್ರದ ಐಶ್ವರ್ಯಾ, ಸುಚೇಂದ್ರಪ್ರಸಾದ್, ಮಳವಳ್ಳಿ ಸಾಯಿ ಕೃಷ್ಣ, ಜೈ ಜಗದೀಶ್, ವಿಜಯಲಕ್ಷ್ಮಿ ಸಿಂಗ್ ಹಾಗೂ ಇನ್ನಿತರರು ಪಾತ್ರವರ್ಗದಲ್ಲಿ ಇದ್ದಾರೆ. (ಒನ್ಇಂಡಿಯಾ ಕನ್ನಡ)