Don't Miss!
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಬರ್ತಡೇಗೂ ಮುಂಚೆ ಜೀವದ ಗೆಳೆಯರಿಗೆ ನಮನ ಸಲ್ಲಿಸಿದ ವಿಜಿ
ಕನ್ನಡದ ಖ್ಯಾತ ನಟ ದುನಿಯಾ ವಿಜಯ್ ಗೆ ಇಂದು 44ನೇ ಹುಟ್ಟುಹಬ್ಬ. ಎಲ್ಲ ಚೆನ್ನಾಗಿ ಇದ್ದಿದ್ದರೇ ವಿಜಿ ಹುಟ್ಟುಹಬ್ಬದಲ್ಲಿ ಅವರ ಇಬ್ಬರು ಜೀವದ ಗೆಳೆಯರು ಕೂಡ ಭಾಗಿಯಾಗಿರುತ್ತಿದ್ದರು. ಆದ್ರೆ, ವಿಧಿ ಬಿಡಲಿಲ್ಲ. 2016ರ ನವೆಂಬರ್ ನಲ್ಲಿ ಅನಿಲ್ ಮತ್ತು ಉದಯ್ ಇಬ್ಬರು ತಿಪ್ಪಗೊಂಡನಹಳ್ಳಿಯ ಕೆರೆಯಲ್ಲಿ ದುರಂತ ಸಾವನ್ನಪ್ಪಿದ್ದರು.
ಕಣ್ಣ ಮುಂದೆ ತಮ್ಮ ಇಬ್ಬರು ಗೆಳೆಯರನ್ನ ಕಳೆದಕೊಂಡ ನಟ ವಿಜಿ, ಅವರಿಬ್ಬರಿಗೆ ಚಿರರುಣಿ. ಹೌದು, ವಿಜಿ ತನ್ನ 44ನೇ ಹುಟ್ಟುಹಬ್ಬಕ್ಕು ಮುಂಚಿನ ದಿನ, ಅನಿಲ್ ಮತ್ತು ಉದಯ್ ಇಬ್ಬರ ಸಮಾಧಿ ಬಳಿ ಭೇಟಿ ನೀಡಿ ನಮನ ಸಲ್ಲಿಸಿದ್ದಾರೆ.
ಬನಶಂಕರಿಯಲ್ಲಿರುವ ಸ್ಮಶಾನಕ್ಕೆ ಭೇಟಿ ನೀಡಿದ್ದ ವಿಜಿ, ಅನಿಲ್ ಮತ್ತು ಉದಯ್ ಸಮಾಧಿಗೆ ಪುಷ್ಪ ನಮನ ಸಲ್ಲಿಸಿದ್ದಾರೆ.
ದುನಿಯಾ ವಿಜಯ್ ಹುಟ್ಟುಹಬ್ಬಕ್ಕೆ 'ಜಾನಿ'-'ಕನಕ' ತಂಡದಿಂದ ಭರ್ಜರಿ ಗಿಫ್ಟ್
ಚಿತ್ರರಂಗದಲ್ಲಿ ಅನಿಲ್, ಉದಯ್ ಮತ್ತು ವಿಜಿ ಮೂವರು ಒಂದೇ ಗೆಳಯರ ಬಳಗ. ಮೂವರು ಇಂಡಸ್ಟ್ರಿಯಲ್ಲಿ ಒಟ್ಟಿಗೆ ಬೆಳೆದವರು. ಕಷ್ಟದ ಸಮಯವನ್ನ ಒಟ್ಟಿಗೆ ಕಳೆದವರು. ವಿಜಿ ನಾಯಕನಾದ್ರು, ಅನಿಲ್ ಮತ್ತು ಉದಯ್ ವಿಲನ್ ಗಳಾದ್ರು. ಆದ್ರೆ, ಇವರ ಸ್ನೇಹ ಮಾತ್ರ ಶಾಶ್ವತವಾಗಿ ಉಳಿದಿತ್ತು.
ದುನಿಯಾ ವಿಜಯ್ ಜೊತೆ ಕುಸ್ತಿ ಅಖಾಡಕ್ಕೀಳಿದ ಮಗ 'ಸಮ್ರಾಟ್'
ಕೊನೆಯದಾಗಿ ವಿಜಿ ಅಭಿನಯದ 'ಮಾಸ್ತಿಗುಡಿ' ಚಿತ್ರದಲ್ಲಿ ಮೂವರು ಒಟ್ಟಿಗೆ ಅಭಿನಯಿಸಿದ್ದರು. ಆದ್ರೆ, ಚಿತ್ರದ ಕ್ಲೈಮಾಕ್ಸ್ ದುರಂತದಲ್ಲಿ ಅನಿಲ್ ಮತ್ತು ಉದಯ್ ನೀರುಪಾಲಾಗಬೇಕಾಯಿತು.