Don't Miss!
- Sports IPL 2024: ಎಸ್ಆರ್ಹೆಚ್ ಸಂಘಟಿತ ಆಟಕ್ಕೆ ಬ್ರೇಕ್ ಹಾಕಲು ಆರ್ಸಿಬಿ ಏನು ಮಾಡಬೇಕು?
- News Bird Flu: ಮೊಟ್ಟೆ-ಕೋಳಿ ತಿನ್ನುವವರೇ ಹುಷಾರ್!- ಹೆಚ್ಚಾಗಿದೆ ಹಕ್ಕಿಜ್ವರ
- Finance Lok Sabha Election 2024: ಮತದಾನ ಮಾಡಿ ಹೋಟೆಲ್ಗಳಲ್ಲಿ ಫ್ರೀಯಾಗಿ, ರಿಯಾಯಿತಿಯಲ್ಲಿ ಟಿಫನ್ ತಿನ್ನಿ!
- Technology Qubo InstaView ವಿಡಿಯೋ ಡೋರ್ ಫೋನ್ ಲಾಂಚ್!..ಬೆಲೆ ಎಷ್ಟು, ಫೀಚರ್ಸ್ ಏನಿವೆ?
- Automobiles ಭರ್ಜರಿ ಸಿಹಿಸುದ್ದಿ: ಸ್ಕೋಡಾ ಕೊಡಿಯಾಕ್ ಎಸ್ಯುವಿಯ ಮೇಲೆ ಭರ್ಜರಿ ಡಿಸ್ಕೌಂಟ್
- Lifestyle ಖುಲಾಯಿಸಿತು ಅದೃಷ್ಟ: ಫ್ಯಾಂಟಸಿ ಗೇಮ್ನಲ್ಲಿ ₹1.5 ಕೋಟಿ ಗೆದ್ದ ಮೆಕ್ಯಾನಿಕ್..!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ದುನಿಯಾ ವಿಜಿ ಮೇಲೆ ಹೊಸ ಆರೋಪ ಮಾಡಿದ ನಾಗರತ್ನ
Recommended Video
ನಟ ದುನಿಯಾ ವಿಜಯ್ ಮತ್ತು ಮೊದಲ ಪತ್ನಿ ನಾಗರತ್ನ ನಡುವಿನ ಕೌಟುಂಬಿಕ ಕಲಹ ಮತ್ತೆ ಸುದ್ದಿಯಾಗಿದೆ. 'ನಾಗರತ್ನ ಅವರಿಂದ ವಿಚ್ಛೇದನ ಕೊಡಿಸಿ' ಎಂದು ವಿಜಿ ನ್ಯಾಯಾಲಯದ ಮೊರೆ ಹೋಗಿದ್ದಾರೆ.
ಈ ಕಡೆ ನಾಗರತ್ನ ''ನಾನು ಯಾವುದೇ ಕಾರಣಕ್ಕೂ ವಿಜಿಗೆ ವಿಚ್ಛೇದನ ಕೊಡಲ್ಲ, ನನಗೆ ಜೀವನಾಂಶ ಕೊಡ್ತೀನಿ ಅಂತ ಹೇಳಿದ್ರು. ಕಳೆದ ಮೂರ್ನಾಲ್ಕು ತಿಂಗಳಿನಿಂದ ಕೊಟ್ಟಿಲ್ಲ'' ಅಂತ ಹೇಳಿ ರಾಜ್ಯ ಮಹಿಳಾ ಆಯೋಗಕ್ಕೆ ದೂರು ನೀಡಿದ್ದಾರೆ.
ಇಷ್ಟು ದಿನ ಪತಿ ಮತ್ತು ಕೀರ್ತಿ ಗೌಡ ಮೇಲೆ ಆರೋಪ ಮಾಡ್ತಿದ್ದ ನಾಗರತ್ನ ಈಗ ಹೊಸ ಆರೋಪ ಮಾಡಿದ್ದಾರೆ. ಚೆನ್ನಮ್ಮನ ಕೆರೆ ಅಚ್ಚುಕಟ್ಟು ಪ್ರದೇಶದಲ್ಲಿ ವಿಜಿಯವರ ಮತ್ತೊಂದು ಮನೆಯಿದ್ದು, ವಿಜಿ ಆಪ್ತ ನಿರ್ಮಾಪಕ ಸುಂದರ್ ಗೌಡ ವಾಸಿಸುತ್ತಿದ್ದಾರೆ. ಆ ಮನೆಯನ್ನು ನಮಗೆ ಗೊತ್ತಿಲ್ಲದಂತೆ ವಿಜಯ್, ಸುಂದರ್ ಗೌಡರಿಗೆ ಮಾರಿದ್ದಾರೆ ಎಂದು ನಾಗರತ್ನಾ ದೂರಿದ್ದಾರೆ.
ದುನಿಯಾ ವಿಜಯ್ ಮನೆಗೆ ನಾಗರತ್ನ ಹೋಗಬಾರದು: ಇದು ಕೋರ್ಟ್ ಆದೇಶ.!
ಸುಂದರ್ ಪಿ ಗೌಡ ಉಳಿದುಕೊಂಡಿರುವ ಮನೆಯನ್ನ ಖಾಲಿ ಮಾಡಿಸಿ ನಮಗೆ ಕೊಡಿಸಿ ಎಂದು ಮಹಿಳಾ ಆಯೋಗದಲ್ಲಿ ನಾಗರತ್ನ ಮನವಿ ಮಾಡಿಕೊಂಡಿದ್ದಾರೆ.
ನಾಗರತ್ನರಿಂದ ವಿಚ್ಛೇದನಕ್ಕಾಗಿ ಕೋರ್ಟ್ ಮೊರೆಹೋದ ದುನಿಯಾ ವಿಜಯ್.!
ನಾಗರತ್ನ ಅವರ ದೂರು ಸ್ವೀಕರಿಸಿದ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಬಾಯಿ ''ದುನಿಯಾ ವಿಜಯ್ ಅವರನ್ನ ಕರೆಸಿ ಈ ಸಮಸ್ಯೆ ಬಗೆಹರಿಸುವ ಪ್ರಯತ್ನ ಮಾಡ್ತೇವೆ'' ಎಂದು ತಿಳಿಸಿದ್ದಾರೆ.