Don't Miss!
- News Poornachandra Tejaswi: ವಿಸ್ಮಯಲೋಕವನ್ನೇ ತೆರೆದಿಡುವ ತೇಜಸ್ವಿಯವರ ಪುಸ್ತಕಗಳು
- Lifestyle ಗ್ರಹಣ ಕಾಲದಲ್ಲಿ ಆಹಾರ ಸೇವಿಸಬಾರದೇಕೆ.? ಹಿರಿಯರ ವಾದವೇನು..?
- Technology ಬಜೆಟ್ ದರದಲ್ಲಿ ಬೆಸ್ಟ್ 5G ಫೋನ್ ಬೇಕಿದ್ರೆ, ಈ ಲಿಸ್ಟ್ ಒಮ್ಮೆ ಗಮನಿಸಿ!
- Finance ಆದಾಯ ತೆರಿಗೆ ಇಲಾಖೆಯಿಂದ ಕಾಂಗ್ರೆಸ್ಗೆ 1,823 ಕೋಟಿ ರೂ. ನೋಟಿಸ್: ತೆರಿಗೆ ಭಯೋತ್ಪಾದನೆ ನಿಲ್ಲಲೇಬೇಕು ಎಂದ ಪಕ್ಷ
- Sports Kohli vs Gambhir: ಹೈ-ವೋಲ್ಟೇಜ್ ಪಂದ್ಯದ ಬಗ್ಗೆ ಕೌಂಟರ್ ನೀಡಿದ ದಿನೇಶ್ ಕಾರ್ತಿಕ್
- Automobiles ಇನ್ಮುಂದೆ ಟೋಲ್ ಪ್ಲಾಜಾಗಳು ಕಣ್ಮರೆ: ಖುಷಿ ಪಡುವ ಮುನ್ನ ಈ ಸುದ್ದಿ ನೋಡಿ...
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ದುರ್ಯೋಧನ' ಅವತಾರದಲ್ಲಿ ಬಂದ ಗಣೇಶ: ಡಿ-ಬಾಸ್ ಭಕ್ತರು ಫುಲ್ ಖುಷ್
ಚಾಲೆಂಜಿಂಗ್ ಸ್ಟಾರ್ ದರ್ಶನ್ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಕುರುಕ್ಷೇತ್ರ ಸಿನಿಮಾದ ಹವಾ ಹೆಚ್ಚಾಗಿದೆ. ಅದರಲ್ಲೂ ದರ್ಶನ್ ಅವರನ್ನ ದುರ್ಯೋಧನನಾಗಿ ನೋಡಿದ ಪ್ರೇಕ್ಷಕರು ನಿಜಕ್ಕೂ ಸಂತೋಷಗೊಂಡಿದ್ದಾರೆ.
ಈ ಖುಷಿ ಮತ್ತು ಸಂಭ್ರಮ ಗಣೇಶ ಹಬ್ಬಕ್ಕೆ ಮತ್ತಷ್ಟು ಹೆಚ್ಚಾಗುತ್ತಿದೆ. ಹೌದು, ಗಣೇಶ ಹಬ್ಬದ ಪ್ರಯುಕ್ತ ಮಾರುಕಟ್ಟೆಗೆ 'ದುರ್ಯೋಧನ' ಗಣೇಶನ ಪ್ರವೇಶವಾಗಿದೆ. ಇದು ಸಹಜವಾಗಿ ಡಿ-ಬಾಸ್ ಭಕ್ತರಿಗೆ ಸಂತಸಕ್ಕೆ ಕಾರಣವಾಗಿದೆ.
ಕಿಚ್ಚನ ಕ್ರೇಜ್ : ಮಾರುಕಟ್ಟೆಗೆ ಬಂತು 'ಪೈಲ್ವಾನ್' ಗಣೇಶ
ಕನ್ನಡ, ತಮಿಳು ಹಾಗೂ ಮಲಯಾಳಂ ಭಾಷೆಯಲ್ಲಿ ಕುರುಕ್ಷೇತ್ರ ಸಿನಿಮಾ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಇದೇ ಸಂದರ್ಭದಲ್ಲಿ ದುರ್ಯೋಧನನ ಗಣೇಶ ತಯಾರು ಮಾಡಿರುವುದು ವಿಷವಾಗಿ ಗಮನ ಸೆಳೆಯುತ್ತಿದೆ.
ಕುರುಕ್ಷೇತ್ರ ಚಿತ್ರದಲ್ಲಿ ದರ್ಶನ್ (ದುರ್ಯೋಧನ) ಕುಳಿತಿರುವ ಸ್ಟೈಲ್ ನಲ್ಲಿ ದುರ್ಯೋಧನ ಗಣೇಶವನ್ನ ಕೂಡ ಡಿಸೈನ್ ಮಾಡಲಾಗಿದೆ. ಸಿಂಹಾಸನದ ಮೇಲೆ ದುರ್ಯೋಧನ ಗಣೇಶ ಕೂತಿದ್ದು, ಕೈಯಲ್ಲಿ ಗದೆ ಹಿಡಿದುಕೊಂಡಿವರುವಂತೆ ತಯಾರು ಮಾಡಲಾಗಿದೆ.
ಬಹುಶಃ ಈ ಬಾರಿಯ ಗಣೇಶ ಉತ್ಸವದಲ್ಲಿ ದುರ್ಯೋಧನ ಗಣೇಶ ಪ್ರಮುಖ ಆಕರ್ಷಣೆಯಾಗಬಹುದು. ದುರ್ಯೋಧನ ಗಣೇಶನಂತೆ ಈಗಾಗಲೇ ಪೈಲ್ವಾನ್ ಗಣೇಶ ಕೂಡ ಮಾರುಕಟ್ಟೆಗೆ ಬಂದಿದೆ. ಜೊತೆಗೆ ಕೆಜಿಎಫ್ ಶೈಲಿಯ ಗಣೇಶ ಕೂಡ ತಯಾರಾಗಿದೆ.
ಈ ಹಿಂದೆ ಪ್ರಭಾಸ್ ಅಭಿನಯದ ಬಾಹುಬಲಿ, ರಜನಿಕಾಂತ್ ಅಭಿನಯದ ಕಬಾಲಿ ಸಿನಿಮಾದ ಶೈಲಿಯ ಗಣೇಶಗಳು ಭಾರಿ ಸದ್ದು ಮಾಡಿತ್ತು. ಈ ಸಲ ಕುರುಕ್ಷೇತ್ರ, ಪೈಲ್ವಾನ್ ಮತ್ತು ಕೆಜಿಎಫ್ ಸದ್ದು ಮಾಡಬಹುದು.