Don't Miss!
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- News RCB: ಆರ್ಸಿಬಿ ಫ್ರಾಂಚೈಸ್ನಿಂದ ಬೆಂಗಳೂರಿನ ಮೂರು ಕೆರೆಗಳ ಪುನಶ್ಚೇತನ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ದುರ್ಯೋಧನ' ಅವತಾರದಲ್ಲಿ ಬಂದ ಗಣೇಶ: ಡಿ-ಬಾಸ್ ಭಕ್ತರು ಫುಲ್ ಖುಷ್
ಚಾಲೆಂಜಿಂಗ್ ಸ್ಟಾರ್ ದರ್ಶನ್ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಕುರುಕ್ಷೇತ್ರ ಸಿನಿಮಾದ ಹವಾ ಹೆಚ್ಚಾಗಿದೆ. ಅದರಲ್ಲೂ ದರ್ಶನ್ ಅವರನ್ನ ದುರ್ಯೋಧನನಾಗಿ ನೋಡಿದ ಪ್ರೇಕ್ಷಕರು ನಿಜಕ್ಕೂ ಸಂತೋಷಗೊಂಡಿದ್ದಾರೆ.
ಈ ಖುಷಿ ಮತ್ತು ಸಂಭ್ರಮ ಗಣೇಶ ಹಬ್ಬಕ್ಕೆ ಮತ್ತಷ್ಟು ಹೆಚ್ಚಾಗುತ್ತಿದೆ. ಹೌದು, ಗಣೇಶ ಹಬ್ಬದ ಪ್ರಯುಕ್ತ ಮಾರುಕಟ್ಟೆಗೆ 'ದುರ್ಯೋಧನ' ಗಣೇಶನ ಪ್ರವೇಶವಾಗಿದೆ. ಇದು ಸಹಜವಾಗಿ ಡಿ-ಬಾಸ್ ಭಕ್ತರಿಗೆ ಸಂತಸಕ್ಕೆ ಕಾರಣವಾಗಿದೆ.
ಕಿಚ್ಚನ ಕ್ರೇಜ್ : ಮಾರುಕಟ್ಟೆಗೆ ಬಂತು 'ಪೈಲ್ವಾನ್' ಗಣೇಶ
ಕನ್ನಡ, ತಮಿಳು ಹಾಗೂ ಮಲಯಾಳಂ ಭಾಷೆಯಲ್ಲಿ ಕುರುಕ್ಷೇತ್ರ ಸಿನಿಮಾ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಇದೇ ಸಂದರ್ಭದಲ್ಲಿ ದುರ್ಯೋಧನನ ಗಣೇಶ ತಯಾರು ಮಾಡಿರುವುದು ವಿಷವಾಗಿ ಗಮನ ಸೆಳೆಯುತ್ತಿದೆ.
ಕುರುಕ್ಷೇತ್ರ ಚಿತ್ರದಲ್ಲಿ ದರ್ಶನ್ (ದುರ್ಯೋಧನ) ಕುಳಿತಿರುವ ಸ್ಟೈಲ್ ನಲ್ಲಿ ದುರ್ಯೋಧನ ಗಣೇಶವನ್ನ ಕೂಡ ಡಿಸೈನ್ ಮಾಡಲಾಗಿದೆ. ಸಿಂಹಾಸನದ ಮೇಲೆ ದುರ್ಯೋಧನ ಗಣೇಶ ಕೂತಿದ್ದು, ಕೈಯಲ್ಲಿ ಗದೆ ಹಿಡಿದುಕೊಂಡಿವರುವಂತೆ ತಯಾರು ಮಾಡಲಾಗಿದೆ.
ಬಹುಶಃ ಈ ಬಾರಿಯ ಗಣೇಶ ಉತ್ಸವದಲ್ಲಿ ದುರ್ಯೋಧನ ಗಣೇಶ ಪ್ರಮುಖ ಆಕರ್ಷಣೆಯಾಗಬಹುದು. ದುರ್ಯೋಧನ ಗಣೇಶನಂತೆ ಈಗಾಗಲೇ ಪೈಲ್ವಾನ್ ಗಣೇಶ ಕೂಡ ಮಾರುಕಟ್ಟೆಗೆ ಬಂದಿದೆ. ಜೊತೆಗೆ ಕೆಜಿಎಫ್ ಶೈಲಿಯ ಗಣೇಶ ಕೂಡ ತಯಾರಾಗಿದೆ.
ಈ ಹಿಂದೆ ಪ್ರಭಾಸ್ ಅಭಿನಯದ ಬಾಹುಬಲಿ, ರಜನಿಕಾಂತ್ ಅಭಿನಯದ ಕಬಾಲಿ ಸಿನಿಮಾದ ಶೈಲಿಯ ಗಣೇಶಗಳು ಭಾರಿ ಸದ್ದು ಮಾಡಿತ್ತು. ಈ ಸಲ ಕುರುಕ್ಷೇತ್ರ, ಪೈಲ್ವಾನ್ ಮತ್ತು ಕೆಜಿಎಫ್ ಸದ್ದು ಮಾಡಬಹುದು.