Don't Miss!
- Sports CSK vs LSG IPL 2024: ರುತುರಾಜ್ ಭರ್ಜರಿ ಶತಕ, ದುಬೆ ಸ್ಫೋಟಕ ಬ್ಯಾಟಿಂಗ್; ಲಕ್ನೋಗೆ ಬೃಹತ್ ಗುರಿ ನೀಡಿದ ಚೆನ್ನೈ
- News Narendra Modi: ಕರ್ನಾಟಕಕ್ಕೆ ಏಪ್ರಿಲ್ 29, 29ಕ್ಕೆ ಪ್ರಧಾನಿ ಮೋದಿ ಆಗಮನ
- Lifestyle UPSCಯಲ್ಲಿ 2ನೇ ರ್ಯಾಂಕ್ ಗಳಿಸಿದ ಸಾಧಕನ ಡ್ಯಾನ್ಸ್ ವೀಡಿಯೋ ವೈರಲ್: ಇವರ ಬದುಕಿನಲ್ಲಿ ನಡೆದಿದೆ ಹಲವು ದುರಂತಗಳು
- Automobiles ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
''ನಾನು ಚೆನ್ನಾಗಿ ಇದ್ದೇನೆ.. ಚೆನ್ನಾಗಿಯೇ ಇರುತ್ತೇನೆ..''- ದ್ವಾರಕೀಶ್
Recommended Video
''ನಾನು ಆರೋಗ್ಯವಾಗಿ ಇದ್ದೇನೆ, ಸುಳ್ಳು ವದಂತಿಗಳಿಗೆ ನಿಗಾ ಕೊಡಬೇಡಿ.'' ಎಂದು ಹಿರಿಯ ನಟ, ನಿರ್ಮಾಪಕ ದ್ವಾರಕೀಶ್ ತಿಳಿಸಿದ್ದಾರೆ.
ದ್ವಾರಕೀಶ್ ನಿಧನ ಹೊಂದಿದ್ದಾರೆ ಎನ್ನುವ ಸುಳ್ಳು ಸುದ್ದಿ ನಿನ್ನೆ (ಸೋಮವಾರ) ರಾತ್ರಿಯಿಂದ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿತ್ತು. ವಾಟ್ಸ್ ಅಪ್ ನಲ್ಲಿ RIP ದ್ವಾರಕೀಶ್ ಸರ್ ಎನ್ನುವ ಪೋಸ್ಟ್ ಗಳು ಕಾಣುತ್ತಿದ್ದವು.
ದ್ವಾರಕೀಶ್ ಆರೋಗ್ಯದ ಸ್ಥಿತಿ ಬಗ್ಗೆ ಸುಳ್ಳು ಸುದ್ದಿ- ಫಿಲ್ಮಿಬೀಟ್ ಗೆ ನಿರ್ದೇಶಕ ಚೈತನ್ಯ ಸ್ಪಷ್ಟನೆ
ದ್ವಾರಕೀಶ್ ಅವರ ಬಗ್ಗೆ ಬಂದ ಈ ಸುದ್ದಿ ಕೇಳಿ ಅನೇಕರು ಆಘಾತಗೊಂಡಿದ್ದರು. ಈ ಸುದ್ದಿ ನಿಜನಾ..?, ಸುಳ್ಳಾ..? ಎನ್ನುವ ಗೊಂದಲ ಇನ್ನು ಕೆಲವರಿಗೆ ಇತ್ತು.
ಆದರೆ, ಈ ವಿಷಯದ ಬಗ್ಗೆ ಸ್ವತಃ ದ್ವಾರಕೀಶ್ ಮಾತನಾಡಿದ್ದಾರೆ. ''ನಿಮ್ಮ ದ್ವಾರಕೀಶ್.. ಕರ್ನಾಟಕ ಕುಳ್ಳ.. ಆರೋಗ್ಯವಾಗಿ ಇದ್ದೇನೆ. ನಿಮ್ಮ ಪ್ರೀತಿ, ವಿಶ್ವಾಸದಿಂದ ನಾನು ಚೆನ್ನಾಗಿ ಇದ್ದೇನೆ. ಮುಂದೆ ಚೆನ್ನಾಗಿ ಇರುತ್ತೇನೆ. ಎಲ್ಲವೂ ರಾಘವೇಂದ್ರ ಸ್ವಾಮಿಗಳ ಆಶೀರ್ವಾದ.'' ಎಂದಿದ್ದಾರೆ.
ಈ ಬಗ್ಗೆ ನಿರ್ದೇಶಕ ಕೆ ಎಂ ಚೈತನ್ಯ ಸಹ ಫಿಲ್ಮಿಬೀಟ್ ಕನ್ನಡದ ಜೊತೆಗೆ ಇಂದು ಮಾತನಾಡಿದ್ದರು. ''ನನಗೆ ನಿನ್ನೆ ಮಧ್ಯರಾತ್ರಿ ಈ ವಿಷಯ ತಿಳಿಯಿತು. ಆಗ ತಕ್ಷಣ ಅವರ ಮಗನ ಜೊತೆಗೆ ಮಾತನಾಡಿದೆ. ದ್ವಾರಕೀಶ್ ಸರ್ ಗೆ ಏನು ಆಗಿಲ್ಲ ಎಂದು ಅವರು ಹೇಳಿದ್ದಾರೆ. ವಯಸ್ಸಾಗಿರುವ ಕಾರಣ ಆಗಾಗ ಆಸ್ಪತ್ರೆಗೆ ಹೋಗಬೇಕಾಗುತ್ತದೆ ಅಷ್ಟೇ.'' ಎಂದು ತಿಳಿಸಿದ್ದರು.