twitter
    For Quick Alerts
    ALLOW NOTIFICATIONS  
    For Daily Alerts

    ಸಿನಿಮಾಗಳು ಸೋತು ನಾಲ್ಕೈದು ಮನೆ ಮಾರಿದ್ದಾರೆ ದ್ವಾರಕೀಶ್

    |

    ''ಸಿನಿಮಾ ಬಿಟ್ಟು ನಾನು ಬೇರೆನೂ ಮಾಡಿಲ್ಲ. ಸಿನಿಮಾ ಸಿನಿಮಾ ಎಂದು ಸಿನಿಮಾದಲ್ಲಿಯೇ ಸತ್ತಿದ್ದೇನೆ.'' ಎಂದು ಭಾವುಕವಾಗಿ ಮಾತನಾಡಿದರು ದ್ವಾರಕೀಶ್.

    ನಿರ್ಮಾಪಕ ಜಯಣ್ಣಗೆ ದ್ವಾರಕೀಶ್ 5 ಕೋಟಿ ಹಣ ನೀಡಬೇಕಿದ್ದು, ಈ ಘಟನೆ ಈಗ ದೊಡ್ಡ ಸುದ್ದಿಯಾಗಿದೆ. ಈ ಬಗ್ಗೆ ಮಾತನಾಡಿರುವ ದ್ವಾರಕೀಶ್ ''ಅವರು ಕೋರ್ಟ್ ಗೆ ಹೋಗಬೇಕಿತ್ತು. ಅದನ್ನು ಬಿಟ್ಟು ಹೀಗೆಲ್ಲ ಮಾಡುವುದು ತಪ್ಪು. ಕೋರ್ಟ್ ಆದೇಶ ನೀಡಿದರೆ ಮನೆ ಮಾರಿಯಾದರೂ ಹಣ ನೀಡುತ್ತಿದ್ದೆ.'' ಎಂದಿದ್ದಾರೆ.

    '1 ಕೋಟಿ ಹಣಕ್ಕೆ ಬಾಯಿ ತೆಗೆದರೆ ನನ್ನ ವಿಷಯವು ಹೀಗೆ ಬರುವುದು'- ಜಗ್ಗೇಶ್ ಮಾತಿನ ಅರ್ಥ ಏನು?'1 ಕೋಟಿ ಹಣಕ್ಕೆ ಬಾಯಿ ತೆಗೆದರೆ ನನ್ನ ವಿಷಯವು ಹೀಗೆ ಬರುವುದು'- ಜಗ್ಗೇಶ್ ಮಾತಿನ ಅರ್ಥ ಏನು?

    ಈ ಹಿಂದೆ ಸಿನಿಮಾಗಳು ಸೋತಾಗ ದ್ವಾರಕೀಶ್ ಮನೆ ಮಾರಿಯೇ ಸಾಲ ತೀರಿಸಿದ್ದಾರಂತೆ. ತಮ್ಮ ಜೀವನದಲ್ಲಿ 80 ಕೋಟಿ ರೂಪಾಯಿ ಮನೆಗಳನ್ನು ಮಾರಿದ್ದೇನೆ ಎಂದು ಅವರೇ ಹೇಳಿದ್ದಾರೆ.

    Dwarakish Reaction About His And Jayanna Financial Fight

    'ಉಡಿಸ್ ಮಾಡುತ್ತೇನೆ ಎಂದು ಜಯಣ್ಣ ಬೆದರಿಕೆ': ದ್ವಾರಕೀಶ್ ಕಣ್ಣೀರು'ಉಡಿಸ್ ಮಾಡುತ್ತೇನೆ ಎಂದು ಜಯಣ್ಣ ಬೆದರಿಕೆ': ದ್ವಾರಕೀಶ್ ಕಣ್ಣೀರು

    ದ್ವಾರಕೀಶ್ ಗೆ ಈ ಹಿಂದೆ ಅನೇಕ ಬಾರಿ ಮನೆ ಮಾರುವ ಪರಿಸ್ಥಿತಿ ಬಂದಿದೆ. ಹೀಗಾಗಿ ನಾಲ್ಕೈದು ಬಾರಿ ಅವರ ಮನೆ ಬದಲಾಗಿದೆ. ಬನಶಂಕರಿಯ ಮನೆ, ಎನ್ ಆರ್ ಕಾಲೋನಿಯ ಮನೆ, ಕೋರಮಂಗಲದ ಮನೆ ಹೀಗೆ ನಾಲ್ಕೈದು ಮನೆಯನ್ನು ದ್ವಾರಕೀಶ್ ಮಾರಿದ್ದಾರೆ. ಸದ್ಯ ಎಚ್ ಎಸ್ ಆರ್ ಲೇ ಔಟ್ ನಲ್ಲಿ ವಾಸವಾಗಿದ್ದಾರೆ.

    Exclusive: ದ್ವಾರಕೀಶ್-ಜಯಣ್ಣ ಗಲಾಟೆ ಹಿಂದಿನ '5 ಕೋಟಿ' ವ್ಯವಹಾರದ ಅಸಲಿ ಸತ್ಯExclusive: ದ್ವಾರಕೀಶ್-ಜಯಣ್ಣ ಗಲಾಟೆ ಹಿಂದಿನ '5 ಕೋಟಿ' ವ್ಯವಹಾರದ ಅಸಲಿ ಸತ್ಯ

    'ಆಯುಷ್ಮಾನ್ ಭವ' ಸಿನಿಮಾವನ್ನು ದ್ವಾರಕೀಶ್ ನಿರ್ಮಾಣ ಮಾಡಿದ್ದರು. ಸಿನಿಮಾ ಯಶಸ್ಸು ಕಾಣದ ಕಾರಣ ಅವರ ಜಯಣ್ಣಗೆ ನೀಡಬೇಕಾದ ಹಣ ನೀಡಲು ಆಗಲಿಲ್ಲ. ಇದರಿಂದ ಜಯಣ್ಣ ಹಾಗೂ ಯೋಗೇಶ್ ದ್ವಾರಕೀಶ್ ನಡುವೆ ಗಲಾಟೆ ನಡೆದಿದೆ. ಈಗ ಮತ್ತೆ ದ್ವಾರಕೀಶ್ ಮನೆ ಮಾರುವ ಮಾತನ್ನು ಆಡಿದ್ದಾರೆ.

    English summary
    Producer Dwarakish reaction about his and Jayanna financial fight.
    Sunday, February 2, 2020, 17:34
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X