Don't Miss!
- Sports DC vs GT IPL 2024: ಅಕ್ಷರ್, ರಿಷಭ್ ಶೈನಿಂಗ್; ಗುಜರಾತ್ ವಿರುದ್ಧ ಡೆಲ್ಲಿ ಜಯಭೇರಿ
- News ದ್ವೇಷ ಉತ್ತೇಜಿಸುವ ಪೋಸ್ಟ್: ಕರ್ನಾಟಕ ಬಿಜೆಪಿ ವಿರುದ್ಧ ದೂರು ದಾಖಲಿಸಿದ ಚುನಾವಣಾ ಆಯೋಗ
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Lifestyle 613 ದಿನ ಕೊರೊನಾ ವಿರುದ್ಧ ಹೋರಾಡಿ ವೃತಪಟ್ಟ ವ್ಯಕ್ತಿ..!
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸಿನಿಮಾಗಳು ಸೋತು ನಾಲ್ಕೈದು ಮನೆ ಮಾರಿದ್ದಾರೆ ದ್ವಾರಕೀಶ್
''ಸಿನಿಮಾ ಬಿಟ್ಟು ನಾನು ಬೇರೆನೂ ಮಾಡಿಲ್ಲ. ಸಿನಿಮಾ ಸಿನಿಮಾ ಎಂದು ಸಿನಿಮಾದಲ್ಲಿಯೇ ಸತ್ತಿದ್ದೇನೆ.'' ಎಂದು ಭಾವುಕವಾಗಿ ಮಾತನಾಡಿದರು ದ್ವಾರಕೀಶ್.
ನಿರ್ಮಾಪಕ ಜಯಣ್ಣಗೆ ದ್ವಾರಕೀಶ್ 5 ಕೋಟಿ ಹಣ ನೀಡಬೇಕಿದ್ದು, ಈ ಘಟನೆ ಈಗ ದೊಡ್ಡ ಸುದ್ದಿಯಾಗಿದೆ. ಈ ಬಗ್ಗೆ ಮಾತನಾಡಿರುವ ದ್ವಾರಕೀಶ್ ''ಅವರು ಕೋರ್ಟ್ ಗೆ ಹೋಗಬೇಕಿತ್ತು. ಅದನ್ನು ಬಿಟ್ಟು ಹೀಗೆಲ್ಲ ಮಾಡುವುದು ತಪ್ಪು. ಕೋರ್ಟ್ ಆದೇಶ ನೀಡಿದರೆ ಮನೆ ಮಾರಿಯಾದರೂ ಹಣ ನೀಡುತ್ತಿದ್ದೆ.'' ಎಂದಿದ್ದಾರೆ.
'1 ಕೋಟಿ ಹಣಕ್ಕೆ ಬಾಯಿ ತೆಗೆದರೆ ನನ್ನ ವಿಷಯವು ಹೀಗೆ ಬರುವುದು'- ಜಗ್ಗೇಶ್ ಮಾತಿನ ಅರ್ಥ ಏನು?
ಈ ಹಿಂದೆ ಸಿನಿಮಾಗಳು ಸೋತಾಗ ದ್ವಾರಕೀಶ್ ಮನೆ ಮಾರಿಯೇ ಸಾಲ ತೀರಿಸಿದ್ದಾರಂತೆ. ತಮ್ಮ ಜೀವನದಲ್ಲಿ 80 ಕೋಟಿ ರೂಪಾಯಿ ಮನೆಗಳನ್ನು ಮಾರಿದ್ದೇನೆ ಎಂದು ಅವರೇ ಹೇಳಿದ್ದಾರೆ.
'ಉಡಿಸ್ ಮಾಡುತ್ತೇನೆ ಎಂದು ಜಯಣ್ಣ ಬೆದರಿಕೆ': ದ್ವಾರಕೀಶ್ ಕಣ್ಣೀರು
ದ್ವಾರಕೀಶ್ ಗೆ ಈ ಹಿಂದೆ ಅನೇಕ ಬಾರಿ ಮನೆ ಮಾರುವ ಪರಿಸ್ಥಿತಿ ಬಂದಿದೆ. ಹೀಗಾಗಿ ನಾಲ್ಕೈದು ಬಾರಿ ಅವರ ಮನೆ ಬದಲಾಗಿದೆ. ಬನಶಂಕರಿಯ ಮನೆ, ಎನ್ ಆರ್ ಕಾಲೋನಿಯ ಮನೆ, ಕೋರಮಂಗಲದ ಮನೆ ಹೀಗೆ ನಾಲ್ಕೈದು ಮನೆಯನ್ನು ದ್ವಾರಕೀಶ್ ಮಾರಿದ್ದಾರೆ. ಸದ್ಯ ಎಚ್ ಎಸ್ ಆರ್ ಲೇ ಔಟ್ ನಲ್ಲಿ ವಾಸವಾಗಿದ್ದಾರೆ.
Exclusive: ದ್ವಾರಕೀಶ್-ಜಯಣ್ಣ ಗಲಾಟೆ ಹಿಂದಿನ '5 ಕೋಟಿ' ವ್ಯವಹಾರದ ಅಸಲಿ ಸತ್ಯ
'ಆಯುಷ್ಮಾನ್ ಭವ' ಸಿನಿಮಾವನ್ನು ದ್ವಾರಕೀಶ್ ನಿರ್ಮಾಣ ಮಾಡಿದ್ದರು. ಸಿನಿಮಾ ಯಶಸ್ಸು ಕಾಣದ ಕಾರಣ ಅವರ ಜಯಣ್ಣಗೆ ನೀಡಬೇಕಾದ ಹಣ ನೀಡಲು ಆಗಲಿಲ್ಲ. ಇದರಿಂದ ಜಯಣ್ಣ ಹಾಗೂ ಯೋಗೇಶ್ ದ್ವಾರಕೀಶ್ ನಡುವೆ ಗಲಾಟೆ ನಡೆದಿದೆ. ಈಗ ಮತ್ತೆ ದ್ವಾರಕೀಶ್ ಮನೆ ಮಾರುವ ಮಾತನ್ನು ಆಡಿದ್ದಾರೆ.