Don't Miss!
- News PSI Re-Exam: ಪಿಎಸ್ಐ ಮರುಪರೀಕ್ಷೆ ಅಂತಿಮ ಅಂಕಪಟ್ಟಿ ಪ್ರಕಟ: CET ಅರ್ಜಿ ಸಲ್ಲಿಕೆ ದಿನಾಂಕ ವಿಸ್ತರಣೆ
- Lifestyle ಏಪ್ರಿಲ್ 1ರಿಂದ 800 ಔಷಧಗಳು ದುಬಾರಿ..! ಎಷ್ಟು ಬೆಲೆ ಹೆಚ್ಚಳ.?
- Automobiles ಭಾರತದಲ್ಲಿ ಬಿಡುಗಡೆಗೆ ಸಜ್ಜಾದ ಬಹುನಿರೀಕ್ಷಿತ ಹೊಸ ಸ್ಕೋಡಾ ಸೂಪರ್ಬ್ ಕಾರು
- Sports IPL 2024: ಆರ್ಸಿಬಿ vs ಕೆಕೆಆರ್ ಪಂದ್ಯಕ್ಕೂ ಮುನ್ನ ಗಂಭೀರ್ನತ್ತ ಐಸ್-ಕೋಲ್ಡ್ ಲುಕ್ ನೀಡಿದ ಕೊಹ್ಲಿ
- Technology WhatsApp: ವಾಟ್ಸಾಪ್ನಲ್ಲಿ ಈ ಕರೆಗಳನ್ನು ಸ್ವೀಕರಿಸದಂತೆ ಕೇಂದ್ರದಿಂದ ಎಚ್ಚರಿಕೆ! ಯಾಕೆ ಗೊತ್ತಾ?
- Finance 25ನೇ ವಯಸ್ಸಿನಲ್ಲಿ 25,000 ರೂ.ನಿಂದ 7,000 ಕೋಟಿ ಗಳಿಸಿದ ವ್ಯಕ್ತಿ ಬಗ್ಗೆ ತಿಳಿಯಿರಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಭೂಕಂಪನದಿಂದ ನಟಿ ಲೀಲಾವತಿ ಮನೆ ಬಿರುಕು.! ವಿನೋದ್ ರಾಜ್ ಗೆ ನಡುಕ.!
ಇಂದು (ಏಪ್ರಿಲ್ 18) ಬೆಳಗ್ಗೆ ಸಂಭವಿಸಿದ ಭೂಕಂಪನದ ಬೆಂಗಳೂರಿನ ಜನ ಆತಂಕಕ್ಕೀಡಾಗಿದ್ದು, ಹಿರಿಯ ನಟಿ ಲೀಲಾವತಿ ಅವರಿಗೂ ಭೂಕಂಪನದ ಅನುಭವವಾಗಿದೆಯಂತೆ. ಈ ವೇಳೆ ಲೀಲಾವತಿ ಅವರ ಮನೆಯ ಗೋಡೆ ಬಿರುಕು ಬಿಟ್ಟಿರುವ ಘಟನೆ ಕೂಡ ನಡೆದಿದೆ.[ಉದ್ಯಾನನಗರಿ ಬೆಂಗಳೂರಿನಲ್ಲೂ ಭೂಕಂಪ?!]
ಹಿರಿಯ ನಟಿ ಲೀಲಾವತಿ ಹಾಗೂ ಅವರ ಮಗ ವಿನೋದ್ ರಾಜ್ ಇಬ್ಬರಿಗೂ ಭೂಕಂಪನದ ಅನುಭವವಾಗಿದ್ದು, ಕೆಲ ಕಾಲ ಗಾಬರಿಯಾಗಿದ್ದರಂತೆ. ಈ ಕುರಿತು ಫಿಲ್ಮಿಬೀಟ್ ಜೊತೆ ಮಾತನಾಡಿದ ವಿನೋದ್ ರಾಜ್ ಅವರು ತಮಗಾದ ಅನುಭವ ಬಗ್ಗೆ ಹೇಳಿಕೊಂಡಿದ್ದಾರೆ.[ಬೆಳಗ್ಗೆ ಭೂಮಿ ಕಂಪಿಸಿದ್ದಕ್ಕೆ ಗಡಗಡ ನಡುಗಿದ ನಟಿ ರಕ್ಷಿತಾ ಪ್ರೇಮ್.!]
''ಬೆಳಿಗ್ಗೆ ಸುಮಾರು 7.15 ರಿಂದ 7,30 ಸಮಯ. ನಾನು ಬಾತ್ ರೂಂನಲ್ಲಿದ್ದೆ. ಇದ್ದಕ್ಕಿದ್ದಾಗೆ ದೊಡ್ಡ ಶಬ್ದ ಆಯಿತು. ನಾನೇನೋ ತೋಟದಲ್ಲಿ ಕೆಲಸ ನಡೆಯುತ್ತಿರುತ್ತೆ ಅಲ್ವಾ. ಮೊದಲು ಟ್ರ್ಯಾಕ್ಟರ್ ಏನಾದರೂ ಬಂದಿರಬಹುದು ಎಂದು ಕೊಂಡೆ, ಆದ್ರೆ, ಆ ಅನುಭವ 10-12 ಸೆಕೆಂಡ್ ಕಾಲ ಇತ್ತು. ಭಯ ಆಗಿ ಜೋರಾಗಿ ಅಮ್ಮ ಅಮ್ಮ ಅಂತ ಕಿರುಚಿಕೊಂಡೆ. ಆಮೇಲೆ ಅಮ್ಮನ ಬಳಿ ಓಡಿ ಬಂದೆ, ಅಮ್ಮನಿಗೂ ಆದೇ ರೀತಿಯ ಅನುಭವವಾಗಿತ್ತು'' ಎಂದರು.[ಮಂಡ್ಯ, ರಾಮನಗರದಲ್ಲಿ ಭೂಕಂಪ: ಆತಂಕದಲ್ಲಿ ಜನರು]