Don't Miss!
- News 11 ಕೋಟಿ ಮಹಿಳೆಯರಿಗೆ ಅಡುಗೆ ಅನಿಲ: ಡಾ. ಕೆ. ಸುಧಾಕರ್
- Sports RCB vs KKR IPL 2024: ಕೆಕೆಆರ್ ವಿರುದ್ಧ ಆರ್ಸಿಬಿ ಹಸಿರು ಜೆರ್ಸಿಯಲ್ಲಿ ಕಣಕ್ಕೆ; ಅಂದೇ ಏಕೆ?
- Lifestyle ಮನೆಯಲ್ಲಿ ಸುಲಭವಾಗಿ ಬೀನ್ಸ್ ಬೆಳೆಯಬಹುದು..! ಹೇಗೆ ನೋಡಿ..!
- Automobiles ಎಲೆಕ್ಟ್ರಿಕ್ ಕಾರು ಖರೀದಿಸಿ ಪರಿಸರ ಪ್ರೇಮ ಮೆರೆದ ನಟಿ: ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!
- Finance ಬಿಸಿಲ ಬೇಗೆಯಿಂದ ರಕ್ಷಿಸಿಕೊಳ್ಳಲು ಟ್ರಾಫಿಕ್ ಪೊಲೀಸರಿಗೆ ರಿಲಿಫ್: ಬಂತು ಹವಾನಿಯಂತ್ರಿತ ಎಸಿ ಹೆಲ್ಮೆಟ್!
- Technology Samsung: ಸ್ಯಾಮ್ಸಂಗ್ನ ಈ ಸರಣಿ ಫೋನ್ಗಳಲ್ಲಿ ಗ್ರೀನ್ ಲೈನ್ ಸಮಸ್ಯೆ! ವರದಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಪ್ರಕಾಶ್ ರೈಗೆ 'ವಿಶಲ್' ಸುಮಲತಾಗೆ 'ಕಹಳೆ' ಊದುತ್ತಿರುವ ವ್ಯಕ್ತಿ
ಲೋಕಸಭೆ ಚುನಾವಣೆಯಲ್ಲಿ ಹೆಚ್ಚು ಗಮನ ಸೆಳೆಯುತ್ತಿರುವುದು ಮಂಡ್ಯ ಹಾಗೂ ಬೆಂಗಳೂರು ಕೇಂದ್ರ ಕ್ಷೇತ್ರಗಳು. ಯಾಕಂದ್ರೆ, ಈ ಎರಡು ಕ್ಷೇತ್ರದಲ್ಲಿ ಸಿನಿಮಾ ಕಲಾವಿದರು ಸ್ಪರ್ಧೆ ಮಾಡ್ತಿದ್ದಾರೆ.
ಮಂಡ್ಯದಲ್ಲಿ ನಟಿ ಸುಮಲತಾ ಅಂಬರೀಶ್ ಮತ್ತು ನಿಖಿಲ್ ಕುಮಾರ್ ಎದುರಾಳಿಗಳಾಗಿ ಸ್ಪರ್ಧೆ ಮಾಡಿದ್ರೆ, ಬೆಂಗಳೂರು ಕೇಂದ್ರದಲ್ಲಿ ಬಹುಭಾಷಾ ನಟ ಪ್ರಕಾಶ್ ರೈ ಸ್ವತಂತ್ರ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ.
ಚುನಾವಣಾ ಚಿಹ್ನೆ: ಸುಮಲತಾ ಕೇಳಿದ್ದಾವುದು, ಆಯೋಗ ಕೊಟ್ಟಿದ್ದು ಯಾವುದು?
ಇದೀಗ, ಪ್ರಕಾಶ್ ರೈ ಮತ್ತು ಸುಮಲತಾ ಅವರಿಗೆ ಚುನಾವಣೆ ಆಯೋಗದಿಂದ ಗುರುತಿನ ಚಿಹ್ನೆ ನೀಡಲಾಗಿದೆ. ಪ್ರಕಾಶ್ ರೈಗೆ ವಿಶಲ್ ಚಿಹ್ನೆ ಸಿಕ್ಕಿದೆ. ಆ ಕಡೆ ಸುಮಲತಾಗೆ ಕಹಳೆ ಊದುತ್ತಿರುವ ವ್ಯಕ್ತಿಯ ಚಿಹ್ನೆ ಸಿಕ್ಕಿದೆ.
ಈ ಬಗ್ಗೆ ಸಂತಸ ವ್ಯಕ್ತಪಡಿಸಿರುವ ಪ್ರಕಾಶ್ ರೈ, ''ನಮ್ಮ ಆಯ್ಕೆಯಂತೆ ನಮಗೆ ವಿಶಲ್ ಚಿಹ್ನೆ ಸಿಕ್ಕಿದೆ. ಭ್ರಷ್ಟ ರಾಜಕಾರಣಿ, ಬೇಜವಾಬ್ದಾರಿ ನಾಯಕರ ವಿರುದ್ಧ ವಿಶಲ್ ಊದೋಣ'' ಎಂದಿದ್ದಾರೆ.
ಪಕ್ಷೇತರರಾಗಿ ಪ್ರಚಾರ ಮಾಡುತ್ತಿರುವ ಪ್ರಕಾಶ್ ರೈ ಮತ್ತು ಸುಮಲತಾ ಅವರಿಗೆ ಈಗೊಂದು ಚಿಹ್ನೆ ಸಿಕ್ಕಿದೆ. ಇನ್ಮುಂದೆ ಈ ಚಿಹ್ನೆಯನ್ನ ಜನರಿಗೆ ತಲುಪಿಸಬೇಕಾಗಿದೆ.