Don't Miss!
- News Mysuru Zoo: ಬೇಸಿಗೆಯಲ್ಲೂ ಮೈಸೂರು ಮೃಗಾಲಯ ಕೂಲ್.. ಕೂಲ್! ಹೇಗೆ ಗೊತ್ತಾ?
- Technology vivo: ವಿವೋ Y200i ಸ್ಮಾರ್ಟ್ಫೋನ್ ಲಾಂಚ್! 12GB RAM.. 6000mAh ಬ್ಯಾಟರಿ
- Automobiles ಸಣ್ಣ ಕುಟುಂಬಗಳಿಗೆ ಬೆಸ್ಟ್ ಕಾರು... 5.36 ಲಕ್ಷ ರೂ. ಬೆಲೆ... 34 ಕಿ.ಮೀ ಮೈಲೇಜ್!
- Lifestyle 2 ಬಗೆಯ ಮಜ್ಜಿಗೆ ಸಾರು ರೆಸಿಪಿ: ಕಾಯಿ ಹಾಕಿದ, ಕಾಯಿ ಹಾಕದ ಸಾರಿನ ರೆಸಿಪಿ
- Sports ಐಪಿಎಲ್ನಿಂದ ದೂರವುಳಿದಿದ್ದ ಟೀಮ್ ಇಂಡಿಯಾ ವೇಗಿ ಟಿ20 ವಿಶ್ವಕಪ್ ಆಡುತ್ತಾರಾ?: ಆಟಗಾರ ಹೇಳಿದ್ದೇನು?
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ನಾಳೆ ಭಾರತ್ ಬಂದ್ : ಗೊಂದಲದಲ್ಲಿರುವ ಚಿತ್ರರಂಗ
ತೈಲ ಉತ್ಪನ್ನಗಳ ಬೆಲೆಗಳನ್ನು ಕೇಂದ್ರ ಸರಕಾರ ಹೆಚ್ಚಿಸುತ್ತಿರುವುದನ್ನು ವಿರೋಧಿಸಿ ಸೋಮವಾರ (ಸೆ 10) ಭಾರತ್ ಬಂದ್ ಗೆ ಕರೆನೀಡಾಗಿದೆ. ಬಂದ್ ನ ಬಿಸಿ ನಾಳೆ ಬೆಳ್ಳಂ ಬೆಳ್ಳಿಗ್ಗೆ ಎಲ್ಲಾ ಕ್ಷೇತ್ರಗಳಿಗೆ ಮುಟ್ಟಲಿದ್ದು ಕನ್ನಡ ಚಿತ್ರೋದ್ಯಮಕ್ಕೆ ಈ ಬಿಸಿ ಇರುತ್ತಾ? ಎನ್ನುವ ಕುತೂಹಲ ಅನೇಕರಲ್ಲಿ ಮೂಡಿದೆ.
ಆದರೆ ಬಂದ್ ಗೆ ಬೆಂಬಲ ನೀಡಬೇಕೇ ಅಥವಾ ಬೇಡವೇ ಎನ್ನುವ ಗೊಂದಲದಲ್ಲಿದೆ ಕನ್ನಡ ಚಿತ್ರರಂಗ. ಹೌದು ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿಯಿಂದ ನಾಳಿನ ಬಂದ್ ಗೆ ನೈತಿಕ ಬೆಂಬಲವಷ್ಟೇ ಇದೆ.
ಒಂದು ' ಭಾರತ್ ಬಂದ್' ನಿಂದ ಪೆಟ್ರೋಲ್, ಡೀಸೆಲ್ ಬೆಲೆ ಇಳಿಯುವ ಹಾಗಿದ್ದರೆ!?
ಶಾರ್ಟ್ ನೋಟೀಸ್ ಆಗಿರೋದ್ರಿಂದ ಬಂದ್ ನಿರ್ಧಾರ ತೆಗೆದುಕೊಳ್ಳುವುದು ಕಷ್ಟ ಎನ್ನುತ್ತಿದ್ದಾರೆ ರಾಜ್ಯ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷರಾದ ಚಿನ್ನೇಗೌಡರು. ಇನ್ನು ನಾಳೆ ಸಿನಿಮಾ ಚಿತ್ರೀಕರಣ ನೆಡೆಯುತ್ತಾ? ಸಿನಿಮಾ ಪ್ರದರ್ಶನ ಇರುತ್ತಾ ಎನ್ನುವುದನ್ನ ಜನರೇ ನಿರ್ಧಾರ ಮಾಡಬೇಕಿದೆ.
ಯಾಕಂದ್ರೆ ಚಿತ್ರಮಂದಿರಕ್ಕೆ ಜನರು ಬಂದರೆ ಪ್ರದರ್ಶನ ಮಾಡುವುದು ನಮ್ಮ ಧರ್ಮ. ಜನರು ಬರದೇ ಮನೆಯಲ್ಲಿ ಉಳಿದರೇ ನೋ ಷೋ ಅಂತ ಬೋರ್ಡ್ ಹಾಕಲು ಥಿಯೇಟರ್ ಮಾಲೀಕರು ನಿರ್ಧಾರ ಮಾಡಿದ್ದಾರೆ. ಇನ್ನು ಔಟ್ ಡೋರ್ ಚಿತ್ರೀಕರಣ ಎಂದಿನಂತೆ ನಡೆಯುತ್ತಾ ಇಲ್ಲವಾ? ಎನ್ನುವ ಪ್ರಶ್ನೆಗೆ ಉತ್ತರ ನಾಳಿನ ಬಂದ್ ಪರಿಣಾಮ ಹೇಗಿರುತ್ತೆ ಎನ್ನುವುದರ ಮೇಲೆ ನಿರ್ಧಾರವಾಗಲಿದೆ.