Don't Miss!
- Sports Hardik Pandya: ಹಾರ್ದಿಕ್ ಪಾಂಡ್ಯರಲ್ಲಿನ ನಾಯಕತ್ವದ ಗುಣಗಳು ಕಾಣೆಯಾಗಿವೆಯಾ?
- Finance ಕಳೆದ 5 ವರ್ಷಗಳಲ್ಲಿ ಸಂಸದ ಡಿಕೆ ಸುರೇಶ್ ಅವರ ಆಸ್ತಿ 75% ರಷ್ಟು ಹೆಚ್ಚಳ, ವಿವರ
- Technology ಬಿಎಸ್ಎನ್ಎಲ್ ಗ್ರಾಹಕರಿಗೆ ಸಿಹಿಸುದ್ದಿ!..ಬಜೆಟ್ ದರದಲ್ಲಿ ಹೊಸ ಪ್ಲ್ಯಾನ್ ಲಾಂಚ್!
- News Gold Price: ಇಂದು ಮತ್ತಷ್ಟು ಹೆಚ್ಚಾದ ಬಂಗಾರದ ಬೆಲೆ: ಬೆಳ್ಳಿಯೂ ಬಲು ದುಬಾರಿ
- Lifestyle ಯೇಸುವನ್ನು ಶಿಲುಬೆಗೆ ಹಾಕಿದ ದಿನವನ್ನು ಗುಡ್ ಪ್ರೈಡೇ ಎಂದು ಹೇಳುವುದೇಕೆ?
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ನಾಳೆ ಭಾರತ್ ಬಂದ್ : ಗೊಂದಲದಲ್ಲಿರುವ ಚಿತ್ರರಂಗ
ತೈಲ ಉತ್ಪನ್ನಗಳ ಬೆಲೆಗಳನ್ನು ಕೇಂದ್ರ ಸರಕಾರ ಹೆಚ್ಚಿಸುತ್ತಿರುವುದನ್ನು ವಿರೋಧಿಸಿ ಸೋಮವಾರ (ಸೆ 10) ಭಾರತ್ ಬಂದ್ ಗೆ ಕರೆನೀಡಾಗಿದೆ. ಬಂದ್ ನ ಬಿಸಿ ನಾಳೆ ಬೆಳ್ಳಂ ಬೆಳ್ಳಿಗ್ಗೆ ಎಲ್ಲಾ ಕ್ಷೇತ್ರಗಳಿಗೆ ಮುಟ್ಟಲಿದ್ದು ಕನ್ನಡ ಚಿತ್ರೋದ್ಯಮಕ್ಕೆ ಈ ಬಿಸಿ ಇರುತ್ತಾ? ಎನ್ನುವ ಕುತೂಹಲ ಅನೇಕರಲ್ಲಿ ಮೂಡಿದೆ.
ಆದರೆ ಬಂದ್ ಗೆ ಬೆಂಬಲ ನೀಡಬೇಕೇ ಅಥವಾ ಬೇಡವೇ ಎನ್ನುವ ಗೊಂದಲದಲ್ಲಿದೆ ಕನ್ನಡ ಚಿತ್ರರಂಗ. ಹೌದು ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿಯಿಂದ ನಾಳಿನ ಬಂದ್ ಗೆ ನೈತಿಕ ಬೆಂಬಲವಷ್ಟೇ ಇದೆ.
ಒಂದು ' ಭಾರತ್ ಬಂದ್' ನಿಂದ ಪೆಟ್ರೋಲ್, ಡೀಸೆಲ್ ಬೆಲೆ ಇಳಿಯುವ ಹಾಗಿದ್ದರೆ!?
ಶಾರ್ಟ್ ನೋಟೀಸ್ ಆಗಿರೋದ್ರಿಂದ ಬಂದ್ ನಿರ್ಧಾರ ತೆಗೆದುಕೊಳ್ಳುವುದು ಕಷ್ಟ ಎನ್ನುತ್ತಿದ್ದಾರೆ ರಾಜ್ಯ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷರಾದ ಚಿನ್ನೇಗೌಡರು. ಇನ್ನು ನಾಳೆ ಸಿನಿಮಾ ಚಿತ್ರೀಕರಣ ನೆಡೆಯುತ್ತಾ? ಸಿನಿಮಾ ಪ್ರದರ್ಶನ ಇರುತ್ತಾ ಎನ್ನುವುದನ್ನ ಜನರೇ ನಿರ್ಧಾರ ಮಾಡಬೇಕಿದೆ.
ಯಾಕಂದ್ರೆ ಚಿತ್ರಮಂದಿರಕ್ಕೆ ಜನರು ಬಂದರೆ ಪ್ರದರ್ಶನ ಮಾಡುವುದು ನಮ್ಮ ಧರ್ಮ. ಜನರು ಬರದೇ ಮನೆಯಲ್ಲಿ ಉಳಿದರೇ ನೋ ಷೋ ಅಂತ ಬೋರ್ಡ್ ಹಾಕಲು ಥಿಯೇಟರ್ ಮಾಲೀಕರು ನಿರ್ಧಾರ ಮಾಡಿದ್ದಾರೆ. ಇನ್ನು ಔಟ್ ಡೋರ್ ಚಿತ್ರೀಕರಣ ಎಂದಿನಂತೆ ನಡೆಯುತ್ತಾ ಇಲ್ಲವಾ? ಎನ್ನುವ ಪ್ರಶ್ನೆಗೆ ಉತ್ತರ ನಾಳಿನ ಬಂದ್ ಪರಿಣಾಮ ಹೇಗಿರುತ್ತೆ ಎನ್ನುವುದರ ಮೇಲೆ ನಿರ್ಧಾರವಾಗಲಿದೆ.