Don't Miss!
- Sports CSK vs LSG IPL 2024: ಮಾರ್ಕಸ್ ಸ್ಟೋಯಿನಿಸ್ ಆರ್ಭಟಕ್ಕೆ ಸಿಎಸ್ಕೆ ಥಂಡಾ; ಚೆನ್ನೈಗೆ ನೀರು ಕುಡಿಸಿದ ಲಕ್ನೋ
- News ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ: ಕಾರಣ ತಿಳಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್
- Lifestyle ಈ ಕಾರಣಕ್ಕೆ ನೀವು ಮಾವಿನ ಹಣ್ಣನ್ನು ನೀರಿನಲ್ಲಿ ನೆನೆಹಾಕಿಯೇ ತಿನ್ನಬೇಕು, ಅದು ನಿಮ್ಮ ತೋಟದಲ್ಲಿ ಬೆಳೆದಿದ್ದೇ ಆಗಿರಲಿ
- Automobiles ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಅಂಬಿ ಅಂತ್ಯಕ್ರಿಯೆ ವೇಳೆ ಡಿಸಿಪಿ ಅಣ್ಣಾಮಲೈ-ನಟಿ ಜಯಪ್ರದ ನಡುವೆ ಮಾತಿನ ವಾರ್
ರೆಬೆಲ್ ಸ್ಟಾರ್ ಅಂಬರೀಶ್ ಅವರ ಅಂತ್ಯಕ್ರಿಯೆ ವೇಳೆ ದಕ್ಷಿಣ ವಿಭಾಗದ ಡಿಸಿಪಿ ಅಣ್ಣಾಮಲೈ ಮತ್ತು ಮಾಜಿ ಸಂಸದೆ ಬಹುಭಾಷಾ ನಟಿ ಜಯಪ್ರದ ನಡುವೆ ಮಾತಿನ ವಾರ್ ನಡೆದಿರುವುದು ಗೊತ್ತಾಗಿದೆ.
ಭದ್ರತೆ ದೃಷ್ಟಿಯಿಂದ ಕಂಠೀರವ ಸ್ಟುಡಿಯೋದ ಹೊರೆಗೆ ನಿಂತಿದ್ದ ಡಿಸಿಪಿ ಅಣ್ಣಾಮಲೈ ಅವರ ಮೇಲೆ ನಟಿ ಜಯಪ್ರದ ಆಕ್ರೋಶ ವ್ಯಕ್ತಪಡಿಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಜಯಪ್ರದ ಅವರ ಮಾತಿಗೆ ಕೋಪಗೊಂಡು ಅಣ್ಣಾಮಲೈ ಅವರು ಕೂಡ ಗಟ್ಟಿ ಧ್ವನಿಯಲ್ಲಿ ಮಾತನಾಡಿರುವ ವಿಡಿಯೋ ಈಗ ವೈರಲ್ ಆಗಿದೆ.
ಬೆಂಗಳೂರು ದಕ್ಷಿಣ ನೂತನ ಡೆಪ್ಯೂಟಿ ಕಮಿಷನರ್, ಐಪಿಎಸ್, ಕೆ ಅಣ್ಣಾಮಲೈ ಸಂದರ್ಶನ
ಶನಿವಾರ ರಾತ್ರಿಯಿಂದ ಸತತವಾಗಿ ಅಭಿಮಾನಿಗಳನ್ನ ನಿಯಂತ್ರಿಸುವಲ್ಲಿ ನಿರತರಾಗಿದ್ದ ಪೊಲೀಸರು ಅಂಬಿಯ ಅಂತ್ಯಕ್ರಿಯೆಯನ್ನ ಯಶಸ್ವಿಯಾಗಿ ನಡೆಸಲು ಅನುವು ಮಾಡಿಕೊಟ್ಟಿದ್ದರು. ಇದಕ್ಕಾಗಿ ಸ್ವತಃ ಮುಖ್ಯಮಂತ್ರಿ ಅವರೇ ಶ್ಲಾಘನೆ ವ್ಯಕ್ತಪಡಿಸಿದ್ದರು. ಆದ್ರೆ, ಜಯಪ್ರದ ಮತ್ತು ಅಣ್ಣಾಮಲೈ ನಡುವೆ ಆಗಿರುವ ಈ ಘಟನೆ ಈಗ ಚರ್ಚೆಗೆ ಕಾರಣವಾಗಿದೆ. ಅಷ್ಟಕ್ಕೂ, ಅಲ್ಲಿ ಆಗಿದ್ದೇನು.?
ಅಂದು ಸಂಜೆ ಆಗಿದ್ದೇನು.?
ಯಾವುದೇ ಅಹಿತಕರ ಘಟನೆಗಳು ನಡೆಯದೇ ಅಂಬರೀಶ್ ಅಂತ್ಯಕ್ರಿಯೆ ಮುಗಿದಿತ್ತು. ನಂತರ ಅಭಿಮಾನಿಗಳು, ಸೆಲೆಬ್ರಿಟಿಗಳು ಅಲ್ಲಿಂದ ವಾಪಸ್ ಆಗಲು ಮುಂದಾದರು. ಈ ವೇಳೆ ಅಭಿಮಾನಿಗಳ ಹಿಂಡು ಗೇಟ್ ಬಳಿ ನೂಕುನುಗ್ಗುಲು ಉಂಟು ಮಾಡಿತ್ತು. ಆ ಸಮಯಕ್ಕೆ ಅಲ್ಲಿಗೆ ಬಂದ ಜಯಪ್ರದ ಅವರನ್ನ ಅಣ್ಣಾಮಲೈ ತಡೆದರು.
ಚಿಕ್ಕಮಗಳೂರು ಎಸ್ಪಿ ಅಣ್ಣಾಮಲೈ ಪಾಠದ ಧಾಟಿಯಲ್ಲಿ ವಾರ್ನಿಂಗ್
ಸ್ವಲ್ಪವೊತ್ತು ಕಾರಿನಲ್ಲಿ ಇರಲು ಸೂಚನೆ
ಹೆಚ್ಚು ಸಂಖ್ಯೆಯಲ್ಲಿ ಅಭಿಮಾನಿಗಳು ಇದ್ದಿದ್ದರಿಂದ ಏನಾದರೂ ತೊಂದರೆಯಾಗಬಹುದು ಎಂಬ ಕಾರಣಕ್ಕೆ ಅಣ್ಣಾಮಲೈ ಅವರು, ಜಯಪ್ರದ ಅವರನ್ನ ಕಾರಿನಲ್ಲಿ ಇರಲು ಸೂಚಿಸಿದರು ಎನ್ನಲಾಗಿದ್ದು, ಇದರಿಂದ ಬೇಸರಗೊಂಡ ಜಯಪ್ರದ ಅಣ್ಣಾಮಲೈ ಅವರ ಬಳಿ ಮಾತಿಗಿಳಿದಿದ್ದಾರೆ.
ವರ್ಷದ ವ್ಯಕ್ತಿ: ಚಿಕ್ಕಮಗಳೂರು ಎಸ್ಪಿ ಅಣ್ಣಾಮಲೈ
ಅಣ್ಣಾಮಲೈ ವಿರುದ್ಧ ಬೇಸರ
ಈ ಮಧ್ಯೆ ಇವರಿಬ್ಬರ ನಡುವೆ ಏನಾಯಿತೋ ಎಂಬುದನ್ನ ಗಮನಿಸುವಷ್ಟರಲ್ಲಿ ಅಣ್ಣಾಮಲೈ ಅವರ ಮೇಲೆ ಕೋಪಗೊಂಡು ಬಹುಭಾಷಾ ನಟಿ ಜಯಪ್ರದ ರೇಗಾಡಿದ್ದಾರೆ. 'ನನ್ನ ಹೆಸರು ಅಣ್ಣಾಮಲೈ, ನಿಮ್ಮಿಂದ ಏನೂ ಆಗುತ್ತೋ ಮಾಡ್ಕೊಳಿ ಎಂದು' ಅಣ್ಣಾಮಲೈ ಹೇಳಿರುವುದು. ಇದರಿಂದ ಮತ್ತಷ್ಟು ಕೋಪಗೊಂಡ ಜಯಪ್ರದ ''ನಾನು ಮಾಜಿ ಸಂಸದೆ, ಅದಕ್ಕೂ ಮಿಗಿಲಾಗಿ ನಾನು ಒಬ್ಬ ಮಹಿಳೆಗೆ ರಕ್ಷಣೆ, ನನಗೆ ಕೊಡೋಕೆ ಬೇಕು' ಎಂದು ಕೂಗಾಡಿದ್ದಾರೆ. ಈ ವಿಡಿಯೋಈಗ ಎಲ್ಲೆಡೆ ವೈರಲ್ ಆಗಿದೆ.
ನಿಜಕ್ಕೂ ನಡೆದಿದ್ದೇನು.?
ಅಂದ್ಹಾಗೆ, ನಿನ್ನೆ ಸಂಜೆ ಅಲ್ಲಿ ಆಗಿದ್ದೇನು ಎಂಬುದರ ಬಗ್ಗೆ ಪೂರ್ತಿ ವಿವರ ಸಿಕ್ಕಿಲ್ಲ. ಬಟ್, ಅಣ್ಣಾಮಲೈ ಮತ್ತು ಜಯಪ್ರದ ವಾಗ್ವಾದ ನಡೆಸಿರುವ ವಿಡಿಯೋ ಮಾತ್ರ ಈಗ ವೈರಲ್ ಆಗಿದೆ. ಈ ವಿಡಿಯೋ ನೋಡಿದ ಜನರು, ಯಾರದು ತಪ್ಪು, ಯಾರದು ಸರಿ ಎಂದು ಕಾಮೆಂಟ್ ಹಾಕ್ತಿದ್ದಾರೆ.
ಸಿಎಂ ಕುಮಾರಸ್ವಾಮಿ ಡೈನಾಮಿಕ್ ನಿರ್ಧಾರಕ್ಕೆ ಸಾರ್ವಜನಿಕರ ಉಘೇ..ಉಘೇ..
ಪೊಲೀಸರಿಗೆ ಧನ್ಯವಾದ ಹೇಳಲೇಬೇಕು
ಅದೇನೇ ಆಗಿದ್ದರೂ, ಬೆಂಗಳೂರು ಪೊಲೀಸರಿಗೂ ಹಾಗೂ ಮಂಡ್ಯ ಪೊಲೀಸರಿಗೆ ಧನ್ಯವಾದ ಹೇಳಲೇಬೇಕು. ಶನಿವಾರ, ಭಾನುವಾರ ಮತ್ತು ಸೋಮವಾರ ಸತತ ಮೂರು ದಿನಗಳ ಕಾಲ, ಅಂಬರೀಶ್ ಅವರ ನಿವಾಸ, ಕಂಠೀರವ ಸ್ಟುಡಿಯೋ, ಮಂಡ್ಯ ಸ್ಟೇಡಿಯಂ ಎಲ್ಲಾ ಕಡೆಯೂ ಕಟ್ಟುನಿಟ್ಟಾಗಿ ಭದ್ರತೆ ನೀಡಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಕಾರ್ಯನಿರ್ವಹಿಸಿದ್ದಾರೆ. ಇದಕ್ಕಾಗಿ ಗೃಹಿ ಇಲಾಖೆಗೆ ಜನರು ಕೂಡ ಥ್ಯಾಂಕ್ಸ್ ಹೇಳಿದ್ದಾರೆ.