Don't Miss!
- Lifestyle ಎಲೆಕೋಸಿಗೆ ಕೆಮಿಕಲ್ ಮಿಶ್ರಣ ಮಾಡ್ತಾರೆ ಹುಷಾರ್..! ವಿಡಿಯೋ ವೈರಲ್..!
- News ಉಚಿತ ಉಪಹಾರದಿಂದ ಉಚಿತ ದಂತ ತಪಾಸಣೆವರೆಗೆ; ಮತದಾನ ಮಾಡಿದವರಿಗೆ ಭರ್ಜರಿ ಆಫರ್ ಕೊಟ್ಟ ಮೈಸೂರು ವ್ಯಾಪಾರಸ್ಥರು
- Automobiles HSRP ನಂಬರ್ ಪ್ಲೇಟ್ನಲ್ಲಿ ನಡೆಯುತ್ತಿದೆ ಭಾರೀ ಮೋಸ: ಬುಕ್ ಮಾಡದವರು ಇದನ್ನು ಗಮನಿಸಿ!
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Sports IPL 2024: ಎಸ್ಆರ್ಹೆಚ್ ಸಂಘಟಿತ ಆಟಕ್ಕೆ ಬ್ರೇಕ್ ಹಾಕಲು ಆರ್ಸಿಬಿ ಏನು ಮಾಡಬೇಕು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕಿಡಿಗೇಡಿಗಳಿಂದ ವಿನೋದ್ ರಾಜ್ಗೆ ತೊಂದರೆ, ಠಾಣೆ ಮೆಟ್ಟಲೇರಿದ ನಟ
ನಟ ವಿನೋದ್ ರಾಜ್ ಗಾಂಧಿ ನಗರದ ಜಂಜಡಗಳಿಂದ ದೂರ ಉಳಿದು, ತಾಯಿ ಲೀಲಾವತಿ ಅವರೊಟ್ಟಿಗೆ ನೆಲಮಂಗಲದ ಹಳ್ಳಿಯೊಂದರಲ್ಲಿ ಕೃಷಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ.
Recommended Video
ಯಾರ ತಂಟೆಗೂ ಹೋಗದೆ, ತಾವಾಯಿತು, ತಮ್ಮ ಕೃಷಿಯಾಯಿತು ಎಂದಿರುವ ವಿನೋದ್ ರಾಜ್ ಗೆ ಕಿಡಿಗೇಡಿಗಳು ಯಾರೊ ಸಮಸ್ಯೆ ಕೊಟ್ಟಿದ್ದಾರೆ.
ನಟ ವಿನೋದ್ ರಾಜ್ ಯಾವುದೇ ಸಾಮಾಜಿಕ ಜಾಲತಾಣವನ್ನು ಬಳಸುವುದಿಲ್ಲ, ಕೃಷಿ ಹಾಗೂ ತಾಯಿಯೇ ಸರ್ವಸ್ವವೆಂದು ಬದುಕುತ್ತಿರುವ ವಿನೋದ್ ರಾಜ್ಗೆ ಅದರ ಅವಶ್ಯಕತೆಯೂ ಬಂದಿಲ್ಲ. ಆದರೆ ಯಾರೊ ಕಿಡಿಗೇಡಿಗಳು ವಿನೋದ್ ರಾಜ್ ಹೆಸರಲ್ಲಿ ನಕಲಿ ಖಾತೆ ತೆರೆದಿದ್ದಾರೆ.
ವಿನೋದ್ ರಾಜ್ ಹೆಸರಲ್ಲಿ ನಕಲಿ ಖಾತೆ
ವಿನೋದ್ ರಾಜ್ ಹೆಸರಲ್ಲಿ ಯಾರೊ ಕಿಡಿಗೇಡಿಗಳು ನಕಲಿ ಖಾತೆ ತೆರೆದು ಸಿನಿಮಾ ನಟ-ನಟಿಯರಿಗೆ ಸಂದೇಶಗಳನ್ನು ಕಳಿಸಿ, ಹಣ ಕೇಳುತ್ತಿದ್ದಾರಂತೆ. ವಿಷಯ ಗೊತ್ತಾಗುತ್ತಿದ್ದಂತೆ ವಿನೋದ್ ರಾಜ್ ಅವರು ಸೈಬರ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಸಾಯಿಪ್ರಕಾಶ್ ಕರೆ ಮಾಡಿದಾಗ ನನಗೆ ಗೊತ್ತಾಯಿತು: ವಿನೋದ್ ರಾಜ್
'ನಾನು ನನ್ನ ತಾಯಿ, ಹೊಲ, ತೋಟ, ಪರಿಸರ, ಆಸ್ಪತ್ರೆ, ಹಳ್ಳಿ ಎಂದುಕೊಂಡು ಇದ್ದೇವೆ. ನನಗೆ ಸಾಮಾಜಿಕ ಜಾಲತಾಣದ ಬಗ್ಗೆ ಏನೂ ಗೊತ್ತಿಲ್ಲ. ಆದರೆ ಯಾರೊ ನನ್ನ ಹೆಸರಲ್ಲಿ ಖಾತೆ ತೆರೆದು ಸಂದೇಶ ಕಳಿಸಿದ್ದಾರೆ ಎಂದು ನಟ ಸಾಯಿಪ್ರಕಾಶ್ ಕರೆ ಮಾಡಿ ಹೇಳಿದಾಗ ಗೊತ್ತಾಯಿತು' ಎಂದಿದ್ದಾರೆ ವಿನೋದ್ ರಾಜ್.
'ಈಗಾಗಲೇ ಕಷ್ಟ ನೋಡಿದ್ದೇವೆ, ಇನ್ನಷ್ಟು ಕಷ್ಟ ಕೊಡಬೇಡಿ'
'ಸಮಾಜದಲ್ಲಿ ಕಲಾವಿದರಿಗೆ ಈ ರೀತಿ ಸಮಸ್ಯೆ ಕೊಡಬೇಡಿ, ಈ ರೀತಿ ನಡೆದುಕೊಂಡು ಕೆಟ್ಟ ಹೆಸರು ತರಬೇಡಿ, ಮನೆ ಹಾಳುಮಾಡುವಂತ ಕೆಲಸ ಮಾಡಬೇಡಿ, ಈಗಾಗಲೇ ಸಾಕಷ್ಟು ಕಷ್ಟ ಕಂಡಿದ್ದೇವೆ, ಇನ್ನಷ್ಟು ಕಷ್ಟ ಕೊಡಬೇಡಿ, ಯಾರು ಈ ಕೆಲಸ ಮಾಡಿದ್ದಾರೊ ಅವರ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳಲಿ' ಎಂದಿದ್ದಾರೆ ವಿನೋದ್ ರಾಜ್.
ಮುಖವಾಡ ಸಿನಿಮಾ ಮೂಲಕ ಚಿತ್ರರಂಗಕ್ಕೆ ಮತ್ತೆ ವಿನೋದ್?
ನೆಲಮಂಗಲದ ಮೈಲನಹಳ್ಳಿ ಗ್ರಾಮದಲ್ಲಿ ಕೃಷಿಯಲ್ಲಿ ತೊಡಗಿರುವ ವಿನೋದ್ ರಾಜ್, ಈಗ ಸಿನಿಮಾಕ್ಕೆ ಮರುಪ್ರವೇಶ ಮಾಡುವ ಉತ್ಸಾಹದಲ್ಲಿದ್ದಾರೆ. ಮುಖವಾಡ ಎಂಬ ಸಿನಿಮಾ ಮೂಲಕ ವಿನೋದ್ ರಾಜ್ ಚಿತ್ರರಂಗಕ್ಕೆ ಮರಳುವ ಸಾಧ್ಯತೆ ಇದೆ.