Don't Miss!
- Sports CSK vs LSG IPL 2024: ಮಾರ್ಕಸ್ ಸ್ಟೋಯಿನಿಸ್ ಆರ್ಭಟಕ್ಕೆ ಸಿಎಸ್ಕೆ ಥಂಡಾ; ಚೆನ್ನೈಗೆ ನೀರು ಕುಡಿಸಿದ ಲಕ್ನೋ
- News ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ: ಕಾರಣ ತಿಳಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್
- Lifestyle ಈ ಕಾರಣಕ್ಕೆ ನೀವು ಮಾವಿನ ಹಣ್ಣನ್ನು ನೀರಿನಲ್ಲಿ ನೆನೆಹಾಕಿಯೇ ತಿನ್ನಬೇಕು, ಅದು ನಿಮ್ಮ ತೋಟದಲ್ಲಿ ಬೆಳೆದಿದ್ದೇ ಆಗಿರಲಿ
- Automobiles ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಫ್ಯಾಮಿಲಿ ಪವರ್ ನಿಂದ ಬೆಳಗಿತು ಹಲವರ ಬಾಳು
ರಿಯಾಲಿಟಿ ಶೋಗಳನ್ನ ಮಾಡುವುದು ಪ್ರೇಕ್ಷಕರನ್ನ ವಾಹಿನಿಗಳತ್ತ ಸೆಳೆಯಲು ಎನ್ನುವ ಮಾತಿದೆ. ಆದರೆ ಶೋಗಳ ಮೂಲಕ ಅನೇಕ ಜನರಿಗೆ ಸಹಾಯವನ್ನೂ ಮಾಡಬಹುದು ಎನ್ನುವುದನ್ನ ತೋರಿಸಿಕೊಟ್ಟಿದೆ ಫ್ಯಾಮಿಲಿ ಪವರ್ ಕಾರ್ಯಕ್ರಮ. ಸಾಮಾನ್ಯವಾಗಿ ರಿಯಾಲಿಟಿ ಶೋ ನಲ್ಲಿ ಭಾಗಿ ಆದ ಜನರು ಒಂದಿಷ್ಟು ಹಣವನ್ನ ಗಳಿಕೆ ಮಾಡಿಕೊಂಡು ಹೋಗೋಣ ಎನ್ನುವ ಆಲೋಚನೆಯಲ್ಲಿಯೇ ಬಂದಿರುತ್ತಾರೆ.
ಆದರೆ ಕೆಲವರಿಗೆ ಮಾತ್ರ ಗೆದ್ದ ಹಣವನ್ನು ಮತ್ತೊಬ್ಬರಿಗೆ ನೀಡಿ ಸಹಾಯ ಮಾಡುವ ಆಲೋಚನೆ ಇರುತ್ತದೆ. ಅಂತದ್ದೆ ನಿದರ್ಶನಗಳು ಫ್ಯಾಮಿಲಿ ಪವರ್ ಶೋ ನಲ್ಲಿ ನಡೆದಿದೆ. ಫ್ಯಾಮಿಲಿ ಪವರ್ ಮೊದಲ ಆವೃತಿಯಲ್ಲಿ ಮನಮುಟ್ಟುವಂತಹ ಅವಿಸ್ಮರಣೀಯ ಕ್ಷಣಗಳಿಗೆ ಸಾಕ್ಷಿ ಆಗಿದೆ.
ಫ್ಯಾಮಿಲಿ ಪವರ್ ನಲ್ಲಿ ಸೀರಿಯಲ್ ಸ್ಟಾರ್ ಗಳ ಹಣಾಹಣಿ
ಅಧಿಕಾರಿಯೊಬ್ಬರು ತಮ್ಮ ಕುಟುಂಬ ಸಮೇತರಾಗಿ ಬಂದು ಆಟವಾಡಿ ಗೆದ್ದ ಹಣವನ್ನು ದೇಶಕ್ಕಾಗಿ ಹೋರಾಟ ಮಾಡಿ ಹುತಾತ್ಮರಾದ ಯೋಧನ ಕುಟುಂಬಕ್ಕೆ ನೀಡಿದರು. ಈ ಮೂಲಕ ಫ್ಯಾಮಿಲಿ ಪವರ್ ಶೋ ನಲ್ಲಿ ಬೇರೆಯವರಿಗೆ ಕೊಟ್ಟು ಖುಷಿ ಪಡಬಹುದು ಎಂದು ತೋರಿಸಿಕೊಟ್ಟರು.
ನಂತರ ಬಂದ ಸಾಫ್ಟ್ ವೇರ್ ಎಂಜಿನಿಯರ್ ಕುಟುಂಬ ಗೆದ್ದ ಸಂಪೂರ್ಣ ಹಣವನ್ನು ಎದುರಾಳಿ ಕುಟುಂಬದ ಮಗುವಿನ ಚಿಕಿತ್ಸೆಗಾಗಿ ಕೊಟ್ಟು ಚಿತ್ರೀಕರಣ ಸ್ಥಳದಲ್ಲಿದ್ದ ಹಾಗೂ ನೋಡುಗರ ಕಣ್ಣಿನಲ್ಲಿ ನೀರು ತರಿಸಿದ್ದರು.
ಗ್ರಾಂಡ್ ಫೈನಲ್ಸ್ ನಲ್ಲಿಯೂ ಅಂತದ್ದೇ ವಿಶೇಷವಾದ ಕೆಲಸಕ್ಕೆ ಧಾರಾವಾಹಿ ಕಲಾವಿದರು ಮುಂದಾಗಿದ್ದಾರೆ. ಶ್ರವಣ ದೋಷವಿರುವ ಮೂರು ವರ್ಷದ ಪ್ರಚೇತ್ ಎಂಬ ಪುಟ್ಟ ಬಾಲಕನ ಚಿಕಿತ್ಸೆಗಾಗಿ ಫ್ಯಾಮಿಲಿ ಪವರ್ ನಲ್ಲಿ ಆಟ ಆಡಲಿದ್ದಾರೆ. ಇನ್ನೂ ವಿಶೇಷ ಅಂದರೆ ಕಲರ್ಸ್ ಕನ್ನಡ ವಾಹಿನಿ ಮಗುವಿನ ಚಿಕಿತ್ಸೆಗೆ ಹಣ ಹೆಚ್ಚು ಖರ್ಚಾಗುತ್ತದೆ ಎನ್ನುವ ಉದ್ದೇಶದಿಂದಾಗಿ ಬಹುಮಾನದ ಹಣ ಹತ್ತು ಲಕ್ಷದಿಂದ 15 ಲಕ್ಷಕ್ಕೆ ಏರಿಸಿದ್ದಾರೆ.