Don't Miss!
- News ಪೂಜೆ ಮಾಡಿದ ಈ ಲಿಂಬೆಹಣ್ಣು ಲಕ್ಷಕ್ಕೆ ಹರಾಜ್! ಶಾಕ್ ಆಡ್ಬೇಡಿ ಇದು ನಿಜ...
- Sports IPL 2024: ಆರ್ಸಿಬಿ vs ಕೆಕೆಆರ್ ಪಂದ್ಯಕ್ಕೂ ಮುನ್ನ ಗಂಭೀರ್ನತ್ತ ಐಸ್-ಕೋಲ್ಡ್ ಲುಕ್ ನೀಡಿದ ಕೊಹ್ಲಿ
- Automobiles ಓಲಾ ಎಸ್ 1 ಪ್ರೋ VS ಏಥರ್ 450X: ಮದಗಜಗಳ ಹಣಾಹಣಿಯಲ್ಲಿ ಯಾರು ಬೆಸ್ಟ್?
- Technology WhatsApp: ವಾಟ್ಸಾಪ್ನಲ್ಲಿ ಈ ಕರೆಗಳನ್ನು ಸ್ವೀಕರಿಸದಂತೆ ಕೇಂದ್ರದಿಂದ ಎಚ್ಚರಿಕೆ! ಯಾಕೆ ಗೊತ್ತಾ?
- Lifestyle ಬಾಯಿ ರುಚಿಗೆ ಗರಿ ಗರಿ ನಿಪ್ಪಟ್ಟು..! ಮನೆಯಲ್ಲೇ ಮಾಡಿ ಟೆಸ್ಟಿ ತಿಂಡಿ
- Finance 25ನೇ ವಯಸ್ಸಿನಲ್ಲಿ 25,000 ರೂ.ನಿಂದ 7,000 ಕೋಟಿ ಗಳಿಸಿದ ವ್ಯಕ್ತಿ ಬಗ್ಗೆ ತಿಳಿಯಿರಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಫ್ಯಾಮಿಲಿ ಪವರ್ ನಿಂದ ಬೆಳಗಿತು ಹಲವರ ಬಾಳು
ರಿಯಾಲಿಟಿ ಶೋಗಳನ್ನ ಮಾಡುವುದು ಪ್ರೇಕ್ಷಕರನ್ನ ವಾಹಿನಿಗಳತ್ತ ಸೆಳೆಯಲು ಎನ್ನುವ ಮಾತಿದೆ. ಆದರೆ ಶೋಗಳ ಮೂಲಕ ಅನೇಕ ಜನರಿಗೆ ಸಹಾಯವನ್ನೂ ಮಾಡಬಹುದು ಎನ್ನುವುದನ್ನ ತೋರಿಸಿಕೊಟ್ಟಿದೆ ಫ್ಯಾಮಿಲಿ ಪವರ್ ಕಾರ್ಯಕ್ರಮ. ಸಾಮಾನ್ಯವಾಗಿ ರಿಯಾಲಿಟಿ ಶೋ ನಲ್ಲಿ ಭಾಗಿ ಆದ ಜನರು ಒಂದಿಷ್ಟು ಹಣವನ್ನ ಗಳಿಕೆ ಮಾಡಿಕೊಂಡು ಹೋಗೋಣ ಎನ್ನುವ ಆಲೋಚನೆಯಲ್ಲಿಯೇ ಬಂದಿರುತ್ತಾರೆ.
ಆದರೆ ಕೆಲವರಿಗೆ ಮಾತ್ರ ಗೆದ್ದ ಹಣವನ್ನು ಮತ್ತೊಬ್ಬರಿಗೆ ನೀಡಿ ಸಹಾಯ ಮಾಡುವ ಆಲೋಚನೆ ಇರುತ್ತದೆ. ಅಂತದ್ದೆ ನಿದರ್ಶನಗಳು ಫ್ಯಾಮಿಲಿ ಪವರ್ ಶೋ ನಲ್ಲಿ ನಡೆದಿದೆ. ಫ್ಯಾಮಿಲಿ ಪವರ್ ಮೊದಲ ಆವೃತಿಯಲ್ಲಿ ಮನಮುಟ್ಟುವಂತಹ ಅವಿಸ್ಮರಣೀಯ ಕ್ಷಣಗಳಿಗೆ ಸಾಕ್ಷಿ ಆಗಿದೆ.
ಫ್ಯಾಮಿಲಿ ಪವರ್ ನಲ್ಲಿ ಸೀರಿಯಲ್ ಸ್ಟಾರ್ ಗಳ ಹಣಾಹಣಿ
ಅಧಿಕಾರಿಯೊಬ್ಬರು ತಮ್ಮ ಕುಟುಂಬ ಸಮೇತರಾಗಿ ಬಂದು ಆಟವಾಡಿ ಗೆದ್ದ ಹಣವನ್ನು ದೇಶಕ್ಕಾಗಿ ಹೋರಾಟ ಮಾಡಿ ಹುತಾತ್ಮರಾದ ಯೋಧನ ಕುಟುಂಬಕ್ಕೆ ನೀಡಿದರು. ಈ ಮೂಲಕ ಫ್ಯಾಮಿಲಿ ಪವರ್ ಶೋ ನಲ್ಲಿ ಬೇರೆಯವರಿಗೆ ಕೊಟ್ಟು ಖುಷಿ ಪಡಬಹುದು ಎಂದು ತೋರಿಸಿಕೊಟ್ಟರು.
ನಂತರ ಬಂದ ಸಾಫ್ಟ್ ವೇರ್ ಎಂಜಿನಿಯರ್ ಕುಟುಂಬ ಗೆದ್ದ ಸಂಪೂರ್ಣ ಹಣವನ್ನು ಎದುರಾಳಿ ಕುಟುಂಬದ ಮಗುವಿನ ಚಿಕಿತ್ಸೆಗಾಗಿ ಕೊಟ್ಟು ಚಿತ್ರೀಕರಣ ಸ್ಥಳದಲ್ಲಿದ್ದ ಹಾಗೂ ನೋಡುಗರ ಕಣ್ಣಿನಲ್ಲಿ ನೀರು ತರಿಸಿದ್ದರು.
ಗ್ರಾಂಡ್ ಫೈನಲ್ಸ್ ನಲ್ಲಿಯೂ ಅಂತದ್ದೇ ವಿಶೇಷವಾದ ಕೆಲಸಕ್ಕೆ ಧಾರಾವಾಹಿ ಕಲಾವಿದರು ಮುಂದಾಗಿದ್ದಾರೆ. ಶ್ರವಣ ದೋಷವಿರುವ ಮೂರು ವರ್ಷದ ಪ್ರಚೇತ್ ಎಂಬ ಪುಟ್ಟ ಬಾಲಕನ ಚಿಕಿತ್ಸೆಗಾಗಿ ಫ್ಯಾಮಿಲಿ ಪವರ್ ನಲ್ಲಿ ಆಟ ಆಡಲಿದ್ದಾರೆ. ಇನ್ನೂ ವಿಶೇಷ ಅಂದರೆ ಕಲರ್ಸ್ ಕನ್ನಡ ವಾಹಿನಿ ಮಗುವಿನ ಚಿಕಿತ್ಸೆಗೆ ಹಣ ಹೆಚ್ಚು ಖರ್ಚಾಗುತ್ತದೆ ಎನ್ನುವ ಉದ್ದೇಶದಿಂದಾಗಿ ಬಹುಮಾನದ ಹಣ ಹತ್ತು ಲಕ್ಷದಿಂದ 15 ಲಕ್ಷಕ್ಕೆ ಏರಿಸಿದ್ದಾರೆ.