Don't Miss!
- Sports CSK vs LSG IPL 2024: ಮಾರ್ಕಸ್ ಸ್ಟೋಯಿನಿಸ್ ಆರ್ಭಟಕ್ಕೆ ಸಿಎಸ್ಕೆ ಥಂಡಾ; ಚೆನ್ನೈಗೆ ನೀರು ಕುಡಿಸಿದ ಲಕ್ನೋ
- News ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ: ಕಾರಣ ತಿಳಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್
- Lifestyle ಈ ಕಾರಣಕ್ಕೆ ನೀವು ಮಾವಿನ ಹಣ್ಣನ್ನು ನೀರಿನಲ್ಲಿ ನೆನೆಹಾಕಿಯೇ ತಿನ್ನಬೇಕು, ಅದು ನಿಮ್ಮ ತೋಟದಲ್ಲಿ ಬೆಳೆದಿದ್ದೇ ಆಗಿರಲಿ
- Automobiles ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕೊನೆಯದಾಗಿ ಪ್ರಧಾನಿ ಮೋದಿ ನಿವಾಸದಲ್ಲಿ ಭೇಟಿಯಾಗಿದ್ವಿ: ಎಸ್ ಪಿ ಬಿ ಬಗ್ಗೆ ವಿಜಯ್ ಪ್ರಕಾಶ್ ಮಾತು
ಲೆಜೆಂಡರಿ ಗಾಯಕ ಎಸ್ ಪಿ ಬಾಲಸುಬ್ರಹ್ಮಣ್ಯಂ ಇನ್ನು ನೆನಪು ಮಾತ್ರ. ಅವರ ನಿಧನದ ಸುದ್ದಿ ಭಾರತದ ಗಾನ ಲೋಕಕ್ಕೆ ಆಘಾತವುಂಟು ಮಾಡಿದೆ. ಭಾರತದ ಅದರಲ್ಲಿಯೂ ದಕ್ಷಿಣ ಭಾರತದ ಬಹುತೇಕ ಗಾಯಕರು ಎಸ್ ಪಿ ಬಿ ಅವರನ್ನು ದೇವರು ಎಂದು ಪೂಜಿಸುತ್ತಿದ್ದರು.
ಖ್ಯಾತ ಗಾಯಕನನ್ನು ಕಳೆದಕೊಂಡು ಗಾನಲೋಕ ದುಃಖದ ಸಾಗರದಲ್ಲಿ ಮುಳುಗಿದೆ. ಈ ಸಮಯದಲ್ಲಿ ಖ್ಯಾತ ಗಾಯಕ ವಿಜಯ್ ಪ್ರಕಾಶ್, ಎಸ್ ಪಿ ಬಿ ಜೊತೆಗಿನ ನೆನಪನ್ನು ಹಂಚಿಕೊಂಡಿದ್ದಾರೆ. ಖಾಸಗಿ ವಾಹಿನಿ ಜೊತೆ ಮಾತನಾಡಿ ವಿಜಯ್ ಪ್ರಕಾಶ್, ನೇರವಾಗಿ ಅವರ ಶಿಷ್ಯರು ಅಲ್ಲದಿದ್ದರು ಅವರಿಂದನೇ ಹಾಡಲು ಕಲಿತಿದ್ದು ಎಂದು ಹೇಳಿದ್ದಾರೆ.
ಅಗಲಿದ 'ಸಂಗೀತ ಮಾಂತ್ರಿಕನಿಗೆ' ಕಂಬನಿ ಮಿಡಿದ ಕನ್ನಡ ಸಿನಿಪ್ರಮುಖರು
'ಕೋಟಿ ಕೋಟಿ ಪ್ರಾರ್ಥನೆಯ ಶಕ್ತಿ ಅವರ ಹಿಂದೆ ಇತ್ತು. ನಿಜವಾಗಿಯೂ ದುಃಖದ ವಿಚಾರ ಎಂದರೆ 40 ಸಾವಿರಕ್ಕು ಹೆಚ್ಚು ಹಾಡುಗಳನ್ನು ನಮಗೆ ಬಿಟ್ಟು ಹೋಗಿದ್ದಾರೆ. ನೇರವಾಗಿ ಅವರ ಶಿಷ್ಯರು ಎಂದು ಹೇಳದಿದ್ದರು. ಅವರಿಂದನೇ ನಾವು ಹಾಡಲು ಕಲಿತ್ತಿದ್ದು.ಇಂತಹ ವ್ಯಕ್ತಿಯನ್ನು ಈ ಸಮಯದಲ್ಲಿ ಅವರನ್ನು ಸರಿಯಾಗಿ ನೋಡಲು ಸಾಧ್ಯವಾಗುವುದಿಲ್ಲವಲ್ಲಾ ಎನ್ನುವುದು ತುಂಬಾ ನೋವಾಗುತ್ತಿದೆ, ಇದು ಅರಗಿಸಿಕೊಳ್ಳಲು ಸಾಧ್ಯವಿಲ್ಲದ ದುರಂತ' ಎಂದಿದ್ದಾರೆ.
Recommended Video
'ಕೊನೆಯದಾಗಿ ಅಕ್ಟೋಬರ್ 17ಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಕೆಲವೇ ಕೆಲವರನ್ನು ಸಣ್ಣ ಸಮಾರಂಭಕ್ಕೆ ಮನೆಗೆ ಆಹ್ವಾನಿಸಿದ್ದರು. ಆಗ ಅ ಸಮಯದಲ್ಲಿ ಅವರ ಜೊತೆ ದೆಹಲಿಯಲ್ಲಿ ಒಟ್ಟಿಗೆ ಇದ್ದೆವು. ತುಂಬಾ ಚೆನ್ನಾಗಿ ಇತ್ತು. ಅನೇಕ ಸಮಯದಲ್ಲಿ ಅವರ ಜೊತೆ ಕಾಲ ಕಳೆದಿದ್ದು ಇದೆ. ನಾಲ್ಕು ತಿಂಗಳ ಹಿಂದೆ ನನ್ನ ಹಾಡು ಕೇಳಿ, ಆಶೀರ್ವಾದದ ಸಂದೇಶ ಕಳುಹಿಸಿದ್ದರು. ಆತ್ಮೀಯವಾಗಿ ನನ್ನ ಬಗ್ಗೆ ತಂದೆಯ ಬಗ್ಗೆ ಮಾತನಾಡುತ್ತಿರು' ಎಂದು ಹೇಳಿದ್ದಾರೆ.