Don't Miss!
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ದುರ್ಯೋಧನ ದರ್ಶನ್ ಗೆ ಅಭಿಮಾನಿಯಿಂದ ಸಿಕ್ಕ ಆ ಭರ್ಜರಿ ಗಿಫ್ಟ್ ಏನು?
Recommended Video
ಕಲಾವಿದರನ್ನ ಸ್ಟಾರ್ ಗಳನ್ನಾಗಿ ಮಾಡುವ ಅಭಿಮಾನಿಗಳ ಆಲೋಚನೆಗಳನ್ನ ನಿಲುಕಲು ಸಾಧ್ಯವೇ ಇಲ್ಲ. ಒಬ್ಬೊಬ್ಬ ಅಭಿಮಾನಿಯೂ ಒಂದೊಂದು ರೀತಿಯಲ್ಲಿ ಯೋಚನೆ ಮಾಡುತ್ತಾರೆ. ತನ್ನ ನೆಚ್ಚಿನ ನಟನನ್ನ ಸೆಳೆಯೋದಕ್ಕಾಗಿ ಹೊಸ ರೀತಿಯ ಐಡಿಯಾಗಳನ್ನ ಮಾಡಿಕೊಳ್ಳುತ್ತಲೇ ಇರುತ್ತಾರೆ. ಇದು ಫ್ಯಾನ್ಸ್ ಗಳ ಮಧ್ಯೆಯೂ ಸಾಕಷ್ಟು ಕಾಂಪಿಟೇಷನ್ ಹುಟ್ಟುಕೊಂಡಿದೆ. ಅದಕ್ಕಾಗಿ ಪ್ರತಿಯೊಬ್ಬರು ವಿಭಿನ್ನವಾಗಿ ಆಲೋಚನೆ ಮಾಡುವ ಅವಶ್ಯಕತೆ ಬಂದಿದೆ.
ಸದ್ಯ ವಿಭಿನ್ನತೆ ಬಗ್ಗೆ ಮಾತನಾಡುತ್ತಿರುವ ಮೂಲ ಉದ್ದೇಶ ಅಂದರೆ ದರ್ಶನ್ ಅಭಿಮಾನಿ. ದರ್ಶನ್ ಅವರ ಅಭಿಮಾನಿ ಭಿನ್ನವಾದ ಉಡುಗೊರೆಯನ್ನು ದರ್ಶನ್ ಅವರಿಗೆ ನೀಡಿ ಮದುವೆಗೆ ಆಹ್ವಾನ ಮಾಡಿದ್ದಾರೆ. ಸದ್ಯ ಅಭಿಮಾನಿಗಳ ಬಳಗದಲ್ಲಿ ಈ ವಿಚಾರ ಸಾಕಷ್ಟು ಚರ್ಚೆ ಆಗುತ್ತಿದೆ.
ಹಾಗಾದರೆ ಈ ಅಭಿಮಾನಿ ಯಾರು? ದರ್ಶನ್ ಅವರಿಗೆ ನೀಡಿರುವ ವಿಭಿನ್ನ ಉಡುಗೊರೆ ಏನು? ಯಾಕಾಗಿ ಈ ರೀತಿಯ ಉಡುಗೊರೆ ನೀಡಿದರು? ಆ ಉಡುಗೊರೆ ರೆಡಿ ಮಾಡಿಸಲು ಎಷ್ಟು ದಿನಗಳು ಬೇಕಾಯ್ತು? ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ಮುಂದೆ ಓದಿ
ಡಿ ಬಾಸ್ ಗೆ ಅಪರೂಪ ಉಡುಗೊರೆ
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಅಭಿಮಾನಿ ತನ್ನ ನೆಚ್ಚಿನ ನಟನಿಗೆ ವಿಭಿನ್ನವಾಗಿರುವ ಉಡುಗೊರೆಯನ್ನ ನೀಡಿದ್ದಾರೆ. ತನ್ನ ಮದುವೆಗೆ ಆಹ್ವಾನ ಮಾಡಲು ದರ್ಶನ್ ಭೇಟಿ ಮಾಡಿರುವ ಅಭಿಮಾನಿ ವಿಶೇಷ ಉಡುಗೊರೆಯನ್ನ ಜೊತೆಯಲ್ಲೇ ತಂದಿದ್ದಾರೆ.
ದುರ್ಯೋಧನನ ಚಿತ್ತಾರ ನೀಡಿ ಆಹ್ವಾನ
ಸದ್ಯ ದರ್ಶನ್ ಅಂದರೆ ಅಭಿಮಾನಿಗಳೆಲ್ಲರು 'ಕುರುಕ್ಷೇತ್ರ' ಸಿನಿಮಾ ಯಾವಾಗ ಬಿಡುಗಡೆ ಎನ್ನುತ್ತಾರೆ. ಇದೇ ರೀತಿ ಆಲೋಚನೆ ಮಾಡಿರುವ ಅಭಿಮಾನಿ ಕಿರಣ್ ದರ್ಶನ್ ದುರ್ಯೋಧನನ ಲುಕ್ ನಲ್ಲಿರುವ ಫೋಟೋವನ್ನು ಪೇಯಿಂಟ್ ಮಾಡಿಸಿ ತಂದು ಕೊಟ್ಟಿದ್ದಾರೆ.
ಹತ್ತು ದಿನದಲ್ಲಿ ಅರಳಿತು ದರ್ಶನ್ ಹೊಸ ಕಲಾಕೃತಿ
ಕಿರಣ್ ಎನ್ನುವ ದರ್ಶನ್ ಅವರ ಅಭಿಮಾನಿ 'ಡಿ ಬಾಸ್' ಅವರನ್ನ ತನ್ನ ಮದುವೆಗೆ ಆಹ್ವಾನ ಮಾಡಬೇಕೆಂದು ನಿರ್ಧಾರ ಮಾಡಿದ್ದರು. ದರ್ಶನ್ ಭೇಟಿ ಮಾಡುವಾಗ ಬರಿ ಕೈನಲ್ಲಿ ಹೇಗೆ ಹೋಗುವುದು ಎನ್ನುವುದನ್ನ ಯೋಚನೆ ಮಾಡಿ ನಂತರ ಧುರ್ಯೋಧನನ ಲುಕ್ ನಲ್ಲಿರುವ ದರ್ಶನ್ ಅವರ ಫೋಟೋವನ್ನು ಪೇಯಿಂಟ್ ಮಾಡಿಸಿ ತೆಗೆದುಕೊಂಡು ಹೋಗಿದ್ದಾರೆ.
ದರ್ಶನ್ ಮೆಚ್ಚಿದ ಫೋಟೋ
ಸಾಮಾನ್ಯವಾಗಿ ಸ್ಟಾರ್ ಗಳು ಅಭಿಮಾನಿಗಳಿಂದ ಯಾವುದೇ ಉಡುಗೊರೆಯನ್ನು ನಿರೀಕ್ಷೆ ಮಾಡುವುದಿಲ್ಲ. ತಮ್ಮ ಸಿನಿಮಾ ನೋಡಿ ರಂಜಿಸಿದರೆ ಸಾಕು ಎನ್ನುವುದು ಅವರ ಆಸೆ ಆಗಿರುತ್ತದೆ. ಇಂಥದೊಂದು ಅಪರೂಪದ ಉಡುಗೊರೆ ದರ್ಶನ್ ಕೈ ತಲುಪಿದಾಗ ಅದನ್ನ ನೋಡಿ ಚಾಲೆಂಜಿಂಗ್ ಸ್ಟಾರ್ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.