ದರ್ಶನ್ ತಂದೆ ಹೆಸರಿನಲ್ಲಿ 'ದೊನ್ನೆ ಬಿರಿಯಾನಿ' ಹೋಟೆಲ್ ತೆರೆದ ಅಭಿಮಾನಿ
ಬಿರಿಯಾನಿ ತಿನ್ಬೇಕು ಅಂತಾ ಬೆಂಗಳೂರು ಒಂದು ಸುತ್ತು ಹಾಕಿದ್ರೆ ಹಲವು ಫೇಮಸ್ ಹೋಟೆಲ್ಗಳು ಸಿಗುತ್ತದೆ. ಅದರಲ್ಲೂ ದೊನ್ನೆ ಬಿರಿಯಾನಿಗೆ ಖ್ಯಾತಿಯಾಗಿರುವ ಹೋಟೆಲ್ಗಳು ಹೆಚ್ಚಿವೆ. ಇದೀಗ, ಸಿಲಿಕಾನ್ ಸಿಟಿಯಲ್ಲಿ ತೂಗುದೀಪ ದೊನ್ನೆ ಬಿರಿಯಾನಿ ಸಿಗಲಿದೆ.
ಹೌದು, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಅಭಿಮಾನಿಯೊಬ್ಬರು ಬೆಂಗಳೂರಿನ ಆರ್ ಆರ್ ನಗರದಲ್ಲಿ ದೊನ್ನೆ ಬಿರಿಯಾನಿ ಹೋಟೆಲ್ ತೆರೆದಿದ್ದು, ಅದಕ್ಕೆ ತೂಗುದೀಪ ಎಂದು ಹೆಸರಿಟ್ಟಿದ್ದಾರೆ.
ಈ ಫೋಟೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಡಿ ಬಾಸ್ ಭಕ್ತರು ಫುಲ್ ಖುಷ್ ಆಗಿದ್ದಾರೆ. ತೂಗುದೀಪ ಹೆಸರಿನಲ್ಲಿ ದೊನ್ನೆ ಬಿರಿಯಾನಿ ಹೋಟೆಲ್ ಸ್ಥಾಪಿಸಿ ಅಭಿಮಾನ ಮೆರೆದಿರುವ ಬಗ್ಗೆ ಮೆಚ್ಚುಗೆ ಸಹ ವ್ಯಕ್ತವಾಗಿದೆ.
Recommended Video

ಅಂದ್ಹಾಗೆ, ಅಣ್ಣಾವ್ರು ಅಭಿಮಾನಿಯೊಬ್ಬರು ಬೆಂಗಳೂರು ಹಾಗೂ ಬೇರೆ ಕಡೆಗಳಲ್ಲಿ ಡಾ ರಾಜ್ ದೊನ್ನೆ ಬಿರಿಯಾನಿ ಹೋಟೆಲ್ ಸ್ಥಾಪಿಸಿ ಯಶಸ್ಸು ಕಂಡಿದ್ದಾರೆ.
ರಾಜ್ ಬಿರಿಯಾನಿ ಹಾಗೂ ತೂಗುದೀಪ ದೊನ್ನೆ ಬಿರಿಯಾನಿ ಸವಿಯಲು ನೀವು ಮಿಸ್ ಮಾಡಿಕೊಳ್ಳಬೇಡಿ. ಸಮಯ ಸಿಕ್ಕರೆ ಸ್ಟಾರ್ ನಟರ ಹೆಸರಿನ ಹೋಟೆಲ್ಗೆ ಭೇಟಿ ನೀಡಿ ಬಿರಿಯಾನಿ ತಿನ್ನಿ.


Click it and Unblock the Notifications











