Don't Miss!
- News Namma Metro Service Extension: ಲೋಕಸಭಾ ಚುನಾವಣೆಗಾಗಿ ಮೆಟ್ರೋ ಸೇವೆ ವಿಸ್ತರಣೆ, ಗಮನಿಸಿ
- Automobiles Hero: ಮಧ್ಯಮ ವರ್ಗದವರ ನೆಚ್ಚಿನ ಬೈಕ್.. ರೂ.75 ಸಾವಿರ ಬೆಲೆ.. ಮೈಲೇಜ್ನಲ್ಲಿ ಸರಿ ಸಾಟಿಯಿಲ್ಲ!
- Lifestyle 3ನೇ ಬಾರಿ ಬಾಹ್ಯಾಕಾಶಕ್ಕೆ ಹಾರಲು ಮುಂದಾದ ಸುನೀತಾ ವಿಲಿಯಮ್ಸ್..!
- Sports T20 World Cup 2024: ವೀರೇಂದ್ರ ಸೆಹ್ವಾಗ್ ಆಯ್ಕೆಯ ಭಾರತ ತಂಡದಲ್ಲಿ ಪ್ರಮುಖ ಆಟಗಾರರಿಗೆ ಸ್ಥಾನವಿಲ್ಲ!
- Technology Realme: ರಿಯಲ್ಮಿ ನಾರ್ಜೋ 70 5G, ನಾರ್ಜೋ 70x 5G ಸ್ಮಾರ್ಟ್ಫೋನ್ ಲಾಂಚ್! ಸಖತ್ ಫೀಚರ್ಸ್... ಬೆಲೆ ಎಷ್ಟು?
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಫ್ಯಾನ್ಸ್ ಒತ್ತಡಕ್ಕೆ ಮಣಿದು ಮತ್ತೆ ಬಣ್ಣ ಹಚ್ಚಿದ ಸುದೀಪ
ಅಂತೂ ಇಂತೂ ಅಭಿನವ ಚಕ್ರರ್ವರ್ತಿ ಮತ್ತೆ ಗಾಂಧಿನಗರಕ್ಕೆ ಕಾಲಿಡೋದು ಪಕ್ಕಾ ಆಗಿಬಿಟ್ಟಿದೆ. ಹಾಗಂತ ಸ್ವತಃ ಕಿಚ್ಚ ಸುದೀಪ್ ಅವರೇ ತಮ್ಮ ಮೈಕ್ರೋಬ್ಲಾಗಿಂಗ್ ತಾಣ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ.
ಈ ಮೊದಲು ಅಂತೆ-ಕಂತೆಗಳು ಭಾರಿ ಪ್ರಮಾಣದಲ್ಲಿ ಗಾಂಧಿನಗರದಲ್ಲಿ ಸುತ್ತುತ್ತಿದ್ದು, ಅದಕ್ಕೆಲ್ಲಾ ಬ್ರೇಕ್ ಹಾಕಿದ ಕಿಚ್ಚ ಸುದೀಪ್ ಅವರು ಅಭಿಮಾನಿಗಳ 'ವಿ ವಾಂಟ್ ಸುದೀಪ್' ಅನ್ನೋ ಬೇಡಿಕೆ ಹಾಗೂ ಪ್ರೀತಿ-ಅಭಿಮಾನಕ್ಕೆ ಸೋತು ಟ್ವಿಟ್ಟರ್ ನಲ್ಲಿ ಅಭಿನಂದನೆ ಸೂಚಿಸಿದ್ದಾರೆ.[ಅಭಿಮಾನಿಗಳಿಗೆ ಕಿಚ್ಚ ಸುದೀಪ್ ಬೇಕಂತೆ? ಏಕಂತೆ?]
'ನನ್ನ ನೆಚ್ಚಿನ ಅಭಿಮಾನಿಗಳಿಗೆ ಧನ್ಯವಾದ, ನಾನು ನಿಮ್ಮ ಅಭಿಮಾನಕ್ಕೆ ಮನಸೋತಿದ್ದೇನೆ, ಆದ್ರಿಂದ ಮತ್ತೆ ಚಿತ್ರರಂಗಕ್ಕೆ ವಾಪಸಾಗುತ್ತಿದ್ದೇನೆ. ಇನ್ನುಮುಂದೆ ಎಂದೆಂದಿಗೂ ನಾನು ನಿಮ್ಮ ಜೊತೆ ಇರುತ್ತೇನೆ. ಆರೋಗ್ಯ ಸುಧಾರಿಸಿದೆ, ಅದಕ್ಕಿಂತಲೂ ಹೆಚ್ಚಾಗಿ ದೃಢನಿರ್ಧಾರ ಹಿಂದೆಂದಿಗಿಂತಲೂ ಅಚಲವಾಗಿದೆ ಎಂದು ಅಭಿಮಾನಿಗಳನ್ನು ಉದ್ದೇಶಿಸಿ ಟ್ವೀಟ್ ಮಾಡಿದ್ದಾರೆ.
Finally
we
got
the
answer
what
we
were
waiting
for
#WeWantKichchaSudeep
Inyaake
tada,
Hakro
stepppuuu....!
pic.twitter.com/zakWuoJejJ
—
OnlySandalwood
(@OnlySandalwood)
August
5,
2015
ಸದ್ಯದಲ್ಲಿ ಕೆ.ಎಸ್.ರವಿಕುಮಾರ್ ಅವರ ಚಿತ್ರಕ್ಕೆ ಸುದೀಪ್ ಅವರು ಬಣ್ಣ ಹಚ್ಚುತ್ತಿದ್ದಾರೆ. ಅದಕ್ಕಾಗಿ ಈಗಿಂದಲೇ ಭರ್ಜರಿ ತಯಾರಿ ಕೂಡ ನಡೆಸುತ್ತಿದ್ದಾರಂತೆ. ಇನ್ನೇನು ಆಗಸ್ಟ್ 10ರಿಂದ ರವಿಕುಮಾರ್ ಸುದೀಪ್ ಕಾಂಬಿನೇಷನ್ ನ ಚಿತ್ರದ ಶೂಟಿಂಗ್ ಪ್ರಾರಂಭವಾಗುತ್ತಿದೆ.[ಯಾರ್ರಿ ಹೇಳಿದ್ದು ಸುದೀಪ್ ಕನ್ನಡ ಚಿತ್ರರಂಗ ತೊರೀತಾರಂತ?]
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕಿಚ್ಚ ಸುದೀಪ್ ಅವರು ಸುಮಾರು ಮೂರು ತಿಂಗಳ ನಂತರ ಬಣ್ಣ ಹಚ್ಚುತ್ತಿರುವುದಕ್ಕೆ ಸುದೀಪ್ ಅವರು ಸಖತ್ ಎಕ್ಸೈಟ್ ಆಗ್ತಾ ಇದ್ದಾರಂತೆ. ಒಂಥರಾ ಹೊಸತನ ಅವರ ಅನುಭವಕ್ಕೆ ಬರುತ್ತಿದೆ ಅಂತ ಸುದೀಪ್ ಮತ್ತೊಂದು ಟ್ವೀಟ್ ಮಾಡಿದ್ದಾರೆ.
Putting
on
mkup
again
after
almost
three
months
fr
KSR's
shoot
strtn
frm
10th..excited
yet
nervous..feeling
new...Eager
to
hit
floors
soon.
—
Kichcha
Sudeepa
(@KicchaSudeep)
August
5,
2015
ಇದೀಗ ಕಿಚ್ಚನ ಮನದಾಳದ ಮಾತುಗಳನ್ನು ಮನಸಾರೆ ಆಲಿಸಿದ ಅಭಿಮಾನಿಗಳು ಫುಲ್ ಖುಷ್ ಆಗಿ ತಮ್ಮ ಪ್ರೀತಿಯ ಸ್ಟಾರ್ ಗೆ ಟ್ವಿಟ್ಟರ್ ಮೂಲಕ ಶುಭಾಶಯ ಕೋರಿದ್ದಾರೆ.[ವರ್ಮಾ ನಿರ್ದೇಶನದಲ್ಲಿ ಮುತ್ತಪ್ಪ ರೈಯಾಗಿ ಕಿಚ್ಚ ಸುದೀಪ್!]
@KicchaSudeep
All
the
best
Anna.
Blast
the
boundaries..
—
Ramesh
Guraddi
(@RGuraddi)
August
5,
2015
ಒಟ್ನಲ್ಲಿ ಎಲ್ಲಾ ಗಾಸಿಪ್ ಗಳಿಗೂ ಬ್ರೇಕ್ ಹಾಕಿದ ಅಭಿನವ ಚಕ್ರವರ್ತಿ ಕಿಚ್ಚ ಸುದೀಪ್, ಅವರು ಗಾಂಧಿನಗರದಲ್ಲಿ ಮತ್ತೆ ತಮ್ಮ ಹವಾ ಕ್ರೀಯೇಟ್ ಮಾಡಲಿದ್ದಾರೆ. ಅದೇನೇ ಇರಲಿ ಸ್ಯಾಂಡಲ್ ವುಡ್ ಮಾತ್ರವಲ್ಲದೇ ಪರಭಾಷಾ ಚಿತ್ರರಂಗದಲ್ಲೂ ಸುದ್ದಿ ಮಾಡುತ್ತಿರುವ ಸುದೀಪ್ ಅವರು ಇನ್ನೂ ಎತ್ತರಕ್ಕೇರಲಿ ಅಂತ ನಾವೂ ಹಾರೈಸೋಣ ಏನಂತೀರಾ?.