Don't Miss!
- News ಮೋದಿ, ಅಮಿತ್ ಶಾ ಯಾವ ಮುಖ ಇಟ್ಟುಕೊಂಡು ಕರ್ನಾಟಕಕ್ಕೆ ಬರುತ್ತಾರೆ: ಸಿದ್ದರಾಮಯ್ಯ ಗರಂ
- Lifestyle ಚಪಾತಿ, ಅನ್ನಕ್ಕೆ ಟೊಮೆಟೋ ಬೇಳೆ ಸಾರು ಸಖತ್ ರುಚಿ..! ಮಾಡೋದು ಸುಲಭ..!
- Automobiles ಅಪ್ಪ-ಮಗಳ ಭಾಂದವ್ಯ.. ಪ್ರೀತಿಯ ಪುತ್ರಿಗೆ ತಂದೆಯಿಂದ 2 ಕೋಟಿಯ ಪೋರ್ಷೆ ಕಾರು ಗಿಫ್ಟ್
- Finance ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 10 ಹಳದಿ ಅನಕೊಂಡ ಸಹಿತ ವ್ಯಕ್ತಿ ಬಂಧನ
- Sports ಟಿ20 ವಿಶ್ವಕಪ್-2024: "ಬಾಗಿಲು ಮುಚ್ಚಿದ್ದೇನೆ" ಎಂದಿದ್ದೇಕೆ ಸ್ಪಿನ್ ಮಾಂತ್ರಿಕ ನರೈನ್
- Technology Google: ಗೂಗಲ್ ಪಿಕ್ಸೆಲ್ 8a ಬೆಲೆ ಮಾಹಿತಿ ಲೀಕ್! ಈ ಫೋನ್ ಫೀಚರ್ಸ್ ಏನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಒಂದು ತಿಂಗಳ ಮುಂಚೆಯೇ 'ಯಜಮಾನ'ರ ಜಾತ್ರೆ ಆರಂಭ, ಈ ಸಲದ ವಿಶೇಷ
ಸೆಪ್ಟೆಂಬರ್ 18 ರಂದು ಸಾಹಸ ಸಿಂಹ ಡಾ ವಿಷ್ಣುವರ್ಧನ್ ಅವರ ಹುಟ್ಟುಹಬ್ಬ. ಇನ್ನೂ ಒಂದು ತಿಂಗಳ ಸಮಯ ಇದೆ. ಆದರೆ ತಿಂಗಳ ಮುಂಚೆಯೇ ಯಜಮಾನರ ಜನುಮದಿನ ಸಂಭ್ರಮಕ್ಕೆ ವಿಷ್ಣು ಅಭಿಮಾನಿಗಳು ಚಾಲನೆ ನೀಡಿದ್ದಾರೆ.
Recommended Video
ವಿಷ್ಣುವರ್ಧನ್ ಅವರ 70ನೇ ವರ್ಷ ಹುಟ್ಟುಹಬ್ಬದ ವಿಶೇಷವಾಗಿ ಒಂದು ತಿಂಗಳ ಸಂಭ್ರಮಾಚರಣೆಗೆ ಅಭಿಮಾನಿಗಳು ಸಿದ್ಧತೆ ನಡೆಸಿದ್ದಾರೆ. ಈ ಅವಧಿಯಲ್ಲಿ ಹಲವು ವಿಶೇಷ ಕಾರ್ಯಕ್ರಮಗಳನ್ನು ಸಹ ಹಮ್ಮಿಕೊಂಡಿದ್ದಾರೆ.
20 ವರ್ಷದ ಹಿಂದೆ ವಿಷ್ಣುವರ್ಧನ್ ಮನೆಗೆ ಅಣ್ಣಾವ್ರು ಹೊರಟಿದ್ದಾಗ, ನಡೆದಿದ್ದೇನು!
ಆಗಸ್ಟ್ 17 ರಿಂದ ಸೆಪ್ಟೆಂಬರ್ 18ರ ತನಕ ನಿರಂತರ ಚಟುವಟಿಕೆಗಳನ್ನು ನಡೆಸಲು ಡಾ ವಿಷ್ಣು ಸೇನಾ ಸಮಿತಿ ಯೋಜಿಸಿದೆ. ವಿಷ್ಣುದಾದ ಬರ್ತಡೇ ವಿಶೇಷವಾಗಿ ಅಭಿಮಾನಿ ಬಳಗ ಆಯೋಜಿಸಿರುವ ಕೆಲವು ಕಾರ್ಯಕ್ರಮಗಳ ಪಟ್ಟಿ ಇಲ್ಲಿವೆ.
- ರಾಜ್ಯದಾದ್ಯಂತ ಸುಮಾರು 70000 ಸಸಿಗಳನ್ನು ನಡೆವುದು
- ರಾಜ್ಯದಾದ್ಯಂತ ಸುಮಾರು 700 ಯುನಿಟ್ ರಕ್ತದಾನ ಮಾಡುವುದು
- ಮಕ್ಕಳಿಂದ ಡಾ ವಿಷ್ಣು ನಟನೆ, ಗಾಯನ, ನಟನೆಯ ಸ್ಪರ್ಧೆ. ವಿಜೇತರಿಗೆ 20000 ರೂಗಳ ಬಹುಮಾನ
- ಶಿಕ್ಷೆಯ ಅವಧಿ ಮುಗಿದರೂ ದಂಡ ಪಾವತಿಸಲಾಗದೆ ಜೈಲಲ್ಲಿರುವ ಖೈದಿಗಳನ್ನು ಬಿಡುಗಡೆಗೊಳಿಸುವುದು
ಇದರ ಜೊತೆಗೆ ಇನ್ನು ಹಲವು ರೀತಿಯ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಅದರ ಬಗ್ಗೆ ಮುಂದಿನ ದಿನಗಳಲ್ಲಿ ವಿವರ ನೀಡಲಾಗುವುದು.