Don't Miss!
- News Women voters: ರಾಜ್ಯದ 17 ಲೋಕಸಭಾ ಕ್ಷೇತ್ರಗಳಲ್ಲಿ ಮಹಿಳೆಯರದ್ದೇ ಪಾರುಪತ್ಯ!
- Automobiles ಭಾರತದಲ್ಲಿ 80 ಲಕ್ಷ ಸ್ಕೂಟರ್ ಮಾರಿದ ಜಪಾನ್ ಕಂಪನಿ: ವಿಶ್ವಗುರು ಭಾರತದಲ್ಲಿ ಎಲ್ಲವೂ ಸಾಧ್ಯ!
- Technology 6000mAh ಬ್ಯಾಟರಿಯ ಈ ಫೋನ್ ಶೀಘ್ರದಲ್ಲೇ ಖರೀದಿಗೆ ಲಭ್ಯ!..ಬೆಲೆ ಎಷ್ಟು?
- Sports ಧೋನಿ ಎದುರು ಬಂದಾಗ ಕೆ.ಎಲ್ ರಾಹುಲ್ ಕ್ಯಾಪ್ ತೆಗೆದಿದ್ದೇಕೆ?: ಕಾರಣವೇನು?
- Lifestyle 2 ಬಗೆಯ ಮಜ್ಜಿಗೆ ಸಾರು ರೆಸಿಪಿ: ಕಾಯಿ ಹಾಕಿದ, ಕಾಯಿ ಹಾಕದ ಸಾರಿನ ರೆಸಿಪಿ
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ನಟಿ ನಯನತಾರಾಗೆ ಅಭಿಮಾನಿಗಳಿಂದ ಮಂದಿರ
ತಮ್ಮ ನೆಚ್ಚಿನ ತಾರೆಗಳ ಹೆಸರಿನಲ್ಲಿ ಮಂದಿರ ಕಟ್ಟುವ ಪರಿಪಾಠ ತಮಿಳುನಾಡಿನಲ್ಲಿ ಬಹಳ ಹಿಂದಿನಿಂದಲೂ ಬೆಳೆದುಕೊಂಡು ಬಂದಿದೆ. ಎಲ್ಲರೂ ತಮ್ಮ ನೆಚ್ಚಿನ ತಾರೆಗಳನ್ನು ಹೃದಯವೆಂಬ ಮಂದಿರದಲ್ಲಿ ಆರಾಧಿಸಿದರೆ, ತಮಿಳರು ಮಾತ್ರ ಮಂದಿರ ಕಟ್ಟಿ ಆರಾಧಿಸುವಷ್ಟು ಅಭಿಮಾನ ತೋರುತ್ತಾರೆ.
ಇದುವರೆಗೂ ನಟಿ ಖುಷ್ಬೂ ಹಾಗೂ ನಗ್ಮಾ ಅವರಿಗೆ ಮಂದಿರಗಳನ್ನು ನಿರ್ಮಿಸಿ ಪೂಜೆ, ಪುನಸ್ಕಾರ, ಅರ್ಚನೆ, ಅಷ್ಟೋತ್ತರ ಮಾಡುತ್ತಿದ್ದಾರೆ ಅಭಿಮಾನಿಗಳು. ಇದೀಗ ನಟಿ ನಯನತಾರಾ ಅವರಿಗೂ ಮಂದಿರ ನಿರ್ಮಿಸಲು ಹೊರಟಿದ್ದಾರೆ ಅವರ ಅಭಿಮಾನಿಗಳು.
ಆದರೆ ಅಭಿಮಾನಿಗಳ ಆಸೆಗೆ ನಯನತಾರಾ ತಣ್ಣೀರೆರಚಿದ್ದಾರೆ. ನಿಮ್ಮೆಲ್ಲರ ಪ್ರೀತಿ ಅಭಿಮಾನಕ್ಕೆ ಚಿರಋಣಿಯಾಗಿದ್ದೇನೆ. ನನ್ನನ್ನು ನೀವೆಲ್ಲಾ ದೇವತೆಯಂತೆ ಆರಾಧಿಸುವುದು ಬೇಡ ಎಂದು ನಯವಾಗಿ ನಿರಾಕರಿಸಿದ್ದಾರೆ. ಸದ್ಯಕ್ಕೆ ಅಭಿಮಾನಿಗಳು ಸೈಲೆಂಟ್ ಆಗಿದ್ದಾರೆ.
ಅನುಭಾವಿ, ಸಮಾಜ ಸುಧಾರಕ, ಧಾರ್ಮಿಕ ಮುಖಂಡ, ಕ್ರಾಂತಿಕಾರ, ಕಾಯಕನಿಷ್ಠ ಬಸವಣ್ಣನವರು 12ನೇ ಶತಮಾನದಲ್ಲೇ ಹೇಳಲಿಲ್ಲವೇ, "ಉಳ್ಳವರು ಶಿವಾಲಯ ಮಾಡುವರು ನಾನೆನು ಮಾಡಲಿ ಬಡವನೆಯ್ಯಾ ಎನ್ನ ಕಾಲೇ ಕಂಬ ದೇಹವೇ ದೇಗುಲ ಶಿರಹೊನ್ನ ಕಳಸವಯ್ಯ ಸ್ಥಾವರಕಳಿವುಂಟು ಜಂಗಮಕ್ಕಳಿವಿಲ್ಲ".