twitter
    For Quick Alerts
    ALLOW NOTIFICATIONS  
    For Daily Alerts

    ಕೊಡಗು ಮತ್ತು ಕೇರಳ ಜನತೆಗೆ ನೆರವಾದ ಕನ್ನಡ ಫಿಲ್ಮ್ ಚೇಂಬರ್

    By Bharath Kumar
    |

    ಕೊಡಗು ಮತ್ತು ಕೇರಳದಲ್ಲಿ ಉಂಟಾದ ಪ್ರವಾಹದಿಂದ ಸಂಕಷ್ಟಕ್ಕೆ ಸಿಲುಕಿರುವ ಜನರಿಗೆ ಕನ್ನಡ ಚಿತ್ರರಂಗ ಸಹಾಯ ಹಸ್ತ ಚಾಚಿದೆ.

    ಈಗಾಗಲೇ ನಟ ಶಿವರಾಜ್ ಕುಮಾರ್ ಕೊಡಗಿಗೆ 10 ಲಕ್ಷ, ಪ್ರಕಾಶ್ ರೈ 5 ಲಕ್ಷ, ಪುನೀತ್ ರಾಜ್ ಕುಮಾರ್ ಕೇರಳಗೆ 5 ಲಕ್ಷ ನೀಡಿ ನೆರವಾಗಿದ್ದಾರೆ. ಅದರ ಜೊತೆಗೆ ದರ್ಶನ್, ಸುದೀಪ್, ಗಣೇಶ್, ಯಶ್ ಅಭಿಮಾನಿಗಳು ಅಗತ್ಯ ವಸ್ತುಗಳನ್ನ ಪೂರೈಸಿ ಮಿಡಿದಿದ್ದಾರೆ.

    ಇದೀಗ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ, ಕೊಡಗು ಹಾಗೂ ಕೇರಳ ಜನರ ಪುನರ್ವಸತಿ ನಿರ್ಮಾಣಕ್ಕಾಗಿ ಹಣದ ನೆರವು ನೀಡಿದೆ.

    ಸಿ.ಎಂ ಪರಿಹಾರ ನಿಧಿಗೆ 10 ಲಕ್ಷ ರೂಪಾಯಿ ನೀಡಿದ ನಟ ಶಿವರಾಜ್ ಕುಮಾರ್ಸಿ.ಎಂ ಪರಿಹಾರ ನಿಧಿಗೆ 10 ಲಕ್ಷ ರೂಪಾಯಿ ನೀಡಿದ ನಟ ಶಿವರಾಜ್ ಕುಮಾರ್

    ಕೊಡಗು ಜನತೆಗಾಗಿ ಕರ್ನಾಟಕ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 20 ಲಕ್ಷ ಹಾಗೂ ಕೇರಳ ಪ್ರವಾಹ ಪೀಡಿತರ ನಿಧಿಗೆ 5 ಲಕ್ಷ ಹಣ ನೀಡುವ ಮೂಲಕ ಸ್ಯಾಂಡಲ್ ವುಡ್ ಫಿಲ್ಮ್ ಚೇಂಬರ್ ಕಂಬನಿ ಮಿಡಿದಿದೆ.

    film chamber has given Rs 20 lakhs to help Kodagu

    ಕೊಡಗಿನ ಮಕ್ಕಳಿಗೆ ಹೃದಯಪೂರ್ವಕವಾಗಿ ನೆರವಾದ ಕನ್ನಡ ಸಿನಿತಾರೆಯರು ಕೊಡಗಿನ ಮಕ್ಕಳಿಗೆ ಹೃದಯಪೂರ್ವಕವಾಗಿ ನೆರವಾದ ಕನ್ನಡ ಸಿನಿತಾರೆಯರು

    ಈ ಬಗ್ಗೆ ವಾಣಿಜ್ಯ ಮಂಡಳಿಯಲ್ಲಿಂದು ಸಭೆ ಸೇರಿದ್ದ ವಾಣಿಜ್ಯ ಮಂಡಳಿಯ ಸದಸ್ಯರು ಈ ನಿರ್ಧಾರವನ್ನ ಘೋಷಿಸಿದ್ದಾರೆ. ಫಿಲ್ಮ್ ಚೇಂಬರ್ ಅಧ್ಯಕ್ಷ ಚಿನ್ನೆಗೌಡ್ರು, ನಿರ್ಮಾಪಕ ಕೆ ಮಂಜು, ರಾಕ್ ಲೈನ್ ವೆಂಕಟೇಶ್, ಕರಿಸುಬ್ಬು ಸೇರಿದಂತೆ ಪದಾದಿಕಾರಿಗಳು ಭಾಗಿಯಾಗಿದ್ದರು.

    English summary
    Karnataka film chamber of commerce has given Rs 20 lakhs to CM of Karnataka to help Kodagu and Rs 5 Lakhs for Kerala flood.
    Tuesday, August 21, 2018, 17:22
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X