Don't Miss!
- News ಉಕ್ರೇನ್ ವಿರುದ್ಧ ರಷ್ಯಾ ಗಂಭೀರ ಆರೋಪ!
- Lifestyle ಯೇಸುವನ್ನು ಶಿಲುಬೆಗೆ ಹಾಕಿದ ದಿನವನ್ನು ಗುಡ್ ಪ್ರೈಡೇ ಎಂದು ಹೇಳುವುದೇಕೆ?
- Sports RR vs DC: ಅವೇಶ್ ಖಾನ್, ರಿಯಾನ್ ಪರಾಗ್ ಶೈನ್; ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ವಿನ್
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮೈಸೂರಿನಲ್ಲಿ ನಿರ್ಮಾಣವಾಗಲಿದೆ ಕೋಟ್ಯಂತರ ವೆಚ್ಚದ ಬೃಹತ್ ಫಿಲಂ ಸಿಟಿ
ಕನ್ನಡ ಸಿನಿಮಾರಂಗದವರ ಬಹುವರ್ಷಗಳ ಕನಸು, ರಾಜ್ಯದಲ್ಲಿ ಒಂದು ಸಕಲ ಸೌಲಭ್ಯವುಳ್ಳ ಫಿಲಂ ಸಿಟಿ ನಿರ್ಮಾಣಗೊಳ್ಳಬೇಕು ಎಂಬುದು. ಅದೀಗ ನನಸಾಗುವ ಹಾದಿಯಲ್ಲಿದೆ.
ರಾಜ್ಯದ ಫಿಲಂ ಸಿಟಿ ಮೈಸೂರಿನ ಬಳಿ ನಿರ್ಮಾಣವಾಗಲಿದ್ದು, ಬೃಹತ್ ಫಿಲಂ ಸಿಟಿ ನಿರ್ಮಾಣಕ್ಕೆ ಸರ್ಕಾರವು 110.8 ಎಕರೆ ಜಾಗವನ್ನು ಸಹ ಮಂಜೂರು ಮಾಡಿದೆ.
ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕಿನ ಹಿಮ್ಮಾವು ಗ್ರಾಮದ ಬಳಿ ಸರ್ಕಾರವು 110.8 ಎಕರೆ ಜಾಗವನ್ನು ಫಿಲಂ ಸಿಟಿಗಾಗಿ ನೀಡಿದೆ. ಇದೇ ಜಾಗದಲ್ಲಿ 500 ಕೋಟಿ ರು ವೆಚ್ಚದಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ಫಿಲಂ ಸಿಟಿ ನಿರ್ಮಾಣ ಮಾಡಲಿದೆ ಸರ್ಕಾರ.
ಜೆಡಿಎಸ್ನ ಸಂದೇಶ್ ನಾಗರಾಜ್ ಅವರು ಪರಿಷತ್ನಲ್ಲಿ 'ಫಿಲಂ ಸಿಟಿ' ಬಗ್ಗೆ ಸರ್ಕಾರಕ್ಕೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಸಿಸಿ.ಪಾಟೀಲ್, 'ಕಳೆದ ಬಜೆಟ್ನಲ್ಲಿಯೇ ಸಿಎಂ ಅವರು ಫಿಲಂ ಸಿಟಿ ನಿರ್ಮಾಣಕ್ಕೆ 500 ಕೋಟಿ ಹಣವನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿದ್ದರು. ಆದರೆ ಸೂಕ್ತ ಜಾಗ ದೊರಕಿರಲಿಲ್ಲ' ಎಂದರು.
'ಅಂತರಾಷ್ಟ್ರೀಯ ಮಟ್ಟದ ಫಿಲಂ ಸಿಟಿಯನ್ನು ಖಾಸಗಿ ಸಹಭಾಗಿತ್ವದಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಈ ಮೊದಲು ಫಿಲಂ ಸಿಟಿ ನಿರ್ಮಾಣ ಕಾರ್ಯವನ್ನು ಪ್ರವಾಸೋದ್ಯಮ ಇಲಾಖೆಗೆ ವಹಿಸಲಾಗಿತ್ತು. ಆ ಇಲಾಖೆಯಿಂದ ಜವಾಬ್ದಾರಿಯನ್ನು ವಾರ್ತಾ ಮತ್ತು ಪ್ರಸಾರ ಇಲಾಖೆಗೆ ವರ್ಗಾಯಿಸಲಾಗಿದೆ ಎಂದರು ಸಚಿವರು.
ಕನ್ನಡ ಸಿನಿಮಾದವರು ಸಿನಿಮಾದ ಪೋಸ್ಟ್ ಪ್ರಡೊಕ್ಷನ್ ಮಾತ್ರವೇ ಅಲ್ಲದೆ ಬೃಹತ್ ಸೆಟ್, ಒಳಾಂಗಣ ಚಿತ್ರೀಕರಣಕ್ಕೆಲ್ಲಾ ರಾಮೋಜಿ ರಾವ್ ಫಿಲಂ ಸಿಟಿ ಗೆ ಹೋಗಬೇಕಾದ ಪರಿಸ್ಥಿತಿ ಇದೆ ಹಾಗಾಗಿ ನಮ್ಮದೇ ಆದ ಫಿಲಂ ಸಿಟಿ ನಿರ್ಮಾಣವಾಗಬೇಕು ಎಂಬುದು ಬಹುವರ್ಷಗಳ ಆಗ್ರಹ.
Recommended Video
ಈ ಹಿಂದೆ ಬೆಂಗಳೂರಿನ ಸಮೀಪವೇ ಫಿಲಂ ಸಿಟಿ ನಿರ್ಮಾಣವಾಗಲಿದೆ ಎನ್ನಲಾಗಿತ್ತು. ಆದರೆ ಇದೀಗ ಮೈಸೂರಿನಲ್ಲಿ ಸ್ಥಳ ಸಹ ಮಂಜೂರು ಆಗಿರುವ ಕಾರಣ ಮೈಸೂರಿನಲ್ಲಿಯೇ ಫಿಲಂ ಸಿಟಿ ನಿರ್ಮಾಣವಾಗಲಿದೆ ಎಂಬುದು ಪಕ್ಕಾ ಆಗಿದೆ.