Don't Miss!
- News ಉಕ್ರೇನ್ ವಿರುದ್ಧ ರಷ್ಯಾ ಗಂಭೀರ ಆರೋಪ!
- Lifestyle ಯೇಸುವನ್ನು ಶಿಲುಬೆಗೆ ಹಾಕಿದ ದಿನವನ್ನು ಗುಡ್ ಪ್ರೈಡೇ ಎಂದು ಹೇಳುವುದೇಕೆ?
- Sports RR vs DC: ಅವೇಶ್ ಖಾನ್, ರಿಯಾನ್ ಪರಾಗ್ ಶೈನ್; ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ವಿನ್
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕಾರಿನಲ್ಲಿ ಮಾಸ್ಕ್ ಇಲ್ಲದೆ ಕಿಡಕಿ ಹಾಕೊಂಡು ಹೋದ್ರೆ ಪಬ್ಲಿಕ್ ನ್ಯೂಸೆನ್ಸ್?
ಕೊರೊನಾ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಸಾರ್ವಜನಿಕ ಸ್ಥಳದಲ್ಲಿ ಮಾಸ್ಕ್ ಧರಿಸುವುದು ಕಡ್ಡಾಯ ಹಾಗು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕಿರುವುದು ಕಡ್ಡಾಯ ಎಂದು ಸರ್ಕಾರ ಸ್ಪಷ್ಟವಾಗಿದೆ ಆದೇಶಿಸಿದೆ.
ಆದರೆ, ಸ್ವಂತ ಕಾರಿನಲ್ಲಿ ಕಿಡಕಿ ಮುಚ್ಚಿಕೊಂಡು ಹೋಗುತ್ತಿರುವ ವೇಳೆಯೂ ಮಾಸ್ಕ್ ಧರಿಸಬೇಕು ಎನ್ನುವುದು ಎಷ್ಟು ಸರಿ ಎಂಬ ವಾದ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ. ಕಾರಿನಲ್ಲಿ ಹೋಗುವಾಗ ಸಾರ್ವಜನಿಕರಿಗೆ ತೊಂದರೆ ಹೇಗೆ ಆಗುತ್ತದೆ ಎಂಬ ಪ್ರಶ್ನೆಯೂ ಕಾಡುತ್ತಿದೆ.
ವರಲಕ್ಷ್ಮಿ ಶರತ್ಕುಮಾರ್ ಪ್ರಯತ್ನಕ್ಕೆ ಶುಭಕೋರಿದ ಕಿಚ್ಚ ಸುದೀಪ್
ಸರ್ಕಾರದ ಇಂತಹ ಕ್ರಮದ ವಿರುದ್ಧ ನಿರ್ದೇಶಕ ರಘುರಾಮ್ ಧ್ವನಿ ಎತ್ತಿದ್ದಾರೆ. ನಿರ್ದೇಶಕ ಚಿ ಗುರುದತ್ ಮತ್ತು ಅವರ ಚಾಲಕ ಗುಟ್ಟಹಳ್ಳಿ ಮಾರ್ಗವಾಗಿ ಕಾರಿನಲ್ಲಿ ಚಲಿಸುತ್ತಿರುವ ಅಡ್ಡಹಾಕಿದ ಪೊಲೀಸರು ಮಾಸ್ಕ್ ಹಾಕಿಲ್ಲ, ಇದು ಪಬ್ಲಿಕ್ ನ್ಯೂಸೆನ್ಸ್ ಎಂದು ಕಾರಣ ನೀಡಿ ದಂಡ ಹಾಕಿದ್ದಾರೆ.
ಗುರುದತ್ ಅವರಿಗೆ ದಂಡ ಹಾಕಿರುವ ರಶೀದಿಯನ್ನು ಟ್ವಿಟ್ಟರ್ನಲ್ಲಿ ಹಂಚಿಕೊಂಡಿರುವ ರಘುರಾಮ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ''ಸಾರ್ವಜನಿಕ ಸ್ಥಳದಲ್ಲಿ ಮಾಸ್ಕ್ ಧರಿಸಿಲ್ಲ ಅಂದ್ರೆ ಅದು ಪಬ್ಲಿಕ್ ನ್ಯೂಸೆನ್ಸ್. ಆದರೆ, ನಮ್ಮ ಕಾರಿನಲ್ಲಿ ಕಿಡಕಿ ಹಾಕಿಕೊಂಡು ಹೋಗುವಾಗ ಮಾಸ್ಕ್ ಧರಿಸಿಲ್ಲ ಅಂದ್ರೆ ಅದು ಹೇಗೆ ಪಬ್ಲಿಕ್ ನ್ಯೂಸೆನ್ಸ್ ಆಗುತ್ತೆ ಎಂದು ಪ್ರಶ್ನಿಸಿದ್ದಾರೆ.
ರಘುರಾಮ್ ವಾದಕ್ಕೆ ನೆಟ್ಟಿಗರು ಸಹ ಬೆಂಬಲ ವ್ಯಕ್ತಪಡಿಸಿದ್ದಾರೆ. ಜನರಿಗೆ ಒಳ್ಳೆಯದಾಗಲಿ ಎಂಬ ಉದ್ದೇಶಕ್ಕೆ ಇಂತಹದೊಂದು ಕಾನೂನು ತಂದಿದ್ದರೆ ಅದೇ ಬೆಲೆಯಲ್ಲಿ ಮಾಸ್ಕ್ ನೀಡುತ್ತಿದ್ದರು. ಆದ್ರೆ, ದುಡ್ಡು ಮಾಡಬೇಕು ಎಂದೇ ಜಾರಿ ಮಾಡಿರುವ ನಿಯಮ. ಅದಕ್ಕೆ ಕಾರಿನಲ್ಲಿ ಕಿಡಕಿ ಹಾಕ್ಕೊಂಡು ಹೋಗುವ ಚಾಲಕ ಸಹ ಮಾಸ್ಕ್ ಧರಿಸಬೇಕು ಎಂದು ಟೀಕಿಸಿದ್ದಾರೆ.
Recommended Video
ನಗರದಲ್ಲಿ ಇಂತಹ ಘಟನೆಗಳು ಹೆಚ್ಚು ಹೆಚ್ಚು ವರದಿಯಾಗುತ್ತಿದೆ. ಸೋಶಿಯಲ್ ಮೀಡಿಯಾದಲ್ಲೂ ಕೆಲವು ಘಟನೆಗಳು ವೈರಲ್ ಆಗಿದ್ದವು. ಆದರೆ, ಬಿಬಿಎಂಪಿ ಆಗಲಿ ಅಥವಾ ರಾಜ್ಯ ಸರ್ಕಾರ ಆಗಲಿ ಈ ಬಗ್ಗೆ ಯಾವುದೇ ಸ್ಪಷ್ಟನೆ ಅಥವಾ ಮರು ಪರಿಶೀಲನೆ ಮಾಡುತ್ತಿಲ್ಲ ಎನ್ನುವುದು ಬೇಸರದ ಸಂಗತಿ.